Ticker

6/recent/ticker-posts

Ad Code

Responsive Advertisement

" ಭಜನ - ಪ್ರವಚನ - ಸಂಕೀರ್ತನ "

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರು ಶ್ರೀ ಕಾಶೀ ಮಠ, ಮಲ್ಲೇಶ್ವರಂ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 12 ರಿಂದ 15 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :

ಜುಲೈ 12, ಮಂಗಳವಾರ-ಸಂಜೆ 6 ಗಂಟೆಗೆ : ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘ ದ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ "ಭಾಗವತದಲ್ಲಿ ಶ್ರೀಕೃಷ್ಣನ ಮಹಿಮೆ" ಈ ವಿಷಯವಾಗಿ ಧಾರ್ಮಿಕ ಪ್ರವಚನ.

ಜುಲೈ 13, ಬುಧವಾರ- ಸಂಜೆ 6 ಗಂಟೆಗೆ : ಚಿಕ್ಕಲ್ಲಸಂದ್ರದ ಶ್ರೀ ಸರಸ್ವತಿ ಗಾನ ಮಂಡಲಿಯ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ ಧಾರ್ಮಿಕ ಪ್ರವಚನ.

ಜುಲೈ 14, ಗುರುವಾರ- ಸಂಜೆ 6-30ಕ್ಕೆ : ಶ್ರೀಮತಿ ಮಾನಸಾ ಕುಲಕರ್ಣಿ ಇವರಿಂದ "ಹರಿನಾಮ ಸಂಕೀರ್ತನೆ". 


ವಾದ್ಯ ಸಹಕಾರ :  ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).

ಜುಲೈ 15, ಶುಕ್ರವಾರ- ಸಂಜೆ 6-00 ಗಂಟೆಗೆ : ವಿದ್ಯಾರಣ್ಯಪುರದ ಶ್ರೀ ಹನುಮಾನ್ ಕೀ ಜೈ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ ಧಾರ್ಮಿಕ ಪ್ರವಚನ. ಸ್ಥಳ : ಬೆಂಗಳೂರು ಶ್ರೀ ಕಾಶಿ ಮಠ, 8ನೇ ಮುಖ್ಯರಸ್ತೆ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003

 ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement