ದಾಸವಾಣಿ ಸಂಸ್ಥೆಯು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ "ಪುರಂದರ ನಮನ" ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಪ್ರಶಸ್ತಿ ಪುರಸ್ಕೃತ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್, ಶ್ರೀಮತಿ ಮಾನಸಾ ಕುಲಕರ್ಣಿ ಮತ್ತು ಶ್ರೀಮತಿ ಚಂದ್ರಿಕಾ ಗಿರೀಶ್. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಶ್ರೀ ಜಗನ್ನಾಥದಾಸರು ಚಲನಚಿತ್ರತಂಡದ ನಿರ್ದೇಶಕ ಶ್ರೀ ಮಧುಸೂದನ ಹವಾಲ್ದಾರ್, ಸಂಗೀತ ನಿರ್ದೇಶಕರಾದ ಶ್ರೀ ವಿಜಯ ಕೃಷ್ಣ, ಗೋಪಾಲದಾಸರ ಪಾತ್ರಧಾರಿ ಶ್ರೀ ಪ್ರಭಂಜನ ದೇಶಪಾಂಡೆ ಮತ್ತು ದಾಸವಾಣಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಜಯರಾಜ್ ಕುಲಕರ್ಣಿ ಅವರು ಚಿತ್ರದಲ್ಲಿದ್ದಾರೆ.
0 Comments