ಬಳ್ಳಾರಿ ಜೂನ್ 02. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಅಂತರಾಷ್ಟ್ರಿಯ ಜೀವ ವೈವಿದ್ಯತೆ ದಿನದ ಅಂಗವಾಗಿ ಹಾಗೂ ಅಂತರಾಷ್ಟ್ರಿಯ ತಂಬಾಕು ರಹಿತ ದಿನದ ಅಂಗವಾಗಿ ದಿನಾಂಕ 01.06.2022 ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶುದ್ದ ವಿಜ್ಞಾನ ನಿಕಾಯದ ಡಿನರಾದ ಪ್ರೋ. ವಿಜಯಕುಮಾರ ಮಲಶೆಟ್ಟಿ ರವರು ಮಾತನಾಡುತ್ತ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಲು ಹಾಗೂ ಪರಿಸರ ಸಂರಕ್ಷಣೆಯಿಂದ ನಮ್ಮ ಮತ್ತು ನಮ್ಮ ಮುಂದಿನ ಪಿಳಿಗೆಯ ಸಂರಕ್ಷಣೆ ಸಾದ್ಯ.
ಪರಿಸರ ಸಂರಕ್ಷಣೆಯ ಕ್ರಮಗಳು ಸರ್ಕಾರದಿಂದ ಮಾತ್ರವಲ್ಲ ಎಲ್ಲಾ ಸಾಮಾನ್ಯ ನಾಗರಿಕರ ಪಾಲ್ಗೂಳ್ಳುವಿಕೆ ಅತ್ಯವಶ್ಯಕ. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಾಂತ ಮಜಗಿ ಮಾತನಾಡುತ್ತ ಈಗಾಗಲೇ ಭೂಮಿಯ ಮೇಲೆ ಕಂಡುಹಿಡಿದ ಅಂದಾಜು ಜೀವಿಗಳು 1.8 ಮಿಲಿಯನ್ ಮತ್ತು ಕಂಡುಹಿಡಿಯಬೇಕಾದ ಜೀವಿಗಳ ಸಂಖ್ಯೆ ಅಂದಾಜು 8-10 ಮಿಲಿಯನ್. ಎಲ್ಲ ಜೀವಿಗಳು ಉಳಿಯುವ/ಸಂರಕ್ಷಣೆಗಿಂತಲೂ ವೇಗವಾಗಿ ನಶಿಸಿ ಹೋಗುತ್ತಿವೆ. ಆದ್ದರಿಂದ ಸಸ್ಯ ಮತ್ತು ಪ್ರಾಣಿಗಳ ಜೀವ ವೈವಿದ್ಯತೆ, ಗುರುತಿಸುವಿಕೆ, ನಡವಳಿಕೆ ಆಳವಾದ ಅಧ್ಯಯನಗಳು ಇಂದಿನ ತುರ್ತು. ಡಾ. ನಾಗಭೂಷಣ ಚರಂತಿಮಠ ಇವರು ಮಾತನಾಡುತ ಮೇ 22 ಜೀವ ವೈವಿಧ್ಯತೆ ದಿನದ ಅಂಗವಾಗಿ 22 ಪರಿಸರ ಸಂರಕ್ಷಣೆಯ ಪರಿಹಾರ ಮಾರ್ಗಗಳನ್ನು ತಿಳಿಸಿಕೊಟ್ಟರು. ಸಹಾಯಕ ಪ್ರಾದ್ಯಪಕಿ ಕು. ಸ್ನೆಹಾ ಸುಮಾ ಹೆಗಡೆ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ತಬಸ್ಸಮ ಕು. ಆಫ್ರಿನ್ ಬಾಗಲಕೊಟ, ಕು. ವೀರೆಶ. ಕು. ದುರ್ಗಶ್ರೀ, ಶಿವಲೀಲಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಥಮ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.
.jpg)
0 Comments