ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 2, ಸೋಮವಾರದಂದು ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ(ಟಿಟಿಡಿ)ದ ಬೃಹತ್ ವೇದಿಕೆಯಲ್ಲಿ
ನೃತ್ಯ ದಿಶಾ ಟ್ರಸ್ಟ್ ನ ಕಲಾವಿದರಿಂದ
ನೃತ್ಯ ಸೇವಾ ಜರುಗಿತು. ಗುರು ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು.
ಸಂಸ್ಥೆಯ ಕಲಾವಿದರು ನೆರೆದಂತಹ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮ ಸುಮಾರು 2 ಗಂಟೆ ಕಾಲ ನಡೆಯಿತು.
ಮೊದಲಿಗೆ ಸಾಂಪ್ರದಾಯಿಕ ಪುಷ್ಪಾಂಜಲಿ ಇಂದ ಕಾರ್ಯಕ್ರಮ ಪ್ರಾರಂಭವಾಗಿ, ವಿಘ್ನ ವಿನಾಶಕ ಗಣಪನ ವಂದಿಸಿತು. ಸಿಂಧುಭೈರವಿ ರಾಗದ ಪುರಂದರದಾಸರ ವೆಂಕಟಾಚಲನಿಲಯಂ, ನರಸಿಂಹ , ಸುಬ್ರಹ್ಮಣ್ಯನ ಕೃತಿಗಳು, ಕೃಷ್ಣನ ರಾಸಲೀಲೆಗಳು, ಕೃಷ್ಣ ಭಜನ್, ಕೊರವಂಜಿ, ನೃತ್ಯಗಳನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ ಪ್ರದರ್ಶನವಾಗಿದ್ದು ಅಷ್ಟಲಕ್ಷ್ಮಿ ವೈಭವ ನೃತ್ಯ ರೂಪಕ. ಈ ನೃತ್ಯ ರೂಪಕ ಆಕರ್ಷಣಿವಾಗಿದ್ದು, ನೃತ್ಯ ಸಂಯೋಜನೆ ಅದ್ಭುತವಾಗಿತ್ತು.
ಸಂಸ್ಥೆಯ ವಿದ್ಯಾರ್ಥಿಗಳಾದ ಮನಿಷಾ, ಸಹನ, ನಮಿತಾ, ದೀಪರಾಣಿ, ಸಹನಾ ಎಚ್. ಬಿ , ಸಂಧ್ಯಾ, ಸ್ಪೂರ್ತಿ, ದಿಶಾ, ದೇಷಿಕಾ, ಭೂಮಿಕಾ, ಲಿಜ, ನಿಹಾರಿಕ, ಕೀರ್ತನ, ಮಿತ್ರಶ್ರೀ, ಸುಹನಿ, ಶ್ರಾವಣಿ, ವಾನ್ಯ, ಖುಷಿ, ದಶಮಿ, ಮಾನ್ಯತಾ, ಚಾರ್ವಂಗಿ, ಲಿಖಿತ ಇವರುಗಳು ನರ್ತಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಟಿಟಿಡಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗರಾವ್ ಅವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.





0 Comments