ಬೆಂಗಳೂರು: ವಿಶ್ವಪ್ರಸಿದ್ಧ ಅಧ್ಯಾತ್ಮ ಚಿಂತಕರು, ಸಂಸ್ಕೃತಿ ವಿದ್ವಾಂಸರು, ಅರ್ಕ ಧ್ಯಾನ ಎಂಬ ಭಾವನಾತ್ಮಕ ಅಂತರಂಗ ಪದ್ಧತಿಯ ಮೂಲಕರ್ತರೂ ಆದ ಅರ್ಕ ಶ್ರೀನಿವಾಸ ಯೋಗಿ ಅವರು ಅರ್ಕಧ್ಯಾನ ಮತ್ತು ಅದರ ಉಪಯೋಗ ಕುರಿತು ನಾಳೆ, ಏ.16ರಂದು ಶನಿವಾರ ಉಪನ್ಯಾಸ ನೀಡಲಿದ್ದಾರೆ.
ಮಲ್ಲೇಶ್ವರದ ಎಂಟನೇ ಅಡ್ಡರಸ್ತೆ ಗಾಂಧಿ ಸಾಹಿತ್ಯ ಸಂಘದಲ್ಲಿ ನಾಳೆ ಸಂಜೆ 5 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರದ ಮಾಜಿ ಕಾರ್ಪೊರೇಟರ್ ಶ್ರೀಮತಿ ಹೇಮಲತಾ ಸತೀಶ್ ಶೇಟ್ ಮತ್ತು ಮಲ್ಲೇಶ್ವರಂ ಕನ್ಯಕಾ ಪರಮೇಶ್ವರೀ ದೇವಾಲಯದ ಕಾರ್ಯದರ್ಶಿ ಶ್ರೀ ರವಿಶಂಕರ್ ಆರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
.jpg)


0 Comments