ಬೆಂಗಳೂರು ಆಗಸ್ಟ್ 12 (ಕರ್ನಾಟಕ ವಾರ್ತೆ) : ಗ್ರಂಥಪಾಲಕರ ದಿನಾಚರಣೆ 2021ರ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ ಅವರು ಕಬ್ಬನ್ ಉದ್ಯಾನವನ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರರ್ದಶನವನ್ನು ಉದ್ಘಾಟಿಸಿ, ಭಾರತೀಯ ಗ್ರಂಥಾಲಯ ವಿಜ್ಞಾನ ಪಿತಾಮಹಾರಾದ ಡಾ.ಎಸ್.ಆರ್ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಪಿ.ವೈ ರಾಜೇಂದ್ರ ಕುಮಾರ್, ನಿವೃತ್ತ ನಿರ್ದೇಶಕರು, ನ್ಯಾಷನಲ್ ಲೈಬ್ರರಿ, ಕೋಲ್ಕತ್ತಾ ಹಾಗೂ ಖ್ಯಾತ ಸಾಹಿತಿಗಳು ಮತ್ತು ಚಿಂತಕರಾದ ಶೂದ್ರ ಶ್ರೀನಿವಾಸ್, ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಡಾ. ಸತೀಶ್ಕುಮಾರ್ ಎಸ್. ಹೊಸಮನಿ ಇತರೆ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


0 Comments