ಬಳ್ಳಾರಿ, ಸೆ.27: ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯ ಅಂಗವಾಗಿ ಇದೇ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7ರ ವರೆಗೆ ಹಮ್ಮಿಕೊಳ್ಳಲಾದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಇಂದು ಬೆಳಿಗ್ಗೆ ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಮುನಿಸಿಪಲ್ ಮೈದಾನದಲ್ಲಿ ನರೇಂದ್ರ ಮೋದಿ ನಡೆದು ಬಂದ ದಾರಿಯ ಕುರಿತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ದೆಯಲ್ಲಿ ಬಳ್ಳಾರಿಯ ಬಾಲಭಾರತಿ ಹೈಸ್ಕೂಲ್, ಶಾರದಾ ವಿದ್ಯಾಪೀಠ, ಮುನಿಸಪಲ್ ಕಾಲೇಜ್ ಸೇರಿದಂತೆ ಒಟ್ಟು 61 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಮುಖಂಡರಾದ ಪ್ರಹ್ಲಾದ್ ಜೋಷಿ, ದೇಸಾಯಿ ವಸಂತಕುಮಾರ್, ಪುಷ್ಪಾವತಿ, ರಾಮಕೃಷ್ಣ, ರಾಮಪ್ರಸಾಧ್, ಸುಗುಣ, ರಾಮಾಂಜಿನೇಯ ಮಾಧ್ಯಮ ಸಂಚಾಲಕ ರಾಜೀವ್ ಅವರು ಉಪಸ್ಥಿತರಿದ್ದರು.

0 Comments