ಕನಕಪುರರಸ್ತೆಯ ಅಗರದ ಹೊಸಪಾಳ್ಯದಲ್ಲಿರುವ ಶ್ರೀತುಳಸಿಮಠದ 13ನೇ ವಾರ್ಷಿಕೋತ್ಸವದ ಅಂಗವಾಗಿ ಮುಳಬಾಗಿಲು ಶ್ರೀಪಾದರಾಜದಮಠದ ಪೀಠಾಧಿಪತಿ ಶ್ರೀ ಶ್ರೀಸುಜಯ ನಿಧಿ ತೀರ್ಥರು ಆಗಮಿಸಿ ಆಶೀರ್ವಾದಿಸಿ ಫಲಮಂತ್ರಕ್ಷತೆಯನ್ನು ಭಕ್ತರಿಗೆ ನೀಡಿದರು, ತುಳಸಿಮಠದ ಸಂಸ್ಥಾಪಕ ಶ್ರೀಧರ್ ಮತ್ತು ಮಠದ ಆಡಳಿತ ಮಂಡಳಿಯವರು ಶ್ರೀಸುಜಯನಿಧಿ ತೀರ್ಥರಿಗೆ ಪೂರ್ಣಕುಂಭ ಸ್ವಾಗತ ವನ್ನು ನೀಡಿ ಬರಮಾಡಿಕೊಂಡರು,
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಅಧ್ಯಕ್ಷ ಮುರಲೀಧರ್, ಸಂಘಟನಾ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಮುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




0 Comments