ಬಳ್ಳಾರಿ ಜೂ.21 :ತಾಲೂಕಿನ ಶ್ರೀಧರಗಡ್ಡೆಯ ಗ್ರಾಮ ಪಂಚಾಯಿತಿಯ ಪಿಡಿಓ ಸಿದ್ದಲಿಂಗಪ್ಪ 80 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ .ಬಳ್ಳಾರಿ ತಾಲೂಕಿ ಗುಡಾರ ನಗರದ ತಾ.ಪಂ. ಮಾಜಿ ಸದಸ್ಯೆ ಮಹಾಲಕ್ಷ್ಮಿ ಅವರ ಪತಿ ಜಂಭಣ್ಣ ಅವರ ಮೂಲಕ ನಾಗರ್ಜುನ ಎನ್ನುವವರಿಗೆ ಮನೆ ನಿರ್ಮಾಣದ ಲೈಸನ್ಸ್ ನೀಡಲು ಈ ಲಂಚ ಹಣ ಪಡೆಯುತ್ತಿದ್ದರು. ಬಳ್ಳಾರಿ ಎಸಿಬಿ ಅಧಿಕಾರಿಗಳು ಟ್ರಾಪ್ ಮೂಲಕ ಸಿದ್ದಲಿಂಗಪ್ಪ ಮತ್ತು ಜಂಭಣ್ಣ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
.jpg)
0 Comments