ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರಜನ್ಮಶತಾಬ್ದಿಯ ಅಂಗವಾಗಿ ಭಾರತ ಸರ್ಕಾರ ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆಬುವಾ ಪ್ರತಿಷ್ಠಾನವು ಎರಡು ದಿನಗಳ ಸಂಗೀತಕಾರ್ಯಕ್ರಮ–“ಪೂರ್ಣಾಹುತಿ”ಅನ್ನುಬೆAಗಳೂರಿನಲ್ಲಿಆಯೋಜಿಸುತ್ತಿದೆ.
ಪುಣೆಯ ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆಬುವಾ ಪ್ರತಿಷ್ಠಾನವು ಪಂಡಿತ್ ಭೀಮಸೇನ ಜೋಶಿಯವರ ಜನ್ಮ ಶತಾಬ್ದಿಯನ್ನು 2021ರ ಫೆಬ್ರವರಿ 4ರಿಂದ ಆಚರಿಸುತ್ತ ಬಂದಿದ್ದು, ಅದರಉದ್ಘಾಟನಾ ಸಮಾರಂಭ ಮತ್ತು ಪೂರ್ಣಾಹುತಿಕಾರ್ಯಕ್ರಮವನ್ನು ಪಂ. ಭೀಮಸೇನ್ ಜೋಶಿ ಅವರುಜನ್ಮಭೂಮಿಯಾದಗದಗಜಿಲ್ಲೆಯಲ್ಲಿ ಆಯೋಜಿಸಿತ್ತು.
ಆ ಆಚರಣೆಯ ಭಾಗವಾಗಿ 2021ರಲ್ಲಿ “ಖಯಾಲ್ಯಜ್ಞ”ಹಾಗೂ 2022ರಲ್ಲಿ“ಪೂರ್ಣಾಹುತಿ” ಎಂಬಮೂರುದಿನಗಳಕಾರ್ಯಕ್ರಮ ಆಯೋಜಿಸಿತ್ತು. ಅಲ್ಲದೇ, ಭೀಮಸೇನ ಜೋಶಿಯವರು ಹಾಡಿ ಪ್ರಖ್ಯಾತಗೊಳಿಸಿದಂತಹ ಸ0ತವಾಣಿಗಳ ಆಧರಿತ“ಭೀಮಸೇನವಾಣಿ”ಕಾರ್ಯಕ್ರಮವನ್ನೂಸಹ ಏರ್ಪಡಿಸಿತ್ತು.
ಅದರ ಮುಂದುವರಿದ ಭಾಗವಾಗಿ ಇದೀಗ ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆಬುವಾ ಪ್ರತಿಷ್ಠಾನವು ಎರಡು ದಿನಗಳ ಸಂಗೀತಉತ್ಸವ-“ಪೂರ್ಣಾಹುತಿ”ಯನ್ನುಇದೇಮಾರ್ಚ್ 19 ಹಾಗೂ 20ರಂದುಬೆAಗಳೂರಿನಲ್ಲಿ ಆಯೋಜಿಸಿದೆ. ಸಂಗೀತ ಕಛೇರಿಗಳನ್ನು ಆಯೋಜಿಸುವ ಮೂಲಕ ಸಂಗೀತ ದಿಗ್ಗಜ ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅವರಿಗೆಗೌರವ ಸಲ್ಲಿಸಲು ಸಾಧ್ಯವಾಗುತ್ತಿರುವುದು ಸಂಸ್ಕೃತಿ ಸಚಿವಾಲಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಪದ್ಮಶ್ರೀ ಪಂ. ವೆಂಕಟೇಶಕುಮಾರ್, ಪದ್ಮಶ್ರೀ ಪಂ. ಉಲ್ಲಾಸ್ಕಶಾಲ್ಕರ್, ವಿದುಶಿ ಆರತಿಅಂಕಲೀಕರ್, ವಿದುಶಿ ಮಂಜೂಷಾ ಪಾಟೀಲ್ ಈ ಉತ್ಸವದಲ್ಲಿಗಾಯನಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಪಂ. ಕುಮಾರ್ ಬೋಸ್ (ಸ್ವತಂತ್ರತಬಲಾ ವಾದನ) ಹಾಗೂ ಪಂ. ರಾಕೇಶ ಚೌರಾಸಿಯ (ಕೊಳಲು ವಾದನ) ಕೂಡ ಈ ಉತ್ಸವದ ಭಾಗವಾಗಿದ್ದಾರೆ.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಎನ್.ಆರ್. ಕಾಲೋನಿಯರಾಮಮಂದಿರ ಬಳಿಯ ಪತ್ತಿ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ. 2022ಮಾರ್ಚ್ 19ರಂದು ಸಂಜೆ 5.00 ಗಂಟೆಯಿ0ದ 9.30 ಗಂಟೆಯವರೆಗೆ ಹಾಗೂ 2022 ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಯಿ0ದ 2 ಗಂಟೆಯವರೆಗೆ ಈ ಉತ್ಸವ ನಡೆಯಲಿದ್ದು, ಎಲ್ಲಾ ಕಲಾಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳು ಭಾಗವಹಿಸಬಹುದಾಗಿದೆ. ಕಾರ್ಯಕ್ರಮದಉದ್ಘಾಟನೆಯು ಮಾ. 19ರ ಸಂಜೆ 5.00 ಗಂಟೆಗೆಕಿರ್ಲೋಸ್ಕರ್ ಫೆರಸ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆರ್.ವಿ. ಗುಮಾಸ್ತೆಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಅನೇಕ ಪ್ರಸಿದ್ಧ ಕಲಾವಿದರನ್ನು ಒಳಗೊಂಡಿರುವ ಈ ಉತ್ಸವವು ಸಂಗೀತದೌತಣವೇಅಗಿದ್ದು, ಸಂಗೀತ ಪ್ರೇಮಿಗಳು ತಪ್ಪದೇ ಭಾಗವಹಿಸಿ ಸಂಗೀತ ಸುಧೆಯನ್ನು ಸವಿಯಿರಿಎಂದು ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆಬುವಾ ಪ್ರತಿಷ್ಠಾನದಅಧ್ಯಕ್ಷರಾದ ಶ್ರೀ ಗೋವಿಂದಬೆಡೇಕರ್, ಕಾರ್ಯದರ್ಶಿ ಮಂಜೂಷಾ ಪಾಟೀಲ್ ಈ ಮೂಲಕ ತಿಳಿಸಿದ್ದಾರೆ.
0 Comments