ಬಳ್ಳಾರಿ ಜೂ.27: ಅಂಜನಾದ್ರಿ ಬೆಟ್ಟಕ್ಕೆ ಯದುವೀರ್ ದಂಪತಿ ಭೇಟಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ . ಹನುಮ ಹುಟ್ಟಿದ ಸ್ಥಳ ಎಂದು ಹೆಸರುವಾಸಿಯಾಗಿರುವ ಈ ಬೆಟ್ಟವನ್ನು ಪತ್ನಿ ತ್ರಿಶಿಕಾ ಕುಮಾರಿ ಹಾಗೂ ಕುಟುಂಬಸ್ಥರ ಜೊತೆ ಯದುವೀರ್ ಹತ್ತಿದ್ದಾರೆ . ಬಳಿಕ ಹನುಮನಿಗೆ ಯದುವೀರ್ ದಂಪತಿ ವಿಶೇಷ ಪೂಜೆ ಸಲ್ಲಿಸಿ , ಕೆಲಕಾಲ ಸಮಯ ಕಳೆದಿದ್ದಾರೆ . ಯದುವೀರ್ ಸದ್ಯ ಚಿತ್ರದುರ್ಗ , ಹಂಪಿ ಸೇರಿದಂತೆ ವಿವಿಧೆಡೆ ಪ್ರವಾಸ ಕೈಗೊಂಡಿದ್ದಾರೆ.

0 Comments