ಬಳ್ಳಾರಿ ಮೇ 31. 2019ರಲ್ಲಿ ಪ್ರಯಾಣಿಕರೊಬ್ಬರು ಚಲಿಸುವ ರೈಲು ಹತ್ತುವ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಿದಕ್ಕೆ ಬಳ್ಳಾರಿ ನಗರದ ಕೇಂದ್ರ ರೈಲ್ವೆ ರಕ್ಷಣದಳದ ಕಾನ್ ಸ್ಟೇಬಲ್ ಒಬ್ಬರಿಗೆ ಜೀವನ್ ರಕ್ಷ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದ ಕೇಂದ್ರ ರೈಲ್ವೆ ಸಚಿವರು. ಈ ವಿಚಾರ ಗಣಿನಾಡು ಬಳ್ಳಾರಿ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಶೇಷ. ಎಸ್.ಎಂ ರಫೀ ಅವರ ತಂದೆ ಶರೀಫ್ ಡಿ.ಪಿ, ತಾಯಿ ಫರ್ಮಿನ್, ವಾಸ ಶಿವಮೊಗ್ಗ ಜಿಲ್ಲೆ ಆಗರದಹಳ್ಳಿ ಗ್ರಾಮದ ನಿವಾಸಿ, ತಂದೆತಾಯಿ ಬೇಸಾಯ ಕೆಲಸ ಮಾಡ್ತಾರೆ.
ಕರ್ತವ್ಯ : 2006 ರಲ್ಲಿ ಆರ್.ಪಿ.ಎಫ್ (ರೈಲ್ವೆ ರಕ್ಷಣದಳ) ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ ಮತ್ತು ಬಳ್ಳಾರಿ ರೈಲ್ವೆ ಕೇಂದ್ರದಲ್ಲಿ ಕಾನ್ ಸ್ಟೇಬಲ್ ಆಗಿ 16 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಳ್ಳಾರಿ ರೈಲ್ವೆ ಕೇಂದ್ರದ ಕೆಲಸ ಮಾಡುತ್ತಿದ್ದಾರೆ.
ಏಕೆ ? ಈ ಜೀವನ್ ರಕ್ಷ ಪದಕ: 21.12.2019 ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರ ಹೈದರಾಬಾದ್ ರೈಲುಗಾಡಿ ಹತ್ತುವಾಗ ಬಳ್ಳಾರಿ ಕೇಂದ್ರೀಯ ವಿದ್ಯಾಲಯದ ಶಾಲೆಯ ಶಿಕ್ಷಕಿ ರಶ್ಮಿ ರೈಲು ಹತ್ತುವ ಸಮಯದಲ್ಲಿ ಬಿಳುತ್ತಿದವರನ್ನು ಸಮಯ ಪ್ರಜ್ಞೆ ಯಿಂದ ರಕ್ಷಣೆ ಮಾಡಿದ್ದಕ್ಕೆ ಈ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಕರ್ನಾಟಕದಿಂದ ಒಬ್ಬರಿಗೆ ಮಾತ್ರ ಜೀವನ್ ರಕ್ಷ ಪದಕ ನೀಡಿದ್ದಾರೆ. ಮೆಡಲ್ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ನೀಡಿದ ಪ್ರಮಾಣ ಪತ್ರ ಮತ್ತು ಮೆಡಲ್ ಹಾಗೂ 1 ಲಕ್ಷ ಚಕ್ ವಿತರಣೆ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಈಗಿನ ಕೇಂದ್ರ ಸಚಿವ ಅಶ್ವಿನಿ ವೈಷಣವ್ ಅವರು ನೀಡಿದ್ದಾರೆ. ಮೇ 27, 2022 ರಂದು ವಿಜ್ಞ್ಯಾನ ಭವನ ದೆಹಲಿಯಲ್ಲಿ ವಿತರಣೆ ಮಾಡಿದ್ದಾರೆ.

0 Comments