ಬೆಂಗಳೂರಿನ ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಭವ್ಯ ಕಟ್ಟಡದ ನಿಧಿಗಾಗಿ ಜುಲೈ 9, ಶನಿವಾರದಂದು ಏರ್ಪಡಿಸಿದ್ದ ದಾಸವಾಣಿ ಕಾರ್ಯಕ್ರಮದಲ್ಲಿ, ಕು|| ಭೂಮಿಕಾ ಎಸ್. ಮೊದಲಿಗೆ "ಶರಣು ಸಿದ್ಧಿವಿನಾಯಕ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, "ರಾಯ ಬಾರೋ ರಾಘವೇಂದ್ರ ಬಾರೋ", "ದಾಸನಾಗಬೇಕು", "ಘಟಿಕಾಚಲದಿ ನಿಂತ ಶ್ರೀ ಹನುಮಂತ", "ನಿಲ್ಲೆ ನಿಲ್ಲೆ ಕೊಲ್ಹಾಪುರ ದೇವಿ", "ನಂದತನಯ ಗೋವಿಂದ ಮಿಠಾಯಿ", "ಪಿಳ್ಳಂಗೋವಿಯ ಚೆಲ್ವ ಕೃಷ್ಣನ", "ಕುಣಿದಾಡೋ ಕೃಷ್ಣ", "ತಾತ್ತ ಧಿಮಿತ", ದಾಸನೆನಿಸೋ ನಿನ್ನ", "ಆಡಪೋಗೋಣ ಬಾರೋ", "ಏಸು ಕಾಯಂಗಳ ಕಳೆದು" ಹೀಗೆ ಇನ್ನಷ್ಟು ಹಲಾವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

0 Comments