ಬಳ್ಳಾರಿ ಜುಲೈ 06. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಸ್ವತಂತ್ರ ಭಾರತದ ಮಹಾಚೇತನ, ರಾಷ್ಟ್ರೀಯತೆಯ ಹರಿಕಾರ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸ್ಮರಣೆಯ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮಾಜಿ ಉಪ ಪ್ರಧಾನಿ, ಸಾಮಾಜಿಕ ಬದಲಾವಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ ಪುಣ್ಯತಿಥಿಯನ್ನು ಸಿರುಗುಪ್ಪ ತಾ.ಮಂಡಲದ ಭಾ.ಜ.ಪಾ ಕಛೇರಿಯಲ್ಲಿ ಆಚರಿಸಲಾಯಿತು.
ಮಂಡಲ ಅಧ್ಯಕ್ಷರಾದ R.C ಪಂಪನಗೌಡ, ತಾ. ಯುವಮೋರ್ಚಾ ಅಧ್ಯಕ್ಷರಾದ ಎಂ.ಎಸ್.ಸಿದ್ದಪ್ಪ , ಹಿರಿಯರಾದ ದಮ್ಮೂರು ಸೋಮಪ್ಪ, ಚಾಗಿ ಸುಬ್ಬಯ್ಯ, ಮೆಕೇಲಿ ವೀರೇಶ, ಉಡೇಗೋಳ ಖಾಜಸಾಬ್, ಶಿವರೆಡ್ಡಿ ಗೌಡ ಹಾಗೂ ದಾಸಪುರ ಮಂಜಪ್ಪ, ದೇವು ನಾಯಕ್ ನಡವಿ ಭಾರತೀಯ ಜನತಾ ಪಾರ್ಟಿ ಮಾಧ್ಯಮ ಸಂಚಾಲಕರು ಸಿರುಗುಪ್ಪ ಮಂಡಲ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

0 Comments