ಬಳ್ಳಾರಿ,ಮೇ 30: ಬಳ್ಳಾರಿ ನಗರದ ಡಿಎಆರ್ ಕವಾಯಿತು ಮೈದಾನದಲ್ಲಿ ರೌಡಿಗಳ ಪರೇಡ್ ಸೋಮವಾರ ನಡೆಯಿತು.ಎಸ್ಪಿ ಸೈದುಲು ಅಡಾವತ್ ಅವರ ನಿರ್ದೇಶನದ ಅನುಸಾರ ರೌಡಿಗಳ ಪರೇಡ್ ನಡೆಸಲಾಯಿತು.
ಎಎಸ್ಪಿ ಗುರುನಾಥ ಮತ್ತೂರು ಅವರು ರೌಡಿಗಳ ಪರೇಡ್ ವೀಕ್ಷಿಸಿದರು.
ರೌಡಿಗಳು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದರೇ ಒಕೆ;ಅದನ್ನು ಬಿಟ್ಟು ಅನೈತಿಕ ಚಟುವಟಿಕೆಗಳಲ್ಲಿ ಮತ್ತು ಅಕ್ರಮ ಹಾಗೂ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದಲ್ಲಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ವರ್ತನೆಗಳನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ವರ್ತನೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ರಮೇಶಕುಮಾರ್,ಬಳ್ಳಾರಿ ನಗರದ ಇನ್ಸ್ಪೆಕ್ಟರ್ಗಳು,ಸಬ್ಇನ್ಸ್ಪೆಕ್ಟರ್ಗಳು,ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
.jpg)
0 Comments