ಕರ್ನಾಟಕ ರಾಜ್ಯದ ಕೇಂದ್ರೀಯ ಅರಸೇನಾ ಪಡೆಯ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ. ಕರ್ನಾಟಕ ರಾಜ್ಯದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರು ಮತ್ತು ವೀರಾಂಗಣಿಯರ ಒಳತಿಗಾಗಿ ಅವರ ನಿವೃತ್ತಿ ನಂತರದ ಸರ್ಕಾರಿ ಹಾಗು ಸರ್ಕಾರೇತರ ಸೌಲಭ್ಯಗಳನ್ನು ಪ್ರತಿ ಯೋಧರಿಗೂ ಸಲ್ಲುವಂತೆ ಶ್ರಮಿಸುತ್ತಿರುವ ಸಂಘವಾಗಿರುತ್ತದೆ.
ಸುಮಾರು 25000 ಮಾಜಿ ಯೋಧರು ಮತ್ತು 15,000 ಸೇವಾ ನಿರತ ಯೋಧರು ಇರುವುದಾಗಿ ಅಂದಾಜಿಸಲಾಗಿದೆ. ಎಪ್ರೀಲ್ 16. 2023. ರಂದು ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಎಂ ಪಿ ಎನ್ ರೆಡ್ಡಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಅನಂತ ರಾಜ್ ಗೋಪಾಲ್ ಟಿ .ವಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಪ್ರತಿ ಜಿಲ್ಲೆಗಳಿಂದ ಜಿಲ್ಲಾ ಪದಾಧಿಕಾರಿಗಳು ಹಾಗು ಸೇನಾ ಸಿಬ್ಬಂದ್ಸಿ ಯ ಪೋಷಕರು ಸೇರಿದ್ದರು.

0 Comments