ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ಹಾಗೂ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ 23-4-2023 ಭಾನುವಾರ "ಅಕ್ಷಯ ತೃತೀಯಾ" ದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಲಾಗುವುದು. ವಿಶೇಷವಾಗಿ ಶ್ರೀ ಗಂಧಲೇಪನ ಸೇವೆಯನ್ನು ಮಾಡಿಸುವಂತಹ ಭಕ್ತರು ಆನ್ಲೈನ್ ಈ 9449133929 ನಂಬರ್ ವಾಟ್ಸಾಪ್ ಮುಖಾಂತರ ಶ್ರೀ ಗಂಧ ಲೇಪನದ ಅಲಂಕಾರದ ಸೇವೆಯಲ್ಲಿ ಭಾಗವಹಿಸಿ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಈ ದಿನ ಸಂಜೆ 6-30ಕ್ಕೆ ಐಶ್ವರ್ಯ ಮಹೇಶ್ ಮತ್ತು ವೃಂದದಿಂದ "ದಾಸವಾಣಿ" ಕಾರ್ಯಕ್ರಮವು ನೆರವೇರುವುದು.
ಹೆಚ್ಚಿನ ಮಾಹಿತಿಗಾಗಿ - 9945429129-9448847586- 08022443962 - ಶ್ರೀ ಗಂಧದ ಲೇಪನ ಸೇವೆಯಲ್ಲಿ ಭಾಗವಹಿಸಿದ ಭಕ್ತರಿಗೆ ಶ್ರೀಗಂಧದ ಪ್ರಸಾದವನ್ನು ಮಾರನೇ ದಿನ 24--4-2023 ರಂದು ವಿತರಿಸಲಾಗುವುದು.

0 Comments