ಬಳ್ಳಾರಿ, ಸೆ 27. ಆಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಂIಒSS ಬಳ್ಳಾರಿ ಜಿಲ್ಲಾ ಸಮಿತಿಯಿಂದ ಭಾರತ್ ಬಂದ್ ಬೆಂಬಲಿಸಿ ರಾಯಲ್ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ.ಎನ್ ಮಂಜುಳಾರವರು ಮಾತನಾಡಿದರು.
ಈ ಹೋರಾಟ ಒಂದು ಐತಿಹಾಸಿಕ ಹೋರಾಟವಾಗಿದೆ, ರೈತರು ತಮ್ಮ ಪ್ರಾಣ ಹೋದರು ಕೊಡ ಜಗ್ಗದೆ ಇನ್ನು ಕೊಡ ಹೋರಾಟದಲ್ಲಿ ಇದ್ದಾರೆೆ ಕೇಂದ್ರ ಸರ್ಕಾರ ಅತ್ಯಂತ ಜನವಿರೋಧಿ ರೈತ ವಿರೋಧಿ ಮಹಿಳಾ ವಿರೋಧಿ ಕಾಯ್ದೆಗಳನ್ನು ತರುತ್ತಾ ಇದೆ ಇದನ್ನು ನಾವೆಲ್ಲರೂ ಖಂಡಿಸಬೇಕಾಗಿದೆ, ಹಾಗಾಗಿ ಇವತ್ತು ಈ ಬಂದ್ಗೆ ನಾವು, ಮಹಿಳೆಯರು ಕೊಡ ಬೆಂಬಲ ಕೊಡುತಾ ಇದೀವಿ ಎಂದರು. ಹೋರಾಟ ನಿರತ ರೈತರೇ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಹೋರಾಟ ಯಶ್ವಸಿಯಾಗಲಿ ಎನ್ನುವಂತ ಸಂದೇಶವನ್ನು ನೀಡೋಣ ಎಂದು ಕರೆ ನೀಡಿದರು. ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಎ. ಶಾಂತಾ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಈಶ್ವರಿ, ಪದಾಧಿಕಾರಿಗಳಾದ ರೇಖಾ, ವಿದ್ಯಾ, ಅಹಲ್ಯ, ಪದ್ಮ, ಮಲ್ಲಮ್ಮ, ನಾಗಮ್ಮ, ಹುಲಿಗೆಮ್ಮ, ವಿಜಯಲಕ್ಷ್ಮಿ, ಸುಜಾತ, ಕಲ್ಯಾಣಮ್ಮ ಉಪಸ್ಥಿತರಿದ್ದರು.

0 Comments