*ಬಿ ಎಸ್ ಪಿ ಮುಖಂಡರಾದ ಮಾರಸಂದ್ರ ಮುನಿಯಪ್ಪರವರ 62 ನೇ ಹುಟ್ಟು ಹಬ್ಬಕ್ಕೆ ಶಾಸಕ ಆರ್.ಮಂಜುನಾಥರವರಿಂದ ಶುಭ ಹಾರೈಕೆ*
ಬೆಂಗಳೂರು : ಕರ್ನಾಟಕ ರಾಜ್ಯ ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕರು ಹಾಗೂ ಕರ್ನಾಟಕ ಉಸ್ತುವಾರಿಗಳಾದ ಮಾರಸಂದ್ರ ಮುನಿಯಪ್ಪರವರ 62 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್ ರವರು ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳದ ವಕ್ತಾರರಾದ ಡಾ.ಎಂ.ಚರಣ್ ಗೌಡ, ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ್ (ದೇವೇಗೌಡರು), ಜೆಡಿಎಸ್ ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷರು ಹಾಗೂ ಮಾಜಿ ಗ್ರಾ.ಪಂ. ಸದಸ್ಯರು ಬಿ.ಕೃಷ್ಣಪ್ಪ, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಬಿಎಸ್ಪಿ ಕಾರ್ಯದರ್ಶಿ ಮುನಿಕೃಷ್ಣ, ಧರ್ಮಪತ್ನಿ ಶ್ರೀಮತಿ ಸಬಾಸ್ಟಿಯನ್ ಬರಾಟೋ, ಬಿಎಸ್ಪಿ ಬಿಬಿಎಂಪಿ ಅಧ್ಯಕ್ಷರಾದ ಎಂ.ಸಂದೀಪ್ ಮುಂತಾದವರು ಉಪಸ್ಥಿತರಿದ್ದರು.
0 Comments