Ticker

6/recent/ticker-posts

Ad Code

Responsive Advertisement

1.200 ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರಧಾನ್ಯಗಳ ಕಿಟ್‍

ಸಾಂಕ್ರಾಮಿಕ ರೋಗದಿಂದ ಉಂಟಾದ ಅನಿಶ್ಚಿತತೆಯಿಂದಾಗಿ ಸಕಾಲಕ್ಕೆ ಸಂಬಳ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ 1,200 ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಹಾಯ ಮಾಡಲು ಬಿಎನ್‍ಎಂ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುವ ಬ್ರಿಗೇಡ್ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಟ ಭಾರತ್ ಪ್ರತಿಷ್ಟನ ಕೈಜೋಡಿಸಿದೆ.


ಶನಿವಾರ, ಬಿಎನ್‍ಎಂ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ಯಾಂಪಸ್‍ನಲ್ಲಿ ತಮ್ಮ ವಿದ್ಯಾರ್ಥಿಗಳು ಮತ್ತು ಯುವ ಬ್ರಿಗೇಡ್ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಟ ಭಾರತೀಯ ಪ್ರತಿಷ್ಟನದ ಸ್ವಯಂಸೇವಕರು ಆಹಾರಧಾನ್ಯಗಳ ಕಿಟ್‍ಗಳನ್ನು ತಯಾರಿಸಿದರು. ಕಿಟ್‍ಗಳನ್ನು ಇಂದು ಕೆಲವು ಆಯ್ದ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಉಳಿದ ಕಿಟ್‍ಗಳನ್ನು ಮುಂದಿನ ಎರಡು ದಿನಗಳಲ್ಲಿ ಅರ್ಹ ಶಿಕ್ಷಕರ ಮನೆಗಳಿಗೆ ವಿತರಿಸಲಾಗುವುದು. ಪ್ರತಿ ಕಿಟ್‍ನಲ್ಲಿ ಉತ್ತಮ ಗುಣಮಟ್ಟದ ಅಕ್ಕಿ (10 ಕೆಜಿ), ತೊಗರಿಬೇಳೆ (2 ಕೆಜಿ), ಬೆಲ್ಲ (2 ಕೆಜಿ), ರವಾ (2 ಕೆಜಿ), ಅವಲಕ್ಕಿ (2 ಕೆಜಿ), ಹಿಟ್ಟು (2 ಕೆಜಿ), ಸಕ್ಕರೆ (1 ಕೆಜಿ), ಕಡ್ಲೆಬೇಳೆ (1 ಕೆಜಿ) ಮತ್ತು ಸೂರ್ಯಕಾಂತಿ ಎಣ್ಣೆ (1ಲೀಟರ್) ಒಳಗೊಂಡಿದೆ. 

ಈ ವಿತರಣಾ ಕಾರ್ಯದ ಕುರಿತು ಮಾತನಾಡಿದ ಯುವ ಬ್ರಿಗೇಡ್‍ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, “ಕೋವಿಡ್ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳು ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ ಮತ್ತು ಶಾಲಾ ಮಾಲೀಕರು ಶಿಕ್ಷಕರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಅಂತಹ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಇವರಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಬಿಎನ್‍ಎಂಐಟಿ ಕಾರ್ಯದರ್ಶಿ ನಾರಾಯಣ್ ರಾವ್ ಮಾನೆ ಮತ್ತು ಸ್ವಾಮಿ ವಿವೇಕಾನಂದ ಶ್ರೇಷ್ಟ ಭಾರತ್ ಪ್ರತಿμÁ್ಠನದ ಅಧ್ಯಕ್ಷ ಆನಂದ್ ಸಹ ಪಾಲ್ಗೊಂಡಿದ್ದರು. ವಿವೇಕಾನಂದ ಶ್ರೇಷ್ಠ ಭಾರತ್ ಪ್ರತಿಷ್ಟನ ಮತ್ತು ಯುವ ಬ್ರಿಗೇಡ್ ಬಿಎನ್‍ಎಂ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಅನೇಕ ವರ್ಷಗಳಿಂದ ಸಾಮಾಜಿಕ ಸೇವೆ ಮತ್ತು ಉತ್ತಮ ಸಮಾಜ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿದ್ದೇವೆ

ಆಸ್ಪತ್ರೆಯ ಸಿಬ್ಬಂದಿ, ಬಿಬಿಎಂಪಿ ಸ್ವೀಪರ್‍ಗಳು ಮತ್ತು ಕಸ ಸಂಗ್ರಹಕಾರರು ಮತ್ತು ಗುಳೆ ವಲಸೆ ಕಾರ್ಮಿಕರು ಮತ್ತು ಕೊಳೆಗೇರಿ ನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ನಾವು 2020 ರಲ್ಲಿ ಸಹ ನಮ್ಮ ಕೋವಿಡ್ ಪರಿಹಾರ ಕಾರ್ಯವನ್ನು ಪ್ರಾರಂಭಿಸಿದ್ದೇವೆ. ನಾವು ಅವರಿಗೆ ಆಹಾರದ ಪ್ಯಾಕೆಟ್‍ಗಳನ್ನು ವಿತರಿಸಿದ್ದೇವೆ. ಈ ವರ್ಷವೂ ನಾವು ಈ ಕೋವಿಡ್ ಎರಡನೇ ಅಲೆಯಲ್ಲಿ ನಮ್ಮ ಪರಿಹಾರ ಕಾರ್ಯಗಳನ್ನು ಮುಂದುವರಿಸುತ್ತಿದ್ದೇವೆ ”ಎಂದು ನಾರಾಯಣ್ ರಾವ್ ಮಾನೆ ಹೇಳಿದರು.

"ಸಾಂಕ್ರಾಮಿಕ ರೋಗದ ಎರಡನೇ ತರಂಗದಲ್ಲಿ, ನಾವು ಪ್ರತ್ಯೇಕವಾಗಿ 8,000 ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯಕರವಾದ ಮತ್ತು ಪೌಷ್ಠಿಕಾಂಶಯುಕ್ತ ಊಟವನ್ನು ತಲುಪಿಸಿದ್ದೇವೆ. ನಮ್ಮ ಸ್ವಯಂಸೇವಕರು ಕೊಳೆಗೇರಿಗಳು, ವಲಸೆ ಕಾರ್ಮಿಕರ ಶಿಬಿರಗಳು, ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಆಹಾರವನ್ನು ವಿತರಿಸಿದರು" ಎಂದು ಶ್ರೀ ಆನಂದ್ ಈ ಸಂದರ್ಭದಲ್ಲಿ ತಿಳಿಸಿದರು.


ADVT :




Post a Comment

0 Comments

Ad Code

Responsive Advertisement