*ಬೆಡ್ಗಳ ಆವಶ್ಯಕತೆ ಬಂದರೇ ನಾರಾಭರತ್ ರೆಡ್ಡಿಯವರನ್ನು ತಪ್ಪದೇ ಸಂಪರ್ಕಿಸುತ್ತೇವೆ
-ಡಿಹೆಚ್ಓ ಜನಾರ್ಧನ್*
ಬಳ್ಳಾರಿ ಮೇ 28. ಬಳ್ಳಾರಿ ತಾಲ್ಲೂಕಿನ ಪ್ರಭಾವಿ ರಾಜಕಾರಣಿ ಪುತ್ರ ಜಿಲ್ಲಾ ಪಂಚಾಯತಿ ಸದಸ್ಯರು ಆಗಿರುವ ನಾರಾ ಭರತ್ರೆಡ್ಡಿ ಅವರು ಕೋವಿಡ್ ಸೆಂಟರ್ 50 ಆಕ್ಸಿಜನ್ ಬೆಡ್ಗಳ ಆಸ್ಪತ್ರೆ ಮಾಡಲು ಅನುಮತಿಗಾಗಿ ನಮಗೆ ಯಾವದೇ ಅರ್ಜಿ ಸಲ್ಲಿಕೆ ಅಗಿಲ್ಲ ಎಂದು ಜಿಲ್ಲಾ ಹೆಲ್ತ್ ಆಫೀಸರ್ (ಡಿಹೆಚ್ಓ) ಜನರ್ಧನ್ ತಿಳಿಸಿದ್ದಾರೆ.ಬಸ್ ಪರವಾನಿಗೆ ಕೇಳಿದ್ದರು ಇದೇ ರೀತಿಯಲ್ಲಿ ಸರ್ಕಾರದ ಸಾರಿಗೆ ಸಂಸ್ಥೆ ಕೂಡಾ ಕೇಳಿದ್ದರು ಪ್ರಸ್ತುತ ಪರಿಸ್ಥಿತಿನಲ್ಲಿ ಬಸ್ ಅವಶ್ಯಕತೆ ಇರುವುದಿಲ್ಲ ಎಂದು ಯಾರಿಗೂ ಪರವಾನಿಗೆ ಕೊಟ್ಟಿಲ್ಲ ಅಂದರು. 50,ಆಕ್ಸಿಜನ್ ಬೆಡ್ ಗಳ ಆಸ್ಪತ್ರೆಗೆ ಅವರು ಪರವಾನಿಗೆ ಕೇಳಿರಲಿಲ್ಲ, ಕೇಳಿದರೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಅವಶ್ಯಕತೆ ಇದ್ದರೆ ತಪ್ಪದೆ ಅನುಮತಿ ನೀಡುತ್ತೇವೆ ಎಂದು ನಮ್ಮ ಪ್ರತಿನಿಧಿ ಸಂಪರ್ಕಿಸಿದಾಗ ದೂರವಾಣಿ ಮೂಲಕ ತಿಳಿಸಿದ್ದಾರೆ. ಜಿಲ್ಲಾಡಳಿತ ಕೊರೊನ ಹಿನ್ನೆಲೆಯಲ್ಲಿ ಎಲ್ಲರು ಸಹಾಯ ತೆಗೆದುಕೊಳ್ಳುತ್ತದೆ. ಅವಶ್ಯಕತೆ ಇದ್ದರೆ ನಾರಾ ಭಾರತ್ರೆಡ್ಡಿಗೆ ನಾವು ನೇರವಾಗಿ ಸಂಪರ್ಕ ಮಾಡುತ್ತಿವೆ ಎಂದರು.ಜನರ ಅರೋಗ್ಯ ವಿಚಾರದಲ್ಲಿ ಯಾವುದೇ ಪಕ್ಷಪಾತ ವಿರೋಧ ಮಾಡುವ ಆವಶ್ಯಕತೆ ಏನಿದೆ ಎಂದರು..ನಮಗೆ ಎಲ್ಲರು ಒಂದೇ ಸರಿಸಮಾನ ಎಂದರು. ರೆಡ್ಡಿ ಸಮಾಜದ ಅವರು ಅನುಮತಿ ಕೇಳಿದರು ಅವರಿಗೆ ಅನುಮತಿ ನೀಡಿದ್ದೇವೆ ಎಂದರು.ಜಿಲ್ಲಾಧಿಕಾರಿಗಳು ಜನರ ಅರೋಗ್ಯ ವಿಚಾರದಲ್ಲಿ ತುಂಬಾ ಶ್ರಮವಹಿಸಿ ಹಗಲಿರುಳು ಕೆಲಸ ಮಾಡುತಿದ್ದಾರೆ ಎಂದು ಜನರು ಅಭಿಪ್ರಾಯ ವ್ಯಕ್ತವಾಗ್ತಾಯಿದೆ, ರಾಜಕೀಯ ಮಾಡುವ ಸಮಯವು ಅಲ್ಲ ಇದು ಎಂದರು. ಸಹಾಯ ಮಾಡುವ ಮನಸ್ಸು ಇದ್ದರೆ ಇನ್ನೊಂದು ರೀತಿಯಲ್ಲಿ ಕೂಡ ಮಾಡಬಹುದು ಎಂದರು.
ವರದಿ : ಬಿ.ಪಂಪನಗೌಡ.ಬಳ್ಳಾರಿ.9886633682

0 Comments