ಮಧುಗಿರಿ : ವಾಸವಿಕ್ಲಬ್ ಮಹಿಳೆಯರ ಬಳಗ ಸದಸ್ಯರು ವರ್ಷದ ಮೊದಲ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ನಗರದ ಮಹಿಳಾ ಸಮಾಜದಲ್ಲಿ ಸಂಕ್ರಾಂತಿ ಹಬ್ಬವನ್ನು ಆಯೋಜಿಸಿದ್ದು. ಮಕರ ಸಂಕ್ರಾಂತಿ ಹಿಂದು ಹಬ್ಬವಾಗಿದ್ದು ಇದನ್ನು ಪ್ರತಿವರ್ಷ ಜನವರಿ 14 ರಂದು ಅಥವಾ 15 ಆಚರಿಸುತ್ತಾರೆ
ಸೂರ್ಯನು ಈ ದಿನ ತನ್ನ ಪಥ ಬದಲಾಯಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಕಬ್ಬಿನ ಸಹಿ ಎಳ್ಳು ಬೆಲ್ಲದ ರುಚಿ ಸಿಹಿ ಗೆಣಸು ಕಡಲೆಕಾಯಿ ಸಾರ ದಂಥ ಜೀವನ ನಿಮ್ಮದಾಗಲಿ
ಹಬ್ಬದಲ್ಲಿ ನಾವು ನದಿಗಳಲ್ಲಿ ಸ್ನಾನವನ್ನು ಮಾಡಿ ಸೂರ್ಯ ದೇವರ ಆರಾಧಿಸುತ್ತೇವೆ. ನಮ್ಮಲ್ಲಿನ ಪಾಪಗಳು ತೊಳೆಯುತ್ತದೆ.ಎಂಬ ನಂಬಿಕೆ ಇದೆ.
ಸಂಕ್ರಾಂತಿ ಎಂದರೆ ಪರ್ವಕಾಲ ಪುಣ್ಯಕಾಲ ಸೂರ್ಯ ತನ್ನ ಪತನವನ್ನು ಬದಲಿಸುವ ಕಾಲ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ.
ಇನ್ನೊಂದು ಪುರಾಣಿಕ ಕಥೆಯ ಪ್ರಕಾರ ಬ್ರಹ್ಮದೇವ ತಿಮ್ಮರಸ ರನ್ನಿಗೆ ವರ ನೀಡುತ್ತಾನೆ. ದಿಕ್ಕು ಕಾಣದ ಮನೆಗಳಲ್ಲಿ ಸೂರ್ಯದೇವ ನಲ್ಲಿ ರಕ್ಷಣೆ ಬಿಡುತ್ತಾರೆ ಆಗ ಸೂರ್ಯದೇವ ಕರ್ಕ ಮತ್ತು ಮಕರ ಎಂಬೆರಡು ದೇವತೆಗಳ ಸಹಿತ ತಿಮ್ಮರಸು ರನ ವದ್ಗೇ ಗೇ ಮುಂದಾಗುತ್ತಾನೆ. ಮಕರ ದೇವತೆ ತಿಮ್ಮರಸು ರನ ಹೊಟ್ಟೆಗೆ ಭರ್ಜಿಯಿಂದ ಇರಿ ದಾಗ ಹೊಟ್ಟೆಯಿಂದ ಎಳ್ಳು ಹೊರ ಬಂದು ತಿಮ್ಮರಸ ರನ್ನ ಹತನಾಗುತ್ತಾನೆ. ಅಂದಿನಿಂದ ಎಳ್ಳನ್ನು ಅಮೃತದಂತೆ ಪೂಜಿಸುವ ಪ್ರತೀತಿ ಬಂತು ಎನ್ನುತ್ತಾರೆ. ಎಂದು ವಾಸವಿ ಕ್ಲಬ್ ಅಧ್ಯಕ್ಷರಾದ ಲಕ್ಷ್ಮಿ ಮೂರ್ತಿ ತಿಳಿಸಿದರು
ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಶಾ ಮಲ್ಲಿಕಾರ್ಜುನ್. ಅರುಣ ಸತೀಶ್. ಕಲ್ಪನಾ ಗೋವಿಂದರಾಜ್. ಲಲಿತಾ ನವೀನ್. ಸುಮಾ ಸುದರ್ಶನ್. ಭಾರತಿ ಲಕ್ಷ್ಮಿಕಾಂತ್. ಸುಷ್ಮಾ ರವೇಶ್. ಪ್ರತಿಭಾ ಧನಪಾಲ್. ನಾಗ ಸ್ಮಿತಾ ಲಕ್ಷ್ಮಿ ಶ್ರೀನಾಥ್. ವೀಣಾ ಹನುಮಂತರಾಜು. ಪದ್ಮ ಬದ್ರಿನಾಥ್. ರೂಪ ರವಿ.ಪುಷ್ಪ ಆದಿನಾರಾಯಣ. ಸುಶೀಲ. ಮಾಧವಿ ರಾಜ್. ಪವಿತ್ರ ಪ್ರಕಾಶ್ ಬಾಬು. ಇನ್ನು ಮುಂತಾದವರಿದ್ದರು.
0 Comments