ಬೆಂಗಳೂರು : ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ಯವಾಗಿ ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಹಾಗೂ ರಾಜಾ ಮಾರ್ಕೆಟ್ಗಳಲ್ಲಿ ರಾತ್ರಿ ಹೊತ್ತು ಮಲಗುತ್ತಿರುವ ಅನಾಥ, ಹಿಂದುಳಿದ ಮತ್ತು ನಿರ್ಗತಿಕರಿಗೆ ಬೆಡ್ಸಿಟ್, ಕಂಬಳಿ, ಮಾಸ್ಕ್, ಸ್ಯಾನಿಟೈಸ್ರ್ ನೀಡುವ ಮೂಲಕ ಮಾನವಿಯ ಮೌಲ್ಯಗಳನ್ನು ಮೆರೆದರು. "ಕೆಕ್, ಹಾರ, ಪುಷ್ಪ ಗುಚ್ಚಗಳನ್ನು ಬಳಸಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವದಕ್ಕಿಂತ, ಇಂತಹ ಬಡವರಿಗೆ ಕೈಲಾದ ಸಹಾಯವನ್ನು ಮಾಡುವುದು ಉತ್ತಮ.
ರಾತ್ರಿಯ ಹೊತ್ತು ಚಳಿಯಿಂದ ಬಳಲುತ್ತಿದ ಅದೆಷ್ಟೋ ಮುಖಗಳಲ್ಲಿ ಆನಂದ ಭಾಷ್ಪಗಳು ಉದುರಿದವು. ಈ ಸಂದರ್ಭದಲ್ಲಿ ಸಿರಿ ಮ್ಯೂಜಿಕ್ನ ವ್ಯವಸ್ಥಾಪಕರಾದ ಡಾ. ಸುರೇಶ ಚಿಕ್ಕಣ್ಣ ಮತ್ತು ಗಣ್ಯರು, ಆತ್ಮೀಯರು ಪಾಲ್ಗೊಡಿದ್ದರು.
0 Comments