ಬಳ್ಳಾರಿ ಏ 28. ಕರ್ನಾಟಕ ರಾಜ್ಯ ವೈಜ್ಞಾನಿಕ, ಸಂಶೋದನಾ ಪರಿಷತ್ ಬೆಂಗಳೂರು ಆಶ್ರಯದಲ್ಲಿ ನಡೆಯುವ ಅಮೃತ ಅಮವಾಸ್ಯ -12 ನೇ ಕಾರ್ಯಕ್ರಮವು ದಿನಾಂಕ 30.04.2022 ರಂದು ಶನಿವಾರ 11.00ಕ್ಕೆ ಬಳ್ಳಾರಿಯ ಅಲ್ಲೀಪುರ ಶ್ರೀ ಸದ್ಗುರು ಮಹಾದೇವತಾತ ನವರ ಸಭಾಭವನ ಅಲ್ಲೀಪುರದಲ್ಲಿ ಬೆಳಿಗ್ಗೆ ಇರುತ್ತದೆ. ಸಾನಿಧ್ಯವನ್ನು ಶ್ರೀ ಕಲ್ಯಾಣ ಮಹಾಸ್ವಾಮಿಗಳು, ಕಲ್ಯಾಣಸ್ವಾಮಿ ಮಠ, ಬಳ್ಳಾರಿ , ಉದ್ಘಾಟನೆಯನ್ನು ಬಳ್ಳಾರಿಯ ಜನಪ್ರಿಯ ಶಾಸಕರಾದ ಜಿ.ಸೋಮಶೇಖರ ರೆಡ್ಡಿಯವರು ನೆರವೇರಿಸುತ್ತಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ನಿಷ್ಠಿರುದ್ರಪ್ಪ ಮತ್ತು ವೀ.ವಿ. ಸಂಘದ ಸ್ವತಂತ್ರ್ಯ ಪಧವಿ ಪೂರ್ವ ಕಾಲೇಜನ ಕನ್ನಡ ಉಪನ್ಯಾಸಕರಾದ ಎ.ಎಂ.ಪಿ.ವೀರೇಶಸ್ವಾಮಿ ಉಪನ್ಯಾಸ ಮಾಡುವರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾದೇವತಾತ ಟ್ರಸ್ಟ್ ಕಮಿಟಿ ಸದಸ್ಯರುಗಳು ಆಗಮಿಸುವರು. ಈ ಸಂದಂರ್ಭದಲ್ಲಿ ಶ್ರೀ ಮಹಾದೇವತಾತನವರ ಸಂಸ್ಕøತ , ವೈಧಿಕ, ಜ್ಯೋತಿಷ್ಯ ವನ್ನು ಬೇಸಿಗೆ ರಜಾ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.

0 Comments