ಬಳ್ಳಾರಿ ಜುಲೈ 06. ಬಳ್ಳಾರಿ ನಗರ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಪ್ರಯುಕ್ತ 1ನೇ ವಾರ್ಡ್ನ ಈಶ್ವರ ದೇವಸ್ಥಾನದ ಹತ್ತಿರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಾರ್ಡ್ ಕಾಪೆರ್ರೇಟರ್ ಹನುಮಂತ ಗುಡಿಗಂಟಿ. ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ.ರಾಮಾಂಜಿನಿ,ಸುನಿಲ್ ರೆಡ್ಡಿ,ಮಾಜಿ ಮೇಯರ್ ಕೆ.ಹನುಮಂತಪ್ಪ,ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್,ಯುವ ಮೋರ್ಚ ಅಧ್ಯಕ್ಷರಾದ ಅರುಣ್, ಬಾಲಚಂದ್ರ, ಎಸ್.ಟಿ ಮೋರ್ಚ ಅಧ್ಯಕ್ಷರಾದ ವೀರೆಶ್, ಎಸ್.ಸಿ ಮೋರ್ಚ .ಓಬಿಸಿ ಮೋರ್ಚ ಅಧ್ಯಕ್ಷರಾದ ಸಂದೀಪ್,ಉಪಾಧ್ಯಕ್ಷರಾದ ಷಣ್ಮುಖ ಮತ್ತಿತರರು ಉಪಸ್ಥಿತರಿದ್ದರು.

0 Comments