ಬಳ್ಳಾರಿ ಜುಲೈ 05. ಸಿರುಗುಪ್ಪ ತಾಲೂಕಿನ ಮಾನ್ಯ ಜನಪ್ರಿಯ ಯುವ ನಾಯಕರಾದ ಎಂ.ಎಸ್.ಸಿದ್ದಪ್ಪನವರು 05/07/21 ಸೋಮವಾರದದಂದು ತೆಕ್ಕಲಕೋಟೆ ಪಟ್ಟಣದಲ್ಲಿ 20ನೇ ವಾರ್ಡಿನ ಶ್ರೀಶ್ರೀಶ್ರೀ ಈಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ವಾಲ್ಮೀಕಿ ಮೂರ್ತಿಯ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದರು.
ಈಶ್ವರ ಮೂರ್ತಿಯ ಪ್ರತಿಷ್ಠಾಪನೆ ವೇಳೆ ಚನ್ನಾಗಿ ಮಳೆಯಾಗಿ,ಒಳ್ಳೆಯ ಬೆಳೆಗಳು ಬೆಳೆದು,ಹೆಚ್ಚಿನ ಧರ ಸಿಗಬೇಕೆಂದು, ರೈತಬಾಂಧವರನ್ನು ದೇವರು ಕಾಪಾಡಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು.
ಈಸಂಧರ್ಬದಲ್ಲಿ ಗ್ರಾಮದ ನಾಗರೀಕರು,ಮುಖಂಡರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಯಶಸ್ವಿಮಾಡಿದರು.

0 Comments