ಚೆನ್ನೈ ಮಹಾನಗರದಲ್ಲಿ ರಣ ರಣ ಮಳೆಗೆ ರಸ್ತೆ ಕಾನನದಂತಾಗಿವೆ
November 12, Chennai: ವಾಯುಭಾರ ಕುಸಿತವಾಗಿರುವ ಹಿನ್ನೆಲೆ ಸಂಪೂರ್ಣ ಚೆನ್ನೈ ಮಹಾನಗರ ಮಳೆಮಯವಾಗಿದೆ. ನಗರದಲ್ಲಿ ರಸ್ತೆ ಯಾವುದು ಚರಂಡಿ ಯಾವುದು ಎಂಬುದು ಕಾಣದಂತಾಗಿದೆ. ನಗರದಲ್ಲಿ ತೆಪ್ಪಗಳ ಸಹಾಯದಿಂದ ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲಿನ ನಗರ ಪಾಲಿಕೆ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದೆ. ಏನೇ ಆದರೂ ನೀರಿನಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಬಯಸೋಣ.
Vartajaala

0 Comments