ಜೈನ್ ಮಿಲನ್ ಬಾಣಸವಾಡಿ ಸಂಯುಕ್ತವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಸಾಹಿತ್ಯದ ಕೊಡುಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಸಭೆಯ ಘನ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಮತ್ತು ಸಂಶೋಧಕರು ಡಾ. ಎಂ. ಎ ಜಯಚಂದ್ರ ವಹಿಸಿದ್ದರು. ಎಂ. ಪ್ರಕಾಶಮೂರ್ತಿ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತುಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಸಾಹಿತ್ಯದ ಕೊಡುಗೆ ಎಂಬ ವಿಷಯದ ಬಗ್ಗೆ ಸಾಹಿತಿಗಳಾದ ಎಸ್ ಎಸ್ ಪಡಶೆಟ್ಟಿ ಜಿಎಸ್ ವಸಂತಮಾಲ ಶ್ರೀ ರಾo. ಕೆ ಹನುಮಂತಯ್ಯ, ಪಾ.ಮುರಳಿಧರ ಮಾತನಾಡಿದರು.
ಜೈನ್ ಮಿಲನದ ಅಧ್ಯಕ್ಷರಾದ ಶ್ರೀ ಚಂದ್ರಪ್ರಕಾಶ್ ಸರ್ವರನ್ನು ಸ್ವಾಗತಿಸಿದರು. ಕಸಾಪ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಶ್ರೀ ವರ್ಧಮಾನ ಕಳಸೂರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಸನ್ಮತಿ ಬಳಗದ ಮಹಿಳೆಯರಿಂದ ಪ್ರಸಿದ್ಧ ಜೈನ ಮಹಿಳೆಯರು ಎಂಬ ಕಿರುರೂಪಕನಡೆಯಿತು..ಶ್ರೀಮತಿ ಸುಜಾತ ಬನ್ನಿಕೊಪ್ಪ ಯಿವರಿಂದ ಜನಪದ ಗೀತೆಗಳು , ಡಾ. ಪ್ರಿಯಾಂಕ ರವರಿಂದ ಟಿ.ಪಿ ಕೈಲಾಸಂ ಗಾಯನಗಳ ಕಾರ್ಯಕ್ರಮ ನೆರವೇರಿತು.
.jpeg)
.jpeg)
.jpeg)
0 Comments