ಬಳ್ಳಾರಿ .ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜನೀಯರಿ0ಗ್ ವಿಭಾಗದಲ್ಲಿ ಜರುಗಿದ ಒಂದುದಿನದ ಕಾರ್ಯಗಾರ“
ಫ್ಲೋ ಮೆರ್ಮೆಂಟ್ಸ್ –ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮೆಕಾನಿಕಲ್ ಇಂಜನೀರಿAಗ್ ವಿಭಾಗದ ಮುಖ್ಯಸ್ಥರಾದ ಡಾ|| ಕೋರಿ ನಾಗರಾಜ್ , ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಪ್ರೋ. ಎಂ.ಆರ್.ಇ0ದುಧರ್, ಪ್ರೋ.ಸೋಮನಾಥ್ ಸ್ವಾಮಿ, ಪ್ರೋ.ಕೆ.ಜಿ.ಮಹೇಶ್, ಪ್ರೋ.ನವೀನ್, ಪ್ರೋ.ವಿರೂಪಾಕ್ಷಗೌಡರು, ಹಾಗು ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ -ಇಂಜನೀಯರ್ಗಳು, ಅಧಿಕಾರಿ ವೃಂದದವರು- ಜಾನಕಿರಾಮ್ ಪ್ರಾಜೆಕ್ಟ್ ಡೈರೆಕ್ಟರ್, ಇವರ ತಂಡದಲ್ಲಿ -ಯಮನೂರಪ್ಪ, ಆರ್.ಪ್ರಭು, ಶ್ರೀಮತಿ ಐಶ್ರ್ಯ, ಶ್ರೀ ಮತಿ ಸಂಧ್ಯಾ ಇನ್ನಿತರರು ಭಾಗವಹಿಸಿದ್ದರು.
ಡಾ|| ಕೋರಿ ನಾಗರಾಜ್ ಇವರು ಭಾಗವಹಿಸಿದ ವೃಂದದವರಿಗೆ ಕಾರ್ಯಗಾರದ ಬಗ್ಗೆ ವಿವರಿಸುತ್ತ,“ ಶಿಕ್ಷಣವೆಂದರೆ ಮೊದಲೇ ವiನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ನಿಮ್ಮಲ್ಲಿ ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ” ಎಂದು ಕೋರಿದರು.
ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ ಮಾತನಾಡುತ್ತಾ “ಇಲ್ಲಿ ಭಾಗವಹಿಸುತ್ತಿರುವ ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ ಇಂಜನೀರ್ಗಳು,ಅಧಿಕಾರಿ ವೃಂದದವರು ದಿನನಿತ್ಯವು ಸಮಾಜ ಹಿತ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅವರಿಗೆ ನಮ್ಮ ಮಹಾವಿದ್ಯಾಲಯದಲ್ಲಿನ ಮೆಕಾನಿಕಲ್ ಇಂಜನೀರಿ0ಗ್ ವಿಭಾಗದ ನೂತನ ತಾಂತ್ರಿಕ ವಿಧಾನಗಳು,ಪದ್ದತಿಗಳು ಉಪಯುಕ್ತವಾಗಬೇಕು, ಹಾಗು ಪ್ರಜೆಗಳಿಗೆ ಉತ್ತಮ ಸೌಲಭ್ಯಗಳು ಇವರಿಂದ ದೊರೆಯಲಿ”ಎಂದು ಬಯಸಿದರು.
ಮೆಕಾನಿಕಲ್ ಇಂಜನೀಯರಿ0ಗ್ ವಿಭಾಗದ ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಸ್ವಾಗತಿಸಿದರು, ಹಾಗು ನಿರೂಪಣೆ ಮಾಡಿದರು.

0 Comments