Ticker

6/recent/ticker-posts

Ad Code

Responsive Advertisement

`ಲ್ಯಾಂಡ್ ಮಾಫಿಯಾ ನಿಯಂತ್ರಿಸಲು ನನ್ನಿಂದಲೂ ಸಾಧ್ಯವಿಲ್ಲ’

 ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಕಂದಾಯ ಸಚಿವನಾಗಿ ತನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸುತ್ತಿರುವ ಭೂ ಮಾಫಿಯಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಗೇಮರ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಭ್ರಷ್ಟ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ದಂಡನಾತ್ಮಕ ಕ್ರಮ ಮಾಫಿಯಾ ನಿಯಂತ್ರಣಕ್ಕೆ ಕಾರಣವಾಗುವುದಿಲ್ಲ ಎಂದು ಅವರು ಹೇಳಿದರು.


ವಿಧಾನಸಭೆ ಅಧಿವೇಶನದ ವೇಳೆ ಮಾತನಾಡಿದ ಸಚಿವ ಅಶೋಕ್ ``ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲು ಬಿಲ್ಡರ್‍ಗೆ ಅವಕಾಶ ನೀಡಿದ್ದಕ್ಕಾಗಿ ನಾವು ಅಧಿಕಾರಿಗಳನ್ನು ಅಮಾನತುಗೊಳಿಸುತ್ತೇವೆ . ಆದರೆ ಅವರು ಯಾವುದೇ ಸಮಯದಲ್ಲಿ ಮತ್ತೆ ಇಲಾಖೆ ಕಾರ್ಯಕ್ಕೆ ಮರಳಬಹುದಾಗಿದೆ." ಎಂದು ಒಪ್ಪಿಕೊಂಡರು. ಆನೆಕಲ್ ತಾಲ್ಲೂಕು ಸಮೀಪದ ಹುಲಿಮಂಗಲ ಗ್ರಾಮದಲ್ಲಿ ದಾಖಲೆಗಳಿಲ್ಲದೆ ಲೇಔಟ್ ಅಭಿವೃದ್ಧಿ ಪಡಿಸಲಾಗಿದೆಮತ್ತು 41 ಸೈಟ್ ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗಿದೆಎಂದು ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್ ಹೇಳಿದ್ದಾರೆ. "ಕಂದಾಯ ಇಲಾಖೆಯ ವಿಶೇಷ ಉಪ ಆಯುಕ್ತರು ಮುಖ್ಯ ಕಾರ್ಯದರ್ಶಿಗಿಂತ ಹೆಚ್ಚು ಪವರ್ ಫುಲ್" ಎಂದು ಅವರು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಅಕ್ರಮ ಸೈಟ್ ಹಾಗೂ ಅತಿಕ್ರಮಣಗಳ ಬಗ್ಗೆ ಸುದೀರ್ಘ ವರದಿಯನ್ನು ಮಂಡಿಸಿರುವ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಕೂಡ ಆ ಸ್ಥಳದಲ್ಲಿ ಭೂಮಿಯನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ, ಆದರೆ ಬಿಲ್ಡರ್‍ಗಳು ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಭೂಮಿಯನ್ನು ಪರಿವರ್ತಿಸಲಾಗಿದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಸಂಪುಟದಲ್ಲಿ ಅತ್ಯಂತ ಪವರ್ ಫುಲ್ ಮಂತ್ರಿಗಳಲ್ಲಿ ಒಬ್ಬರಾದ ಅಶೋಕ ಅವರ ಕೈಗಳನ್ನು ಕಟ್ಟಿಹಾಕಲಾಗಿದೆ ಎಂದು ಒಪ್ಪಿಕೊಂಡರು.. ಕೆ.ಆರ್.ಪುರಂನಲ್ಲಿ 160 ಕೋಟಿ ಮೌಲ್ಯದ ಸರ್ಕಾರಿ ಜಮೀನಿನಲ್ಲಿ ಬಿಲ್ಡರ್ ಒಬ್ಬರು ಬಹುಮಹಡಿ ಅಪಾರ್ಟ್ ಮೆಂಟ್ ನಿರ್ಮಿಸಿದ್ದಾರೆ. ಕಂಪನಿಯು ಫ್ಲ್ಯಾಟ್‍ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.ನಾನು ಅದರ ಬಗ್ಗೆ ತಿಳಿದಾಗ, ನಾನು ಅದರಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಅಮಾನತು ಮಾಡಿದೆ. ಆದರೆ ನಾಲ್ಕು ಗಂಟೆಗಳಲ್ಲಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯನ್ನು ಸಂಪರ್ಕಿಸಿ, ಮತ್ತೆ ತಮ್ಮ ಕುರ್ಚಿಗಳಲ್ಲಿ ಕುಳಿತಿದ್ದಾರೆ. ನಾನು ಅವರನ್ನು ತುಮಕೂರಿಗೆ ವರ್ಗಾಯಿಸಲು ಆದೇಶಿಸಿದೆ. ಆದರೆ ಅವರು ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಾನಕ್ಕೆ ಮರಳಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಅನೇಕ ಸರ್ಕಾರಿ ಜಮೀನುಗಳನ್ನು ಅತಿಕ್ರಮಿಸಲಾಗಿದೆ

``ನಾನು ಪ್ರತಿಪಕ್ಷದಲ್ಲಿದ್ದಾಗ, ನಾನು ಈ ವಿಷಯವನ್ನು ವಿಧಾನಸಭೆಯಲ್ಲಿ ಹಲವಾರು ಬಾರಿ ಎತ್ತಿದ್ದೆ. ಆದರೆ ನಾನು ಮಂತ್ರಿಯಾಗಿ ಈ ಸ್ಥಳದಲ್ಲಿದ್ದಾಗಲೂ ಅವರನ್ನು ನಿಭಾಯಿಸುವುದು ತುಂಬಾ ಕಷ್ಟ ಎಂದು ನಾನು ಅರಿತುಕೊಂಡೆ. ಅವರು ತುಂಬಾ ಪವರ್ ಫುಲ್." ಅಶೋಕ್ ಹೇಳಿದ್ದಾರೆ. ಕೆರೆಗಳು ಹಾಗೂ ಜಲಮೂಲಗಳು ಸೇರಿದಂತೆ ಇಂತಹ ಅನೇಕ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲಾಗಿದೆ. "ಸರ್ಕಾರದ ನಿರ್ದೇಶನದ ನಂತರ, ಜಿಲ್ಲಾಧಿಕಾರಿಗಳು ಅತಿಕ್ರಮಣಗಳನ್ನು ತೆರವುಗೊಳಿಸುತ್ತಾರೆ ಮತ್ತು ಆಸ್ತಿ ಸರ್ಕಾರಕ್ಕೆ ಸೇರಿದೆ ಎಂದು ಘೋಷಿಸುವ ಫಲಕ ಹಾಕುತ್ತಾರೆ.ಆದರೆ ಮರುದಿನ, ಬೋರ್ಡ್ ಕಣ್ಮರೆಯಾಗುತ್ತದೆ ಮತ್ತು ಅತಿಕ್ರಮಣಕಾರರು ಮತ್ತೆ ಅದೇ ಜಾಗದಲ್ಲಿ ತಮ್ಮ ಕಾಮಗಾರಿ ಮುಂದುವರಿಸುತ್ತಾರೆ." ಅಶೋಕ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 


Post a Comment

0 Comments

Ad Code

Responsive Advertisement