ಬಳ್ಳಾರಿ ಮೇ 28.ನಿರಂತರ ಕೋವಿಡ್ ಸೇವೆಗಳೊಂದಿಗೆ ಅಭಯ ಫೌಂಡೇಶನ್ 28-5-21 ರಿಂದ 4-6-21ರವರೆಗೆ ಬಳ್ಳಾರಿಯ ಪ್ರಮುಖ ಜಂಕ್ಷನ್ಗಳ ಸುತ್ತಲೂ ಗೋಡೆಗಳಿಗೆ ವರ್ಣಚಿತ್ರವನ್ನು ರಚಿಸಲು ಕಲಾವಿದರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಹೊಸ ಕೋವಿಡ್ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡಿದೆ. ಮಾತು ಹೇಳುವದಕ್ಕಿಂತ ಚಿತ್ರಗಳ ಮೂಲಕ ಪ್ರಧರ್ಶನ ಮಾಡಿದರೇ ಮಾತಿನಗಿಂತ ಚಿತ್ರಗಳು ಜೋರಾಗಿ ಮಾತನಾಡುತ್ತವೆ, ಚಿತ್ರಗಳನ್ನು ನೋಡಿದ ತಕ್ಷಣವೇ ಭವಿಷ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ ಎಂದು ಅಭಯ ಫೌಂಡೇಷನ್ ಅಧ್ಯಕ್ಷರು ರೇಣಿಗುಂಟ್ಲ ರಾಮಕೃಷ್ಣ ತಿಳಿಸಿದರು.
ಈ ಸಂದರ್ಬದಲ್ಲಿ ನಾಮ ಕಾರ್ತೀಕ್, ಎಚ್.ಆರ್.ಬಳನಾಗರಾಜ್,ಬಸವರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಬಿ.ಪಂಪನಗೌಡ.ಬಳ್ಳಾರಿ.9886633682


0 Comments