ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ಆಸೀಪ್ ಪಾಷ ಈತನು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಹಳೆಯ ಎಂ ಓ ಆಸಾಮಿಯಾಗಿದ್ದು, 2012 ನೇ ಸಾಲಿನಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈತನು ಮತ್ತೊಬ್ಬ ಆರೋಪಿ ಅರ್ಷದ್ಖಾನ್ ಜೊತೆಯಲ್ಲಿ ಸೇರಿಕೊಂಡು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾಗಿ ತಿಳಿದು ಬಂದಿರುತ್ತದೆ.
ಆರೋಪಿ ಅರ್ಷದ್ ಖಾನ್ ಈತನು ಆರ್.ಟಿ.ನಗರ ಪೊಲೀಸ್ ಠಾಣೆಯ ಹಳೆಯ ಎಂ.ಓ. ಆಸಾಮಿಯಾಗಿದ್ದು, 2020 ನೇ ಸಾಲಿನಲ್ಲಿ ಆರ್.ಟಿ.ನಗರ ಪೊಲೀಸ್ ಠಾಣೆಯ ದರೋಡೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ನವೆಂಬರ್ 2020 ರಲ್ಲಿ ಬಿಡುಗಡೆಯಾಗಿರುತ್ತಾನೆ. ಇಬ್ಬರು ಆರೋಪಿ ಜೊತೆಗೂಡಿ ಬೆಳಿಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗಮನಿಸಿಕೊಂಡು ಅವರುಗಳ ಸರಗಳ್ಳತನ ಮಾಡುತ್ತಿದ್ದಾಗಿ ತನಿಖೆಯಿಂದ ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆ-1 ದ್ವಿಚಕ್ರವಾಹನ ಕಳವು ಪ್ರಕರಣ, ಹೆಬ್ಬಾಳ -1, ಬೈಯಪ್ಪನಹಳ್ಳಿ -2, ವಿವೇಕ್ ನಗರ ಪೊಲೀಸ್ ಠಾಣೆಯ -1 ಸರಗಳ್ಳತನ ಒಟ್ಟು 4 ಸರಗಳ್ಳತನ ಮತ್ತು 1-ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ.
ಪ್ರಕರಣದಲ್ಲಿ ಶ್ರೀಮತಿ ರೀನಾ ಎನ್ ಸುವರ್ಣ, ಎಸಿಪಿ, ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್., ಪೊಲೀಸ್ ಇನ್ಸ್ಪೆಕ್ಟರ್, ಸಂಜಯನಗರ. ರಘುಪತಿ ಹೆಚ್.ಎಸ್., ಶಿವಮೂರ್ತಿ, ಪ್ರದೀಪ್ ಕುಮಾರ್, ಪಾಂಡುರಂಗ, ಅರುಣ್ ಕುಮಾರ್.ವಿ.ಬಿ, , ಪ್ರದೀಪ.ಎಂ ಇವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments