Ticker

6/recent/ticker-posts

Ad Code

Responsive Advertisement

ರಾಜ್ಯ ಬಿಜೆಪಿ ನಾಯಕರಿಂದಲೇ ಮಂಡ್ಯ ಜಿಲ್ಲೆ ಕಡೆಗಣನೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಅಕ್ಟೋಬರ್ 4, ಮದ್ದೂರು (ಮಂಡ್ಯ): ಬಿಜೆಪಿ ಪಕ್ಷವು ಸಾಮಾನ್ಯ ಕಾರ್ಯಕರ್ತನಿಗೂ ವಿಶೇಷ ಸ್ಥಾನಮಾನ ನೀಡಲಿದ್ದು, ಇದನ್ನರಿತು ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

ಬೆಂಗಳೂರಿನಿ0ದ ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಹೆಮ್ಮನಹಳ್ಳಿ ಅಡ್ಡ ರಸ್ತೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷವು ನಮ್ಮನ್ನು ಗುರುತಿಸಿ ಸಚಿವರನ್ನಾಗಿ ಮಾಡಿದ್ದು, ಅದರಂತೆಯೇ ತಾವೂ ಸಹ ಪಕ್ಷದ ಒಳಿತಿಗಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಪಕ್ಷ ಗುರುತಿಸಿ ನಿಮಗು ಸಹ ವಿಶೇಷ ಸ್ಥಾನಮಾನ ನೀಡಲಿದೆ ಎಂದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಬಿಜೆಪಿ ಪಕ್ಷವು ಸಕ್ರಿಯವಾಗಿ ಬಲಿಷ್ಠವಾಗಿದ್ದು, ಕೆಲ ರಾಜ್ಯ ನಾಯಕರೇ ಜಿಲ್ಲೆಯನ್ನು ಕಡೆಗಣಿಸುತ್ತಿದ್ದು, ಸ್ಥಳೀಯ ಮುಖಂಡರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಕಾರ್ಯಕರ್ತರು ಸಚಿವರಿಗೆ ಮನವಿ ಮಾಡಿದರು.

ಈಗಾಗಲೇ ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದು, ತಾಲೂಕು ಕೇಂದ್ರಗಳಲ್ಲಿ ಪಕ್ಷವು ಬಲಿಷ್ಠವಾಗುತ್ತಿರುವ ಜತೆಯಲ್ಲಿಯೇ ಕೆಲ ನಾಯಕರು ಜಿಲ್ಲೆಯನ್ನು ಕಡೆಗಣಿಸುತ್ತಿದ್ದು, ಇದರಿಂದಾಗಿ ಕಾರ್ಯಕರ್ತರಲ್ಲಿ ನಿರುತ್ಸಾಹ ಉಂಟಾಗಿದ್ದು, ಈ ಸಂಬAಧ ಸಂಬAಧಿಸಿದವರೊ0ದಿಗೆ ಚರ್ಚಿಸಿ ಜಿಲ್ಲೆಗೆ ಹೆಚ್ಚಿನ ಒತ್ತು ನೀಡಿ ವಿಶೇಷ ಸ್ಥಾನಮಾನ ನೀಡಬೇಕೆಂದರು.

ಇತರೆ ಜಿಲ್ಲೆಗಳಿಗೆ ಕೊಡುವ ಪ್ರಾಶಸ್ತ್ಯವನ್ನು ತಮ್ಮ ಜಿಲ್ಲೆಗೂ ನೀಡಲು ಕ್ರಮ ವಹಿಸಬೇಕೆಂದರಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಜಿಲ್ಲೆಯನ್ನು ಕಡೆಗಣನೆ ಮಾಡದಂತೆ ನಿಷ್ಠಾವಂತರಾಗಿ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸಕ್ಕೆ ನಾಯಕರು ಕ್ರಮ ವಹಿಸಬೇಕೆಂದು ತಪ್ಪಿದಲ್ಲಿ ಮುಂದಾಗುವ ನಷ್ಟಕ್ಕೆ ನಾಯಕರೇ ಹೊಣೆಯಾಗಲಿದ್ದಾರೆಂದರು.

ಈ ವೇಳೆ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ರಘು, ಪ್ರಧಾನ ಕಾರ್ಯದರ್ಶಿ ಎಚ್. ಪಿ. ಸ್ವಾಮಿ, ಟಿಎಪಿಸಿಎಂಸಿ ನಿರ್ದೇಶಕ ಎಂ. ಸಿ. ಸಿದ್ದು, ನಗರ ಘಟಕದ ಅಧ್ಯಕ್ಷ ಎನ್. ಜೆ. ಮಧು ಕುಮಾರ್, ಪದಾಧಿಕಾರಿಗಳಾದ ಮ. ನ. ಪ್ರಸನ್ನ ಕುಮಾರ್, ಅರವಿಂದು, ಕೆಂಪಬೋರಯ್ಯ, ಶಂಕರ್, ಜಗನ್ನಾಥ್, ತ್ರಿವೇಣಿ, ನಾಗೇಶ್ ಇತರರಿದ್ದರು.

Post a Comment

0 Comments

Ad Code

Responsive Advertisement