Ticker

6/recent/ticker-posts

Ad Code

Responsive Advertisement

ವಿದೇಶದಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ಕಸಾಪದ್ದು: ನಾಡೋಜ ಡಾ. ಮಹೇಶ ಜೋಶಿ

ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಉಳಿಯಬೇಕಿದೆ. ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರಕಿಸುವ ಮೂಲಕ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಬೇಕಿದೆ. ಕನ್ನಡಕ್ಕೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಸಿಗುವುದಕ್ಕೆ ಪರಿಶ್ರಮ ಪಡಬೇಕಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಗಣ್ಯರು ವಿದೇಶದಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸಿ ಅವರಲ್ಲಿ ಇರುವ ಕನ್ನಡಾಭಿಮಾವನ್ನು ಗೌರವಿಸುವ ಮೂಲಕ ತನ್ನ ತಾಯಿನಾಡಿನ ಮೇಲೆ ಹೆಚ್ಚಿನ ಗೌರವ ಬರುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳು ಮೂಲಕ ಜನಸಾಮಾನ್ಯರ ಪರಿಷತನ್ನಾಗಿಸು ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಅದರ ಪರಿಣಾಮವಾಗಿಯೇ ಇದೇ ಮೊದಲ ಬಾರಿಗೆ ವಿದೇಶ ಘಟಕಗಳನ್ನು ರೂಪಿಸಲು ಮುಂದಾಗಿರುವುದು. ಪರಿಷತ್ತಿನ ಈ ಕನಸನ್ನು ನನಸು ಮಾಡಲು ವಿದೇಶದಲ್ಲಿರುವ ಕನ್ನಡಿಗರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವಂತೆ ಮಾಡಲಾಗುವುದು. ಅದಕ್ಕೆ ಬೇಕಾದ ಸುಸಜ್ಜಿತ ಆ್ಯಪ್ ಸಿದ್ಧಪಡಿಸಲಾಗಿದ್ದು, ಆ್ಯಪ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲುತೆರೆಯಲು ಇರುವ ಸವಾಲುಗಳನ್ನು ಬಗೆಹರಿಸುವುದು ಮತ್ತು ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡಲು, ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ
ಸಿಗಲು 
ಕಾರ್ಯನಿರ್ವಹಿಸಬೇಕಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದೇಶದಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸಿ ಅವರಲ್ಲಿ ಇರುವ ಕನ್ನಡಾಭಿಮಾವನ್ನು ಗೌರವಿಸುವ ಮೂಲಕ ತನ್ನ ತಾಯಿನಾಡಿನ ಮೇಲೆ ಹೆಚ್ಚಿನ ಗೌರವ ಬರುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿರು ಕ್ರಮವನ್ನು ಸ್ವಾಗತಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕದ ಸಲಹಾ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಏರ್‌ ಡೆಕನ್‌ ಸಂಸ್ಥಾಪಕ ಕ್ಯಾ. ಗೋಪಿನಾಥ್‌, ಹಿರಿಯ ವೈದ್ಯರಾದ ಡಾ. ಶರಣ ಪಾಟೀಲ,ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹರಿ ಮಾರನ್‌ ಸೇರಿದಂತೆ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡ ಬಲ್ಲ ವಿದೇಶಿ ರಾಯಭಾರಿ ಕಚೇರಿಯ ಆನರರಿ ಕೌನ್ಸಿಲರ್‌ಗಳು ಒಪ್ಪಿಕೊಂಡಿರುತ್ತಾರೆ ಎಂದು ನಾಡೋಜ ಜೋಶಿ ತಿಳಿಸಿದ್ದರು.
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳು ಮೂಲಕ ಜನಸಾಮಾನ್ಯರ ಪರಿಷತನ್ನಾಗಿಸು ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಅದರ ಫಲವಾಗಿಯೇ ಇದೇ ಮೊದಲ ಬಾರಿಗೆ ವಿದೇಶ ಘಟಕಗಳನ್ನು ರೂಪಿಸಲು ಮುಂದಾಗಿರುವುದು. ಪರಿಷತ್ತಿನ ಈ ಕನಸನ್ನು ನನಸು ಮಾಡಲು ವಿದೇಶದಲ್ಲಿರುವ ಕನ್ನಡಿಗರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶದಲ್ಲಿ ಇರುವ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವಂತೆ ಮಾಡಲಾಗುವುದು. ಅದಕ್ಕೆ ಬೇಕಾದ ಸುಸಜ್ಜಿತ ಆ್ಯಪ್ ಸಿದ್ಧಪಡಿಸಲಾಗಿದೆ. ಆ್ಯಪ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.  ಹಾವೇರಿಯಲ್ಲಿ ಹಮ್ಮಿಕೊಂಡಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ʻಕರ್ನಾಟಕ ಹಾಗೂ ವಿದೇಶಗಳ ಸಂಬಂಧʼ ಕುರಿತ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಗೋಷ್ಠಿಯಲ್ಲಿ  ವಿದೇಶದಲ್ಲಿರುವ ಕನ್ನಡಿಗರು ಸೇರಿದಂತೆ ವಿಷಯ ತಜ್ಞರನ್ನು ಒಳಗೊಳಿಸಲು ಪರಿಷತ್ತು ಚಿಂತನೆ ನಡೆಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement