ಬಳ್ಳಾರಿ ಮೇ 28. ನಗರದ ಬಸವೇಶ್ವರ ನಗರದ ಮಲ್ಲಿಕಾರ್ಜುನಗೌಡ ದಂಪತಿಗಳಿಂದ ಓಪಿಡಿ ಹತ್ತಿರದಲ್ಲಿರುವ ಚರ್ಚ್ ಹತ್ತಿರದ ಬಡ ಕುಟುಂಬಗಳಿಗೆ ಅಕ್ಕಿ,ಬೇಳೆ,ಬೆಲ್ಲ,ಉಪ್ಮಾರವೆ,ಎಣ್ಣೆ, ಟೀ ಪುಡಿ, ಸೋಪುಗಳ ಇತ್ಯಾದಿ ಆಹಾರ ಧಾನ್ಯದ 100 ಕಿಟ್ಗಳನ್ನು ವಿತರಣೆ ಮಾಡಿದ್ದಾರೆ. ಮತ್ತು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು,ಮಾಸ್ಕ್ ಧರಿಸಲು ಮತ್ತು ಕೈಗಳನ್ನು ಆಗಾಗ ಚನ್ನಾಗಿ ಸೋಪ್ ಅಥವಾ ಸಾನಿಟೈಜರಿಂದ ತೊಳೆದುಕೊಳ್ಳಬೇಕೆಂದು, ಈ ಸಮಯದಲ್ಲಿ ಭಯಪಡಬೇಕಾದ ಆವಶ್ಯಕತೆ ಇಲ್ಲ ಎಚ್ಚರದಿಂದಿರಬೇಕೆಂದು ಕೋವಿಡ್ ಜಾಗೃತಿ ಅರಿವನ್ನು ಮೂಡಿಸಿದರು.ಅಲ್ಲಿನ ಜನರು ಇವರ ಸೇವೆಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

0 Comments