ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ಗ್ರಾಮದಲ್ಲಿ ಶ್ರೀ ದುರ್ಗಾಂಬ ದೇವಿಯ ವಿಗ್ರಹ ಮರುಸ್ಥಾಪನೆ, ಹಾಗೂ ಶ್ರೀ ಆಂಜನೇಯಸ್ವಾಮಿ ಮಹಾ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಮಹಾ ಉತ್ಸವ ನಡೆಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು,ಈ ವೇಳೆಯಲ್ಲಿ ಸಾವಿರಾರು ಜನ ಭಕ್ತರಿಂದ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಪಡೆದರು. ಜೊತೆಗೆ ಅನ್ನದಾನವನ್ನು ಏರ್ಪಡಿಸಿದು ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿದರು. ಈ ವೇಳೆಯಲ್ಲಿ ಶ್ರೀ ಸಿದ್ದರಬೆಟ್ಟ ಶಿವಾಚಾರ್ಯ ಸ್ವಾಮೀಜಿ, ಸಮಾಜಸೇವಕರಾದ ಎಲ್ ಎನ್ ನಾಗರಾಜು, ಪತ್ನಿ ಸುಜಾತ, ಗೌಡ ಮತ್ತು ಗಮಕಾರರಾದ ಕೃಷ್ಣಪ್ಪ, ತಳವಾರ ಮುದ್ದಪ್ಪ, ಹಾಗೂ ಸಮಾಜಸೇವಕರಾದ ರಾಮಸ್ವಾಮಿ, ಮುಖಂಡರುಗಳಾದ ಕಿರಣಪ್ಪ, ಸತೀಶ್, ಪುಟ್ಟ ಪ್ಪ,ಹಾಗೂ ಪೂಜಾ ರಾದ ಕಾಂತಣ್ಣ, ವೆಂಕಟೇಶ್ ಇನ್ನಿತರ ಮುಖಂಡರುಗಳು ಹಾಗೂ ಭಕ್ತಾದಿಗಳು ಮತ್ತಿತರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ
.jpeg)
.jpeg)
.jpeg)
0 Comments