ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ, ಜುಲೈ 3, ಭಾನುವಾರ ಸಂಜೆ 6 ಗಂಟೆಗೆ ಜೆ ಸಿ ರಸ್ತೆಯಲ್ಲಿ ನಯನ ರಂಗಮಂದಿರದಲ್ಲಿ, ವಿ|| ಶ್ರೀಮತಿ ಸೀತಾ ಗುರುಪ್ರಸಾದ್ ಇವರ ಶಿಷ್ಯೆಯರಾದ ಕು|| ನಿಧಿ ಎ ಭಕ್ತನ್ ಮತ್ತು ಕು|| ಸಂವೃತ ಕಿಶೋರ್ ಇವರಿಂದ "ಭರತನಾಟ್ಯ", ಕು|| ಶ್ರಾವಣಿ ಕುಲಕರ್ಣಿ ಮತ್ತು ಅಶ್ವಿನಿ ನಂಬಿಯಾರ್ ಇವರಿಂದ "ಕೂಚಿಪುಡಿ" ನೃತ್ಯ ಪ್ರದರ್ಶನ ಇರುತ್ತದೆ. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಸಂಕರ್ಷಣ ಅಕಾಡೆಮಿಯ ಕಲಾತ್ಮಕ ನಿರ್ದೇಶಕರಾದ ಡಾ|| ಸುಮನ ರಂಜಾಳ್ಕರ್ ಆಗಮಿಸುವರು.
ಇದೇ ಸಂದರ್ಭದಲ್ಲಿ ಭರತಾಂಜಲಿ ನಾಟ್ಯ ಶಾಲೆಯ ಕಲಾತ್ಮಕ ನಿರ್ದೇಶಕರಾದ ವಿ|| ಶ್ರೀಮತಿ ಸೀತಾ ಗುರುಪ್ರಸಾದ್ ಅವರಿಗೆ "ಊರ್ಮಿಕ ಪ್ರಶಸ್ತಿ" ಪ್ರದಾನ ಮಾಡಿ, ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಉತ್ಸವ ನಿರ್ದೇಶಕರಾದ ವಿ|| ಶ್ರೀಮತಿ ಧರಣಿ ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.





0 Comments