ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿರುವ ಶ್ರೀ ವಿಶ್ವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆಬ್ರವರಿ 18, ಶನಿವಾರ ಸಂಜೆ ಏರ್ಪಡಿಸಿದ್ದ "ಭಕ್ತಿ ಸಂಗೀತ" ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶ್ರೀಮತಿ ರಮ್ಯಾ ಭಾರಧ್ವಾಜ್ ಮತ್ತು ಶ್ರೀ ಇಂಚರ ಪ್ರವೀಣ್ ಕುಮಾರ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವಾದ್ಯ ಸಹಕಾರದಲ್ಲಿ, ಶ್ರೀ ದುಷ್ಯಂತ್ (ಕೀ-ಬೋಡ್೯), ಶ್ರೀ ಗುರುರಾಜ್ ಹೊಳೆನರಸೀಪುರ (ತಬಲಾ) ಮತ್ತು ಶ್ರೀ ಉಮಾ ಪ್ರಸಾದ್ (ರಿದಂಪ್ಯಾಡ್) ಸಾಥ್ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಪದಾಧಿಕಾರಿಗಳು ಎಲ್ಲಾ ಕಲಾವಿದರುಗಳಿಗೆ ಅಭಿನಂದನೆ ಸಲ್ಲಿಸಿದರು.

0 Comments