ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ನ ಜೈ ಮಾರುತಿ ನಗರದ ಶಿವಕುಮಾರ್ ಸ್ವಾಮಿ ವೃತ್ತದಲ್ಲಿ ನಿನ್ನೆ ಹೆಲಿಕ್ಯಾಪ್ಟರ್ ಅಪಘಾತ ದ ದುರಂತದಲ್ಲಿ ಸಾವನ್ನಪ್ಪಿದ ದೇಶದ ಮಿಲಿಟರಿ ಮಹಾ ದಂಡನಾಯಕ ಸಿಡಿಎಸ್ ಶ್ರೀ ಬಿಪಿನ್ ರಾವತ್ ಹಾಗೂ 13 ಜನ ಮಿಲಿಟರಿ ಸೇನಾ ಸಿಬ್ಬಂದಿ ಅಸುನಿಗಿದ್ದು, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ಯಾಂಡಲ್ ಹಚ್ಚಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಾರ್ಡ್ ಅಧ್ಯಕ್ಷರಾದ ಲೋಕೇಶ್, ವಾರ್ಡ್ ಪ್ರಧಾನ ಕಾರ್ಯದರ್ಶಿ ಸುಧಾಕರ್ ರಾಜು ಭಜರಂಗ ದಳದ ಭುವನ್, ಹಾಗೂ ಹಲವು ದೇಶ ಭಕ್ತರು ಆಗಮಿಸಿ ಅಗಲಿದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
0 Comments