ಬಳ್ಳಾರಿ ಏ 25. ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಕಾರ್ಯಧರ್ಶಿಯಾಗಿ ಎಂ.ನಂಜುಂಡಸ್ವಾಮಿ ಆಗಮಿಸಿದ್ದಾರೆ. ಇವರು ಮೈಸೂರಿನಲ್ಲಿ ಕಾರ್ಯನಿರ್ವಹಿಸುತಿದ್ದರು. ಬಳ್ಳಾರಿಯ ಎಪಿಎಂಸಿ ಕಾರ್ಯಧರ್ಶಿ ಮೇರುನಂದನ್ ಅವರು ರಾಣಿಬೆನ್ನೂರಿಗೆ ವರ್ಗಾವಣೆಯಾದ ಕಾರಣ ಅವರ ಜಾಗಕ್ಕೆ ಏ 18 ರಂದು ನಂಜುಂಡಸ್ವಾಮಿಯವರು ಜಾಯಿನ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ನಾನು ಅಧಿಕಾರ ಸ್ವೀಕಾರ ಮಾಡಿದಮೇಲೆ ನಮ್ಮ ಸಿಬ್ಬಂದಿಯೊಂದಿಗೆ ಎಪಿಎಂಸಿ ಎಲ್ಲಾ ಸಂಚರಿಸಿ ಪರಿಶೀಲಿಸಿದ್ದೇನೆ, ಇನ್ನೂ ಅಭಿವೃಧ್ದಿಯಾಗಬೇಕಿದೆ, ನಾನು ನನ್ನ ಶಕ್ತಿಯನ್ನು ಮೀರಿ ಎಪಿಎಂಸಿ ಅಭಿವೃಧ್ದಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

0 Comments