ಕಂದಾಯ ಸಚಿವ ಆರ್ ಅಶೋಕ್ ಭಾನುವಾರ ಕುರುಬರಹಳ್ಳಿ ಗ್ರಾಮದ ತಾವರಕೆರೆಯಲ್ಲಿರುವ ಚಿತಾಗಾರ ವ್ಯವಸ್ಥೆ ಮಾಡಿರುವ ಮೈದಾನವನ್ನ ಪರಿಶೀಲಿಸಿದರು. ಅಲ್ಲಿನ ಪ್ರತಿ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದ ಸಚಿವರು ಕೆಲಸಗಾರರಿಗೆ ಶೀಘ್ರದಲ್ಲಿ ಆದ್ಯತೆಯ ಮೇರೆಗೆ ಎಲ್ಲಾ ಕಾರ್ಯಗಳನ್ನ ಪೂರ್ಣಗೊಳಿಸುವಂತೆ ಸೂಚಿಸದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ "ಈ ನೂತನ ಸ್ಮಶಾನದಿಂದಾಗಿ ನಗರದ ಚಿತಾಗಾರದ ಮುಂದೆ ಸಾಲು, ಸಾಲಾಗಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಕಡಿಮೆಯಾಗಲಿದೆ" ಎಂದರು.

0 Comments