ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಸಂಸದ ಡಿ.ಕೆ ಸುರೇಶ್ ವಿರುದ್ಧ ಪ್ರತಿಭಟನೆ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕರಗಳನ್ನು ಕೂಗಲಾಯಿತು.
ಕುರುಬರ ಹಳ್ಳಿಯ ಚಾಲುಕ್ಯ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದುಪ್ರ ತಿಭಟನೆಯಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಎಸ್ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎನ್ ಜಯರಾಂ ಸೇರಿದಂತೆ ಹಲವರು ಭಾಗಿ ಯಾಗಿದ್ದರು.
ಡಿಕೆ ಸುರೇಶ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ರಾಮನಗರದಲ್ಲಿ ನಡೆದ ಘಟನೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಮಧ್ಯೆ ನಡೆದಿದ್ದ ಗುಂಡಾವರ್ತನೆ.
ಡಿಕೆ ಸುರೇಶ್ ಗುಂಡಾ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪ.
ಡಿಕೆ ಸುರೇಶ್ ವಿರುದ್ದ ಕೇಸ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು,
ಡಿಕೆ ಸುರೇಶ ಕ್ಷಮೆ ಯಾಚಿಸುವಂತೆ ಬಾಜಪ ಕಾರ್ಯಕರ್ತರು ಆಗ್ರಹಿಸಿದರು.
0 Comments