ಡಾ. ದೊಡ್ಡರಂಗೇಗೌಡ
ಶರಣೆಂಬೆ ಅರಿವಿಗೆ
ಶರಣೆಂಬೆ ಗುರುವಿಗೆ
ಶರಣೆಂಬೆ ಸಾಹಿತ್ಯ ಸರಸ್ವತಿಗೆ
ಶರಣೆಂಬೆ ಸಾಹಿತ್ಯ ಸಂಗೀತ ಸರಸ್ವತಿಗೆ
ಶರಣು ಶರಣೆಂಬೆನಿಮ್ಮೆಲ್ಲರಿಗೆ.
ಅಕ್ಕರೆಯ ಸುಮಾರು ಏಳು ಕೋಟಿ ಕನ್ನಡಿಗರಿಗೆ ವಂದನೆ... ಶುಭ... ವಂದನೆ ನಿಮ್ಮೆಲ್ಲರಿಗೆ. ಕನ್ನಡ ತಾಯಿ ಭುವನೇಶ್ವರಿ ಹೃದಯ ತುಂಬಿ ನನಗೆ ಆಶೀರ್ವದಿಸಿದ್ದಾಳೆ. ಇದು ನನ್ನ ಬಾಳಿನ ಭಾಗ್ಯ. ನನ್ನ ನಲ್ಮೆಯ ಅಪ್ಪ ಅಮ್ಮ ಮೇಲಿಂದಲೇಹರಸಿದ್ದಾರೆ. ಇದು ನನ್ನ ಬದುಕಿನ ಸುಕೃತ.
ವೇದಿಕೆಯ ಮೇಲೆ ಆಸೀನರಾಗಿರುವ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೇ, ನಿಮಗಿದೋ ನನ್ನ ನಮಸ್ಕಾರಗಳು. ನಿಮ್ಮಿಂದ ಈ ಸಮ್ಮೇಳನ ಮತ್ತು ನಮ್ಮ ಅಕ್ಕರೆಯ ರಾಜ್ಯ ಬಹಳಷ್ಟು ಪ್ರಗತಿಯನ್ನೂ ಸಾಹಿತ್ಯದ ಸಂವರ್ಧನೆಯನ್ನೂನಿರೀಕ್ಷಿಸುತ್ತದೆ. ಈ ದಿಸೆಯಲ್ಲಿ ಏಳು ಕೋಟಿ ಕನ್ನಡಿಗರ ಪರವಾಗಿ ನಾನಿಲ್ಲಿ ಮಾತನಾಡುತ್ತಿದ್ದೇನೆ. ತಾವು ಪರಾಂಬರಿಸಬೇಕಾಗಿ ವಿನಂತಿ.
ಇನ್ನು ಈ ಸಮ್ಮೇಳನ ಇಷ್ಟು ವಿಜೃಂಭಣೆಯಿಂದ ಜರುಗಲು ಮುಖ್ಯ ರೂವಾರಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಜನತೆಯ ಅಭಿಮತಗಳ ದಾಖಲೆ ಬರೆದ ಕನ್ನಡಿಗರೆಲ್ಲರ ಸ್ನೇಹ ಪ್ರೀತಿ ವಿಶ್ವಾಸಗಳಿಗೆಕಾರಣರಾದ, ನಮ್ಮ ನಿಮ್ಮೆಲ್ಲರ ನಂಬಿಕೆಯ “ನಾಡೋಜ” ಡಾ. ಮಹೇಶ ಜೋಶಿ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೂ ನನ್ನ ನಮನಗಳು.
ಜಿಲ್ಲಾ ಉಸ್ತುವಾರಿ ಸಚಿವರಾದ ನಲ್ಮೆಯ ಅರಬೈಲ್ಶಿವರಾಮಹೆಬ್
ಶುಭ ಸಿರಿ ಹಾವೇರಿ
ಯಾವ ತಾಣದಿ ಕನಕ ದಾಸರು
ಕೀರ್ತನೆ ಝುರಿಮೊರೆದರೋ
ಅದೇ ತಾಣವಿದು ಶುಭ ಸಿರಿ... ಹಾವೇರಿ!
ಯಾವ ನೆಲದಲಿಶಿಶುನಾಳಶರೀಫರು
ತತ್ವಜ್ಞಾನಅರುಹಿದರೋ
ಅದೇ ನೆಲವಿದುಶುಭಸಿರಿ ಹಾವೇರಿ
ಯಾವ ನೆಲೆಗಳಲಿ ಸರ್ವಜ್ಞ ತ್ರಿಪದಿಗಳನುಡಿದರೋ
ಅದೇ ನೆಲೆ ಇದುವೆ ಶುಭ ಸಿರಿ ಹಾವೇರಿ
ಯಾವ ಭುವಿಯಲ್ಲಿಹಾನಗಲ್ಲ ಕುಮಾರಸ್ವಾಮಿ
ಧರ್ಮವಹರಡಿದರೋ ಅದೇ ಭುವಿಯಿದು ಶುಭ ಸಿರಿ ಹಾವೇರಿ
ಈ ಭಾಗದ ಜ್ಞಾನಸಂತರಾದ ಕನಕ, ಸಮಾಜಮುಖಿ ಆಶುಕವಿ ಸರ್ವಜ್ಞ, ಸಂತ ಶರೀ¥s಼, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ “ಗಾನಯೋಗಿ” ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜಗವಾಯಿಗಳು, ಕಾದಂಬರಿ ಪಿತಾಮಹರು ಎನ್ನಿಸಿಕೊಂಡ ಹಿರಿಯ ಲೇಖಕರಾದಗಳಗನಾಥರು, ಜ್ಞಾನಪೀಠ ಪುರಸ್ಕಾರ ಪಡೆದ “ಭಾರತ ಸಿಂಧುರಶ್ಮಿ” ಬರೆದ ಡಾ. ವಿ.ಕೃ. ಗೋಕಾಕ್ ಅವರು, ಸ್ವಾತಂತ್ರಹೋರಾಟಗಾರರಾದ ಮೈಲಾರ ಮಹಾದೇವ ಅವರು, ಕನ್ನಡದ ಸುಪ್ರಸಿದ್ಧ ಕವಿ ಸು.ರಂ. ಎಕ್ಕುಂಡಿ ಅವರು, ಡಾ. ಹಿರೇಮಲ್ಲೂರುಈಶ್ವರನ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದುದು, ಆ ಬಗೆಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಜಾನಪದದಿಂದ ಪ್ರಾರಂಭವಾದ ಕನ್ನಡ ನುಡಿ ಇಂದಿನವರೆಗೆ ಕಾವ್ಯ ಕಾವೇರಿಯಾಗಿ ಹರಿದು ಬಂದದ್ದು ವಿಶೇಷವಾಗಿದೆ ಕನ್ನಡ - ಕನ್ನಡಿಗ- ಕರ್ನಾಟಕ ಈ ಮೂರೂ ಒಂದರಲ್ಲಿ ಒಂದು ತಳುಕು ಹಾಕಿಕೊಂಡಿದೆ. ಕನ್ನಡ ಅಕ್ಷರಗಳುಮುದ್ದಾಗಿವೆ. ಕನ್ನಡ "ಲಿಪಿಗಳ ರಾಣಿ" ಎಂಬ ಹೊಗಳಿಕೆಗೆ ಪಾತ್ರವಾಗಿದೆ.
ನಮ್ಮ ಕನ್ನಡಕ್ಕೆ ಒಂದು ಭವ್ಯ ಪರಂಪರೆ ಇದೆ. ಇತಿಹಾಸ ಕೆದಕಿ ನೋಡಿದರೆ ಕನ್ನಡ ನುಡಿಯ ಬೇರುಗಳು ಭದ್ರವಾಗಿವೆ. ಪ್ರಾಚೀನ ಪರಂಪರೆ ಅರ್ಥಮಾಡಿಕೊಂಡರೆ ಕನ್ನಡದ ಹಿರಿಮೆ - ಗರಿಮೆಗಳು ಸ್ಪಷ್ಟವಾಗಿ ಅರಿವಾಗುತ್ತವೆ.
ಬನ್ನಿ ಬನ್ನಿಗೆಳೆಯರೇಗೆಳತಿಯರೇ
ಜಾತಿ, ಮತ, ಪಂಥ, ಪಕ್ಷ ಎಲ್ಲ ಮರೆತು
ಬನ್ನಿ ಬನ್ನಿಕನ್ನಡಿಗರೇತೋರಿ ಅಕ್ಕರೆ!
ಇಲ್ಲಿ ನಡೆದಿದೆಸಂಭ್ರಮದ ಜಾತ್ರೆ ಸಿರಿ!
ಜಾತ್ರೆಯಿದು ಕಡಿಮೆ ಇಲ್ಲ
ಇಲ್ಲಿ ಕಾಣುತ್ತಿದೆ ನಾಡು ನುಡಿ ಕಿಮ್ಮತ್ತೆಲ್ಲ!
ಇದುವೆ ನಮಗೆ ಪುಣ್ಯದ ಸಿರಿ ಬ್ರಹ್ಮಗಿರಿ
ಇಲ್ಲಿ ವಿಶ್ವ ಮುಖಿ ಕನ್ನಡದ ಮಹದೈಸಿರಿ
ನಮ್ಮ ತಾಯಿ ನಲ್ಮೆ ಅಮ್ಮ ಭುವನೇಶ್ವರಿ
ಮೂರು ದಿನದ ಜಾತ್ರೆಯಲಿ ಕನ್ನಡ ತೇರೆಳೆಯಿರಿ
ಎಲ್ಲರೂ ಒಂದಾಗಿ ಕನ್ನಡಕೆಜಯವೆನ್ನಿ ಶುಭ ಸಂದೇಶ ಸಾರಿರೀ
ಕನ್ನಡಿಗರಿಗೆ ಒಂದು ಸ್ಪಷ್ಟವಾದ ಸಂಸ್ಕೃತಿ ಇದೆ. ನಮ್ಮ ಪೂರ್ವ ಸೂರಿಗಳಿಗೆ ಕನ್ನಡದ ಕಿಮ್ಮತ್ತು ಗೊತ್ತಿದೆ. ಕನ್ನಡಿಗರ ಸ್ಫಟಿಕ ಮಣಿ ಸ್ವಭಾವವನ್ನು ಕಲ್ಲಿನ ಮೇಲೆ ಕೊರೆದಿದ್ದಾರೆ, ಕನ್ನಡಿಗರವೈವಿಧ್ಯಮಯವಾದ ವ್ಯಕ್ತಿತ್ವವನ್ನು ಚೆನ್ನಾಗಿಯೇಉಲ್ಲೇಖಿಸಲಾಗಿದೆ. ಕಪ್ಪೆ ಅರೆಭಟ್ಟನನ್ನು ಕುರಿತ ವೈಲಕ್ಷಣಗಳನ್ನು ಬಾದಾಮಿ ಶಾಸನದಲ್ಲಿಕಾಣಬಹುದಾಗಿದೆ. ಖಚಿತ ಮಾತುಗಳಲ್ಲಿ ಹೇಳಿದ್ದಾರೆ.
ಸಾಧುಂಗೆ ಸಾಧು! ಮಾಧುರ್ಯಂಗೆಮಾಧುರ್ಯನ್!
ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ್
ಮಾಧವನ್ ಈತನ್ಪೆರನಲ್ಲ
ಇದೊಂದು ಶಾಸನ ಪದ್ಯವಾದರೂ ಕನ್ನಡದ ಚಿರಂತನ ಅಸ್ಮಿತೆ ಗೊತ್ತಾಗುತ್ತದೆ.
ನಮ್ಮ ಅಭಿಮಾನದ ಹಾಡು
ಎದೆ ಎದೆಯ ದುಡಿ ಕನ್ನಡ ನುಡಿ;
ನಮ್ಮ ಕನ್ನಡ ನುಡಿ ನಾಡಿನ ಗುಡಿ!
ಬಿಟ್ಟು ಕೊಡೆವು ನಮ್ಮ ಗಡಿ
ನೆರೆ ಹೊರೆಯಗೆಳೆಯರೇ
ಆಕ್ರಮಿಸಿದರೆಹೊತ್ತಿಕೊಳ್ಳುವುದು
ನಮ್ಮ ಅಭಿಮಾನದ ಬೆಂಕಿ ಕಿಡಿ!
ಅಮ್ಮನ ಸೆರಗಿಗೆ ಸಿಡಿದರೆ ಕಿಡಿ
ಸಹಿಸೆವು ನಾವು ಸಿಡಿ-ಮಿಡಿ
ಇದು ಅಮ್ಮನ ಆಣತಿ ನಲ್ನುಡಿ
ತಂಟೆಗೆ ಬಂದರೆ ಹೋರಾಟ ದಂಡಿ
ಅತಿಕ್ರಮಿಸಬೇಡಿ, ಇಡದಿರಿ ಮುಂದಕ್ಕೆ ಒಂದೂ ಅಡಿ!
ಕನ್ನಡಿಗರು ಎಲ್ಲಿ ಹೋದರೂ ಹೇಗೇ ಇದ್ದರೂ ಮೂಲತಃ ಮೃದು ಸ್ವಭಾವದವರು, ಒಳ್ಳೆಯವರಿಗೆ ಒಳ್ಳೆಯವರು! ಮಧುರವಾಗಿ ಮಾತಾಡುವವರಿಗೆಮಧುರವಾಗಿಯೇ ಉತ್ತರ ಕೊಡುವ ಸಹೃದಯರು. ಕನ್ನಡಿಗರತಂಟೆಗೆ ಬಂದರೆ ಮಾತ್ರ ಕನ್ನಡಿಗರುಸುಮ್ಮನಿರುವುದಿಲ್ಲ. ಬಾಧಿಪ್ಪಕಲಿಗಳಿಗೆ ಕಲಿಯುಗ ವಿಪರೀತವಾಗಬಲ್ಲವರು. ಕನ್ನಡ ಜನತೆಗೆ ಕೆಲವು ವಿಶೇಷ ಗುಣಗಳಿವೆ; ಇತರ ಭಾಷೆಯ ಜನರಲ್ಲಿ ಪ್ರೀತಿ ತೋರುವುದು ಮತ್ತು ಪರಧರ್ಮವನ್ನು, ಪರವಿಚಾರವನ್ನುಸಹಿಸಿಕೊಳ್ಳುವುದು. ಪರಧರ್ಮ ಸಹಿಷ್ಣುತೆ ಕನ್ನಡಿಗರರಕ್ತದಲ್ಲೇಬೆರೆತಿದೆ. ಸಂತ ಶಿಶುನಾಳಶರೀ¥s಼ಜ್ಜರಸಾಹಿತ್ಯವನ್ನು ನಾವು ಬೇರೆಯೆಂದು ನೋಡಿಯೇ ಇಲ್ಲ. ಇದು ಕನ್ನಡಿಗರ ವೈಶಾಲ್ಯ ಗುಣ.
ನಾವು ಈಗ ಕನ್ನಡ - ಮಹಾರಾಷ್ಟçಗಳ ಗಡಿ ಸಮಸ್ಯೆಯ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇಇಲ್ಲವಾಗಿಸಬಲ್ಲರುಕನ್ನಡಿ
ಇನ್ನು ಗಡಿನಾಡಿಗೆ ಸಂಬಂಧಿಸಿದಂತೆ ಮತ್ತೊಂದು ವಿಷಯ ನಾನು ಹೇಳಲೇಬೇಕಾಗಿದೆ. ಮಹಾಜನ್ವರದಿಯೇ ಅಂತಿಮ ಎಂದು ನಮ್ಮ ನಲ್ಮೆಯ ಕರ್ನಾಟಕ ಸರ್ಕಾರ ಹೇಳಿದೆ.
ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ತೀವ್ರವಾದ ಗಮನವನ್ನು ಕೊಡಬೇಕಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವಕೆಲಸವಾಗಬೇಕು. ಅಲ್ಲೀಗಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಇತ್ತ ಕಡೆ ನಮ್ಮ ಪ್ರೀತಿಯ ಸರ್ಕಾರ ಆದ್ಯ ಗಮನ ನೀಡಬೇಕಿದೆ.
ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸುಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನುಮೈಸೂರಿನೊಂದಿಗೆಸೇರಿಸು
ಭಾಷಾ ಅಲ್ಪಸಂಖ್ಯಾತ ಗುಂಪಿನ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಹೊಣೆ ಪ್ರತಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳದ್ದು. ರಾಷ್ಟçಪತಿಗಳು ಇಂತಹ ಸವಲತ್ತುಗಳನ್ನುಒದಗಿಸಲು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಎಲ್ಲಾ ರಾಜ್ಯಗಳಲ್ಲೂಭಾಷಾಅಲ್ಪಸಂಖ್ಯಾತರಹಿ
ಈ ಎಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಿ ಹೇಳುವುದಾದರೆ- ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿಅನ್ಯಾಯವಾಗುತ್ತಿ
ಈ ಬಗ್ಗೆ ನಮ್ಮ ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಅಲ್ಲಿ ಮಲೆಯಾಳೀಕರಣದ ದಾಳಿ ನಡೆದಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಅವರು ಆ ಕಡೆ ಆದ್ಯ ಗಮನ ಕೊಡುವುದು ಒಳಿತು.
ರಾಜ್ಯದ ಹೊರಭಾಗದಗಡಿಯಲ್ಲಿಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದು, ನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥಾಗ್ರಾಮಗಳಲ್ಲಿಕನ್ನಡಿ
ಇಲ್ಲಿ ನಮ್ಮ ಒಳನಾಡಿನಲ್ಲಿ ಹಿಂದಿನ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ. ಅಂಥ ಮುಚ್ಚಿದ ಶಾಲೆಗಳನ್ನು ನಮ್ಮ ಘನ ಸರ್ಕಾರ ಮತ್ತೆ ತೆರೆದು ಅವುಗಳಿಗೆ ಶೈಕ್ಷಣಿಕವಾಗಿ ಪುನರುಜ್ಜೀವನ ನೀಡುವುದು ಆಡಳಿತದ ಜವಾಬ್ದಾರಿಯುತನಡೆಯಾಗುತ್ತದೆ.
ಸಾವಿರದ ಸಮಸ್ಯೆಗಳು ಕನ್ನಡಿಗರನ್ನು ಕಿತ್ತು ತಿನ್ನುತ್ತಿವೆ. ಅದರಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರುಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು, ಇಲ್ಲವಾದರೆ ಕನ್ನಡ ಕಾರ್ಯಕರ್ತರುಕನ್ನಡವನ್ನುಕಲಿಸುತ್ತಾ
ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆಯನ್ನು ಕೊಡಬೇಕು. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಅದು ಮೊದಲು! ಆ ಮೇಲೆ - ಉಳಿದುದೆಲ್ಲಾ! ಮಗು ಚೆನ್ನಾಗಿ ವಿಷಯ ಗ್ರಹಿಸಬೇಕಾದರೆ ಕನ್ನಡ ಅತಿ ಮುಖ್ಯ. ಗ್ರಹಿಸಿದ ವಿಷಯವನ್ನು ಬರೆಯಬೇಕಾದರೂ ಅಷ್ಟೇ.
ಐದನೇತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ನಮ್ಮ ನಲ್ಮೆಯ ಸರ್ಕಾರ.
ಸಿರಿಗಂಧದ ಕನ್ನಡ
ಯುಗ ಯುಗದಿಂದಲೂ ಹರಿದು ಬಂದಿದೆ
ಕನ್ನಡದ ನದಿಯು
ಜನಪದರ ಕಾಲದಿಂದ ಕಂಗೊಳಿಸುತ ಬಂದಿದೆ
ಕನ್ನಡದ ಪಾವನ ತೀರ್ಥವಿದು;
ವಾಗರ್ಥದಹಿರಿಮೆಯಿದು
ನಮ್ಮ ಕನ್ನಡ
ಅಮ್ಮನ ಅಕ್ಕರೆ ಮಾತು
ನಲ್ಮೆ ಕನ್ನಡ!
ಕವಿಗಳು ಬರೆದ ಕಾವ್ಯದ ಕನ್ನಡ
ಹೆಜ್ಜೆ ಹೆಜ್ಜೆ ಗೆಜ್ಜೆ ಪಲುಕು ನೃತ್ಯದ ಕನ್ನಡ
ಸೊಬಗಿನ ಸೌಂದರ್ಯದ ಶಿಲ್ಪಿ ಸಿರಿ ಕನ್ನಡ
ಜನಮನದ ತನು ನುಡಿದ ಸಿರಿಗಂಧದ ಕನ್ನಡ
ಕನ್ನಡ ಕನ್ನಡಹಾಲ್ಜೇನು ಕನ್ನಡ!
ಕನ್ನಡ ಭಾಷೆಯ ಸಮಕಾಲೀನ ಸವಾಲುಗಳು ಮತ್ತು ಭವಿತವ್ಯದ ಹಾದಿ ಕನ್ನಡ ಭಾಷೆಯ ಅನನ್ಯತೆ, ಅಸ್ಮಿತೆಯ ಬಗ್ಗೆ ನಾನು ಒಬ್ಬ ಪ್ರಾಚಾರ್ಯನಾಗಿ, ಭಾಷಾವಿದ್ವಾಂಸನಾಗಿ ಸಾಕಷ್ಟು ವಿಷಯಗಳನ್ನು ನಿಮ್ಮ ಮುಂದೆ ಇದಾಗಲೇಹಂಚಿಕೊಂಡಿದ್ದೇನೆ. ಕನ್ನಡ ಭಾಷೆಯು ಈ ನಾಡಿನ ಜನಮನದಭಾಷೆಯಾಗಿ, ಆಡಳಿತ ಭಾಷೆಯಾಗಿ ಸೂರ್ಯ, ಚಂದ್ರರಿರುವತನಕವೂ ಇರುತ್ತದೆ ಎನ್ನುವ ದಿಟದ ಭಾವನೆ ನನ್ನದು ಆದರೆ, ಅಷ್ಟು ಮಾತ್ರವೇ ಸಾಕೆ ಎನ್ನುವ ಪ್ರಶ್ನೆ ಇಂದು ನಮ್ಮ ಮುಂದಿದೆ.
ನಮ್ಮ ಜೀವನದ ಜೀವ ಜೀವಾಳ ಕನ್ನಡ
ಯಾವ ಭಾಷೆಗೂ ಕಡಿಮೆಯಿಲ್ಲ
ನಮ್ಮ ನಲ್ಮೆ ಕನ್ನಡ!
ಪರಿಸರದ ಕಂಪಿಗೆ, ನುಡಿನುಡಿಯಇಂಪಿಗೆ,
ಮನದಾಳದ ತಂಪಿಗೆ ಆಡಿ ಶುಭ ಕನ್ನಡ!
ಅರಿವಿನಪರಿಧಿಯವಿಸ್ತರಣೆಗೆ
ಬದುಕಿನ ನೆಮ್ಮದಿ ಸಂಸಾರ ಸಾರಕ್ಕೆ
ಜೀವನ ಸೌಂದರ್ಯದ ಕಲೆಯಸಂಸ್ಕಾರಕ್ಕೆ
ಹರಿಯಲಿ ಕನ್ನಡ ವಾಹಿನಿ
ಜಗದ ಮೂಲೆ ಮೂಲೆಗೂಹಾಯಲಿ
ಕನ್ನಡದ ಅನರ್ಘ್ಯ ವಾಣಿ
ಪಂಪನರನ್ನನಜನ್ನನ ಹರಿಹರ ರಾಘವಾಂಕರ
ಶರಣರಕೀರ್ತನಕಾರರಕುಮಾರವ್ಯಾಸಸರ್ವಜ್
ಅಮೃತ ವಾಹಿನಿ ಕನ್ನಡದ ಅಮೃತ ವಾಹಿನಿ
ಭಾಷೆ ಎನ್ನುವುದು ಇಂದು ಭಾವಕೋಶದ, ನೆಲ ಜಲದ, ಸಾಮುದಾಯಿಕ ಸಂಸ್ಕೃತಿಯದನಿಯಾಗಿ ಮಾತ್ರವೇ ಉಳಿದಿಲ್ಲ. ಜಾಗತೀಕರಣದ ಫಲವಾಗಿ ರೂಪುಗೊಂಡಿರುವ ಇಂದಿನ ಅರ್ಥವ್ಯವಸ್ಥೆ ಮತ್ತು ತಂತ್ರಜ್ಞಾನಗಳುದೇಶಭಾಷೆಗಳಗಡಿಗಳನ್
ನಗರಗಳು, ಗ್ರಾಮಗಳು ಎನ್ನುವ ಭೇದವಿಲ್ಲದೆ ನಮ್ಮನ್ನು ಆವರಿಸಿರುವ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಹಿಂದಿನ ಹಂಬಲವೂ ಇದೇ ಅಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಅಥವಾ ಭಾರತೀಯ ಭಾಷೆಗಳು ಮಾತ್ರವೇ ಅಲ್ಲ, ಜಾಗತಿಕವಾಗಿ ಎಲ್ಲ ಅಭಿವೃದ್ಧಿಶೀಲದೇಶಗಳಲ್ಲಿಯೂ‘ಅನ್ನದ ಭಾಷೆ'ಯಾಗಿ ಅನ್ಯ ಭಾಷೆಯೊಂದಕ್ಕೆ ಮುಖ ಮಾಡಿರುವ ವಾಸ್ತವ ನಮ್ಮ ಮುಂದೆ ಕಂಡುಬರುತ್ತದೆ. ಇಪ್ಪತ್ತೊಂದನೆಯ ಶತಮಾನದ, ಎರಡನೆಯ ದಶಕದಲ್ಲಿ ನಿಂತು ಕನ್ನಡದ ನನ್ನ ಬಂಧುಬಾಂಧವರನ್ನುಉದ್ದೇಶಿಸುವಾಗ ನನಗೆ ಇಂದಿನ ಕಟುವಾಸ್ತವಗಳಿಗೆ ಬೆನ್ನು ಹಾಕುವ ಮನಸ್ಸಿಲ್ಲ. ಏಳೂವರೆದಶಕವನ್ನು ಮೀರಿದ ನನ್ನ ಬದುಕಿನ ಅನುಭವಕ್ಕೆ ಇಪ್ಪತ್ತು-ಮೂವತ್ತರ ವಯೋಮಾನದ ಇಂದಿನ ಯುವಕ-ಯುವತಿಯರತಲ್ಲಣಗಳಅರಿವಿಲ್ಲದೇ
ಹಾಗಾಗಿಯೇ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿರುವ, ಜಗತ್ತಿನ ಶ್ರೇಷ್ಠ ಸಂಸ್ಕೃತಿ, ಚಿಂತನೆಯನ್ನು ಪೊರೆದಿರುವ ಈ ನನ್ನ ಭಾಷೆ ಕನ್ನಡ ಮುಂದಿನ ದಿನಗಳಲ್ಲಿಯೂ ತನ್ನ ಪಾರಮ್ಯವನ್ನುಮೆರೆಯಬೇಕೆಂದರೆ ಅದು ಮನೆ, ಮನದಭಾಷೆಯಾಗಿಉಳಿಯಬೇಕು. ಜೊತೆಗೆ ಕನ್ನಡಿಗರ ಭವ್ಯ ಭವಿತವ್ಯದಭಾಷೆಯೂ ಆಗಬೇಕು. ಕನ್ನಡಿಗರಿಗೆಅನ್ನವಿಕ್ಕುವಭಾಷೆಯಾಗಿ
ಜ್ಞಾನಕೋಶದಭಾಷೆಯಾಗಿ ಕನ್ನಡಕನ್ನಡವೆನ್ನುವುದುಕಪ್ಪೆಚಿಪ್
ಈ ಕರ್ನಾಟದೇಶದೊಳ್ ಆಳುವ ಸರ್ಕಾರಗಳು ಯಾವುದೇ ಇರಲಿ, ಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿ, ಕನ್ನಡವೆಂಬುದುಕನ್ನಡಿಗರಅನ್ನದಹಕ್ಕಿ
ಇಲ್ಲಿ ಒಂದು ವಿಚಾರವನ್ನು ಸರಳವಾಗಿ, ನೇರವಾಗಿ ಹೇಳುತ್ತೇನೆ ಕೇಳಿ: ನಮ್ಮ ಜನತೆ, ಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್, ಜಪಾನೀಸ್, ಸ್ಪಾö್ಯನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನುಅರೆಬರೆಯಾಗಿ ಕಲಿತು, ಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರುವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನುಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ?
ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು? ಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?
ಮಾನ್ಯ ಮುಖ್ಯಮಂತ್ರಿಗಳೇ, ಇಂದಿನ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾನು ಓರ್ವ ಸಾಹಿತಿಯಾಗಿ ಆಗಲಿ, ಓರ್ವ ಕನ್ನಡ ಭಾಷಾಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ, ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನುಅರಿತವನಾಗಿ ಹೇಳುತ್ತಿದ್ದೇನೆ. ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇತೀರುತ್ತೇವೆ ಎನ್ನುವ ಪಣ ತೊಡಿ.
ನಮ್ಮ ಯುವಪೀಳಿಗೆ ತಮ್ಮ ಕಿವಿಗಳಿಗೆ ಎಂದೂ ಬಿದ್ದೇ ಇರದ, ಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನುಪಡೆಯಲಾಗುವುದಿಲ್ಲವೇ? ಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನುಕೊಡಲಾಗುತ್ತಿಲ್ಲ? ನಮ್ಮ ವಿಶ್ವವಿದ್ಯಾಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತು, ಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆ, ನಾವು ಕೇವಲ ಎಡ, ಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನುಸೀಮಿತಗೊಳಿಸಿಕೊಳ್
ನಾನು ಇಲ್ಲಿ ಯಾವುದೇ ಒಂದು ಪಕ್ಷ, ಸಿದ್ಧಾಂತದ ಪರವಾಗಿ ಮಾತನಾಡಲು ಬಂದು ನಿಂತಿಲ್ಲ. ಸಮಷ್ಟಿ ಪ್ರಜ್ಞೆಯನ್ನುಉಸಿರಾಗಿ ಕೊಟ್ಟ ಕನ್ನಡವೇ ನನ್ನ ಸಿದ್ಧಾಂತ, ನಮ್ಮ ನಡುವಿನ ಎಲ್ಲ ವಿಚಾರಭೇದಗಳನ್ನುಬದಿಗಿರಿಸೋಣ, ನಾನು ಕೇಳುವ ಪ್ರಶ್ನೆ ಒಂದೇ, ಕನ್ನಡಿಗರಾದ ನಮಗೆ ನಮ್ಮ ಮುಂದಿನ ಪೀಳಿಗೆಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವಿಲ್ಲವೇ? ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಸ್ಪೇನ್, ಚೀನಾ, ಫ್ರಾನ್ಸ್, ರಷಿಯಾ ಮುಂತಾದ ಅನೇಕ ದೇಶಗಳಲ್ಲಿ ಇದು ಸಾಧ್ಯವಿದ್ದ ಮೇಲೆ ಏಳು ಕೋಟಿ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಾಮರ್ಥ್ಯ, ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗಿಲ್ಲವೇ? ಅಗಾಧ ಪ್ರತಿಭೆ, ಅನ್ವೇಷಣೆ, ಕುತೂಹಲವನ್ನುಳ್ಳ ನನ್ನ ಜನ ಭಾಷೆಯ ಕಾರಣವೊಂದರಿಂದಾಗಿಯೇ ಶುದ್ಧ ವಿಜ್ಞಾನ, ವೃತ್ತಿಪರ ಶಿಕ್ಷಣಗಳಿಂದ ದೂರ ಉಳಿಯಬೇಕೆ? ಕನ್ನಡದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುವುದು ನಮಗೆ ಅಪಹಾಸ್ಯದ ವಿಷಯವೇ? ಆಳುವ ಸರ್ಕಾರಕ್ಕೆ, ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿಗೆ ನಾನು ಹೇಳುವುದೊಂದೇಕನ್ನಡವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಭಾಷೆಯಾಗಿ ನೀವು ರೂಪಿಸದೆ ಹೋದರೆ ನೀವು ಈ ನಾಡಿಗೆ, ಇಲ್ಲಿನ ಜನತೆಗೆ ಅಖಂಡ ದ್ರೋಹ ಬಗೆದಂತೆ.
ಕನ್ನಡದಲ್ಲಿ ಎಷ್ಟೆಲ್ಲಾ ಗಹನ, ವಿಚಾರಪೂರ್ಣ ವಿಷಯಗಳನ್ನು ಹತ್ತಾರು ಶತಮಾನಗಳ ಹಿಂದೆಯೇ ಬೆಡಗಿನ, ಒನಪಿನ, ಒಡಪಿನ ಭಾಷೆಯಲ್ಲಿ ಕಟ್ಟಿಕೊಡಲಾಗಿದೆ. ತತ್ವ, ಅನುಭಾವ, ಅಧ್ಯಾತ್ಮವನ್ನು ಒಂದು ಭಾಷೆ ಸರಳವಾಗಿ, ಸುಲಲಿತವಾಗಿ, ಸಿಪ್ಪೆ ಸುಲಿದಂತೆಹೇಳಬಲ್ಲುದಾದರೆ ಅದು ವಿಜ್ಞಾನ, ತಂತ್ರಜ್ಞಾನಗಳವಿಷಯವನ್ನೂ ಅಷ್ಟೇ ಸರಳವಾಗಿ, ಸುಲಲಿತವಾಗಿಹೇಳಬಲ್ಲರು ಎಂದೇ ಅರ್ಥ. ತಿಳಿಗನ್ನಡವೆಂಬುದುತಿಳಿವಿನಗನ್ನಡವೂ
ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್ನಲ್ಲಿಯೇ ಉನ್ನತ ಶಿಕ್ಷಣವನ್ನುಪಡೆಯುತ್ತೇನೆ ಎನ್ನುವವರು ಅದರಲ್ಲಿಯೇಪಡೆಯಲಿ, ಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದಮತ್ತಾವುದೋಶಿಕ್
ಈ ನಿಟ್ಟಿನಲ್ಲಿ ಮೊದಲಿಗೆ ನಾವು ಪರಿಹರಿಸಿಕೊಳ್ಳಬೇಕಾದವಿಷಯವೆಂದರೆ, ವೃತ್ತಿಪರ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ಶಿಕ್ಷಣ ಮಾಧ್ಯಮ ನೀತಿಯಲ್ಲಿ ಏನಾದರೂ ನಿಯಂತ್ರಣವಿದೆಯೇ ಎನ್ನುವುದನ್ನು. ನನಗೆ ತಿಳಿದಂತೆ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಓಚಿಣioಟಿಚಿಟ ಒeಜiಛಿಚಿಟ ಅommissioಟಿ) ನಿಯಮಾವಳಿ ಇದೆ. ಒಂದು ವೇಳೆ ಇಂತಹ ನಿಯಂತ್ರಣಗಳಿದ್ದರೆ ಅವು ಕನ್ನಡವನ್ನು ಮಾತ್ರವೇ ಅಲ್ಲ ಯಾವುದೇ ಭಾರತೀಯ ಭಾಷೆಯ ಮಹತ್ವಾಕಾಂಕ್ಷೆಯನ್ನು ಚಿವುಟಿ ಹಾಕುವಂಥದ್ದು. ಇಂತಹ ನಿಯಮಗಳು, ನಿಯಂತ್ರಣಗಳನ್ನು ನಾವು ರಾಜಕೀಯ ಇಚ್ಛಾಶಕ್ತಿಯಿಂದಲೇಪರಿಹರಿಸಿಕೊಳ್
ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು. ಇದಕ್ಕಾಗಿ `ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ'ಯೊಂದನ್ನು ಮೊದಲು ರಾಜ್ಯ ಸರ್ಕಾರ ರಚಿಸಬೇಕು, ಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳು, ಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತç, ವೈದ್ಯಕೀಯ, ಗಣಿತಶಾಸ್ತç, ಅರ್ಥಶಾಸ್ತç, ಮಾನವಿಕ ಶಾಸ್ತçಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನುಮುನ್ನೆಲೆಗೆ ತರಬೇಕು. ಅವರನ್ನು ಮುಂದಿರಿಸಿಕೊಂಡುಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸಲು, ಕಲಿಸಲು ಗಟ್ಟಿಯಾದ ತಳಪಾಯ ಸೃಷ್ಟಿಸಬೇಕು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡ, ಕಂಗ್ಲಿಷ್ ಪದಗಳನ್ನು ರೂಪಿಸುವುದರೊಟ್ಟಿಗೆ ಇವುಗಳಲ್ಲಿ ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಒಂದು ‘ಸಮಗ್ರ ಪಾರಿಭಾಷಿಕ ಪದಕೋಶ'ವನ್ನು (Woಡಿಜ ಅoಡಿಠಿus) ರೂಪಿಸಬೇಕು.
ಈ ಹಿಂದೆ, ಮೈಸೂರು ವಿಶ್ವವಿದ್ಯಾಲಯವುವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂತಹ ಪ್ರಯತ್ನಕ್ಕೆ ಚಾಲನೆ ನೀಡಿತ್ತು. ಹಂಪಿ ಕನ್ನಡ ವಿಶ್ವವಿದ್ಯಾಲಯವೂಪದವಿಪೂರ್ವ ಹಂತದಲ್ಲಿ ವಿಜ್ಞಾನದ ವಿಷಯ ಪುಸ್ತಕಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕೈ ಹಾಕಿತ್ತು. ಆದರೆ, ಇಂತಹ ಕೆಲಸಗಳು ಒಂದಿಲ್ಲೊಂದು ಕಾರಣದಿಂದಾಗಿ ಪ್ರಾಯೋಗಿಕ ಹಂತಕ್ಕೆ ಮಾತ್ರವೇ ಸೀಮಿತಗೊಂಡವು. ನಿರಂತರವಾಗಿ ಮುಂದುವರೆಯಲಿಲ್ಲ. ಹಾಗಾಗಿ, ಈ ಬಾರಿ ಮೊದಲಿಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಒಂದು ‘ಕನ್ನಡ ಸಮಗ್ರ ಪಾರಿಭಾಷಿಕ ಶಬ್ದಕೋಶ'ವನ್ನು (Woಡಿಜ ಅoಡಿಠಿus) ನಾವು ನಿರ್ಮಿಸಬೇಕು. ತಮಿಳುನಾಡಿನಲ್ಲಿ ಕೆಲ ವರ್ಷದ ಹಿಂದೆ ಅಲ್ಲಿನ ಸರ್ಕಾರ “ಸೊರ್ಕುವÊ" (Soಡಿಞuvಚಿi - ಕನ್ನಡದಲ್ಲಿ ಶಬ್ದ ಭಂಡಾರ ಎನ್ನುವುದು ಸಮೀಪದ ಅರ್ಥ) ಎನ್ನುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲ ಉದ್ದೇಶ ವಿಭಿನ್ನ ಜ್ಞಾನಶಿಸ್ತುಗಳಲ್ಲಿನ ಪಾರಿಭಾಷಿಕ ಪದಗಳಿಗೆ ತಮಿಳು ಸಂವಾದಿ ಪದಗಳನ್ನು ಹೆಕ್ಕುವುದು, ರೂಪಿಸುವುದು, ಕಟ್ಟುವುದಾಗಿದೆ. ಬಳಕೆಯಿಂದ ಮರೆತು ಹೋಗಿರುವ ಅದರ ಇಂದಿನ ತಾಂತ್ರಿಕ, ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಬಲ್ಲ ಪದಗಳನ್ನು ಹೆಕ್ಕುವುದು ಯೋಜನೆಯ ಒಂದು ಭಾಗವಾದರೆ, ವಿಜ್ಞಾನ, ತಂತ್ರಜ್ಞಾನಗಳುಬೆಳವಣಿಗೆಯಾದಂತೆ ಅದಕ್ಕೆ ಅನುಗುಣವಾಗಿ ಮೂಡುವ ಪಾರಿಭಾಷಿಕ ಪದಗಳು ಹಾಗೂ ಆಧುನಿಕ ಸಂಸ್ಕೃತಿ, ನಡೆನುಡಿಯಿಂದ ಜಾಗತಿಕ ಸ್ತರದಲ್ಲಿಮೂಡುವಹೊಸಪದಗಳಿಗೆ, ಅಗತ್ಯಗಳಿಗೆ ಸಂವಾದಿಯಾಗಿ ನವೀನ ಪದಗಳನ್ನು ಕಟ್ಟುವುದು ಇದರ ಮತ್ತೊಂದು ಕೆಲಸ. ಈ ಯೋಜನೆಗೆ ಚಾಲನೆ ದೊರೆತ ಕೆಲ ವರ್ಷಗಳಲ್ಲಿಯೇ ಹತ್ತಾರು ಸಾವಿರ ಪದಗಳನ್ನು ಹೆಕ್ಕಿರುವ, ಕಟ್ಟಿರುವ ಉದಾಹರಣೆ ಅಲ್ಲಿನದು. ಇಂತಹ ಭಂಡಾರವೊಂದು ಕನ್ನಡದಲ್ಲಿ, ಅದೂ ಅಂತರ್ಜಾಲದ ಜಗತ್ತಿನಲ್ಲಿ ಅತ್ಯಗತ್ಯವಾಗಿ ಆಗಬೇಕು. ಅದರ ತಾಂತ್ರಿಕ ಅಂಶಗಳು ಹೇಗಿರಬೇಕು ಎನ್ನುವ ವಿಸ್ಮೃತ ಚರ್ಚೆಯನ್ನು ನಾನು ಇಲ್ಲಿ ಮುಂದುವರೆಸಲು ಹೋಗುವುದಿಲ್ಲ. ಅದು ಹೆಚ್ಚು ಅಕೆಡೆಮಿಕ್ ಆದ ಚರ್ಚೆ. ಆದರೆ, ಅಂತಹ ಕೆಲಸ ಅಗತ್ಯವಾಗಿ ಆಗಬೇಕಿದೆ.
ಮುಂದುವರೆದು, ಕನ್ನಡದಲ್ಲಿ ಉನ್ನತ, ವೃತ್ತಿಪರ ಶಿಕ್ಷಣ ನೀಡುವ ವಿಚಾರವಾಗಿ ಆರಂಭಿಕ ವರ್ಷಗಳಲ್ಲಿ ಪ್ರಸ್ತುತ ಇರುವ ಆಯ್ದ ಕೆಲ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ, ವಿಜ್ಞಾನ, ಇಂಜಿನಿಯರಿಂಗ್ಕಾಲೇಜುಗಳ ಕಟ್ಟಡ, ಮೂಲಸೌಕರ್ಯವನ್ನೇ ಬಳಸಿಕೊಂಡು ಅಲ್ಲಿನ ಸಿಬ್ಬಂದಿ ಹಾಗೂ ಪಠ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅಣಿಗೊಳಿಸುವ ಮೂಲಕ ಹಾಗೂ ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬ್ಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತçಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಒಂದು ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ, ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್ಗಳನ್ನು, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು. ಈ ಮಕ್ಕಳಿಗೆ ವ್ಯಾವಹಾರಿಕ ಬಳಕೆಗೆ ಅಗತ್ಯವಾದ ರೀತಿಯಲ್ಲಿ, ಯಾವುದೇ ಕೀಳರಿಮೆಗೆಅವಕಾಶವಿಲ್ಲದಂತೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ, ಸಂವಹನ ಮಾಧ್ಯಮವಾಗಿ ಕಲಿಸಿದರೆ ಸಾಕು.
ಹೀಗೆ ಕಲಿತು ಪದವೀಧರ, ಸ್ನಾತಕೋತ್ತರ ಪದವೀಧರರಾದ ಮಕ್ಕಳಿಗೆ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ವಿಶೇಷ ಪ್ರಾಶಸ್ತö್ಯವನ್ನು ನೀಡಬೇಕು. ಅವರ ಸೇವೆಯನ್ನು ಈ ನಾಡಿನ ಮೂಲೆಮೂಲೆಗಳಿಗೆಲಭ್ಯವಾಗುವಂತೆ ಮಾಡಬೇಕು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿ, ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣವನ್ನುಪಡೆದವರು ಇವರು ಎಂದು ಈ ನಾಡಿನ ಜನ ಇವರನ್ನು ಹೆಮ್ಮೆಯಿಂದ ಗುರುತಿಸುವಂತಾಗಬೇಕು.
ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ಶೈಕ್ಷಣಿಕ ಸಂಪನ್ಮೂಲವನ್ನುವಿಫುಲವಾಗಿಕನ್ನಡದಲ್
ಇದೇ ವೇಳೆ ಇಂದು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕಾನೂನು ಮುಂತಾದ ವಲಯಗಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು, ಸುದ್ದಿ-ವಿಚಾರಗಳನ್ನು ಕನ್ನಡದಲ್ಲಿಯೇಓದುಗರಿಗೆ, ನೋಡುಗರಿಗೆತಲುಪಿಸುವಂತಹಕಾರ್ಯಕ್
ಉದ್ಯೋಗ, ಉದ್ಯಮಶೀಲತೆಯಭಾಷೆಯಾಗಿ ಕನ್ನಡ ಕನ್ನಡಅನ್ನದಭಾಷೆಯಾಗಿ, ಉದ್ಯೋಗದಭಾಷೆಯಾಗಿ, ಉದ್ಯಮಶೀಲತೆಯಭಾಷೆಯಾಗಿಸಶಕ್ತವಾಗಬೇ
ಇಂದು ನಮ್ಮ ಮುಗ್ಧ ಜನತೆ ತಮ್ಮದೇ ಹಳ್ಳಿಯಲ್ಲಿರುವಬ್ಯಾಂಕುಗಳಲ್ಲಿಯೂಬ್
ನಮ್ಮ ಭಾಷೆಯಲ್ಲಿ ಸೇವೆ ನೀಡದಬ್ಯಾಂಕುಗಳು, ಸರ್ಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದಧಿಕ್ಕರಿಸಬೇಕು. ಕರ್ನಾಟಕದೆಲ್ಲೆಡೆಕನ್ನಡದಲ್ಲಿಯೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರಸಂಸ್ಥೆಗಳಲ್ಲಿ ನಾವು ಬಲವಾಗಿ ಆಗ್ರಹಿಸಲು ತೊಡಗಿದರೆ ಸಹಜವಾಗಿಯೇ ಉದ್ಯೋಗಗಳಲ್ಲಿಕನ್ನಡಿಗರ ಸಂಖ್ಯೆ ಖಾಸಗಿ ವಲಯದಲ್ಲಿ ಮತ್ತಷ್ಟು ವ್ಯಾಪಕವಾಗಿ, ಗಣನೀಯವಾಗಿಹೆಚ್ಚುತ್ತದೆ.
ಇತ್ತೀಚೆಗೆ ರಾಜ್ಯದ ಶಾಸನಸಭೆಯಲ್ಲಿ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ - ೨೦೨೨' ಅನ್ನು ಮಂಡಿಸಲಾಯಿತು. ಇದರಲ್ಲಿ ಕನ್ನಡವನ್ನು ಅಧಿಕೃತ ರಾಜ್ಯಭಾಷೆಯಾಗಿತೀರ್ಮಾನಿಸುವ, ಅಡಳಿತ ಮತ್ತು ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಅಂಶಗಳೂ ಸೇರಿದಂತೆ ಹಲವು ಉತ್ತಮ ಅಂಶಗಳಿವೆ. ಈ ಮಸೂದೆಯನ್ನುಕಾಯಿದೆಯಾಗಿಸಮರ್ಥವಾಗಿ
ಕರ್ನಾಟಕ ಇಂದು ಬಹುರಾಷ್ಟ್ರೀಯ ಸಂಸ್ಥೆಗಳ ನವೋದ್ಯಮಗಳತವರಾಗಿದೆ. ಆದರೆ ಇಂದು ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನುನೀಡುತ್ತಿಲ್ಲ. ಅದರಲ್ಲಿಯೂ ಬೆಂಗಳೂರು ನವೋದ್ಯಮಗಳರಾಜಧಾನಿಯಾಗಿದೆ. ನನ್ನ ವಿಶೇಷ ಬಿನ್ನಹವೇನೆಂದರೆ ಕನ್ನಡದಲ್ಲಿ ವಿವಿಧ ಬಗೆಯ ಸೇವೆಯನ್ನು ಒದಗಿಸುವ ನವೋದ್ಯಮಗಳಿಗೆ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ನೀಡಬೇಕು. ಅಲ್ಲದೇ, ಆಂಗ್ಲ ಭಾಷೆಯಲ್ಲಿ ಮಾತ್ರವೇ ಸೇವೆಯನ್ನು ಒದಗಿಸುತ್ತಿರುವ ವಿವಿಧ ಆನ್ಲೈನ್ಸೇವಾಉದ್ಯಮಗಳಿಗೆ ಕನ್ನಡದಲ್ಲಿ ಸೇವೆ ಒದಗಿಸಲು ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನುವ್ಯಾಪಿಸಲು ಸರ್ಕಾರವು ವಿಶೇಷ ನೀತಿಯೊಂದನ್ನು ರೂಪಿಸಬೇಕು. ಕೇವಲ ಆದೇಶಗಳಿಂದ ಮಾತ್ರವೇ ಇದು ಅನುಷ್ಠಾನವಾಗದೆ ಹೋಗಬಹುದು, ಹಾಗಾಗಿ, ಸೇವೆಯಲ್ಲಿ ಸಹಭಾಗಿತ್ವ ಎನ್ನುವ ತತ್ವದಡಿ ಕನ್ನಡದಲ್ಲಿ ಸೇವೆಯನ್ನು ನೀಡುವ ಖಾಸಗಿ ಆನ್ಲೈನ್ಸೇವಾ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗಳನ್ನು, ಧನಸಹಾಯಗಳನ್ನು ನೀಡಬೇಕು. ಇದು ಖಾಸಗಿ ಸೇವಾ ಸಂಸ್ಥೆಗಳು ಹೆಚ್ಚು ಕನ್ನಡಪರ ಧೋರಣೆ ಬೆಳಸಿಕೊಳ್ಳಲು, ಉದ್ಯೋಗಗಳಲ್ಲಿಕನ್ನಡಿಗರನ್ನುಹೆಚ್ಚೆ
ಕನ್ನಡ ಮತ್ತು ಮನರಂಜನಾ ಉದ್ಯಮಇಂದು ಮನರಂಜನೆ ಎನ್ನುವುದು ಸಾವಿರಾರು ಕೋಟಿಗಳ ಬೃಹತ್ ಉದ್ಯಮವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಒಟಿಟಿ (ಓವರ್ ದ ಟಾಪ್) ವೇದಿಕೆಗಳು, ವೆಬ್ಸ್ಟಿçÃಮಿಂಗ್ ಮುಖೇನ ಮನರಂಜನೆಯ ಚಹರೆಯನ್ನೇಅಗಾಧವಾಗಿಬದಲಿಸಿವೆ ಹಾಗೂ ವಿಸ್ತರಿಸಿವೆ. ಸಿನಿಮಾ ನೋಡಲು ಥಿಯೇಟರ್ಗಳಿಗೇ ಹೋಗಬೇಕು ಎಂದಾಗಲಿ, ವೈಜ್ಞಾನಿಕ ಕಾರ್ಯಕ್ರಮಗಳನ್ನು, ಸಾಕ್ಷ್ಯಚಿತ್ರಗಳನ್ನು ನಿರ್ದಿಷ್ಟ ಚಾನಲ್ಗಳಲ್ಲಿ, ನಿರ್ದಿಷ್ಟ ಸಮಯದಲ್ಲಿಯೇ ನೋಡಬೇಕು ಎಂದಾಗಲಿ ಇಂದು ಇಲ್ಲ. ನೋಡುಗ ತನ್ನ ಸಮಯ, ಅನುಕೂಲತೆ, ಆಸಕ್ತಿಗೆ ತಕ್ಕಂತೆ ತನ್ನ ಮನೆಯ ಟಿವಿಯಲ್ಲಿಯೋ, ಅಂಗೈನಲ್ಲಿರುವಮೊಬೈಲ್ನಮುಖೇನವೋ ಮನರಂಜನೆ, ಆಸಕ್ತಿಗಳನ್ನು ಇಂದು ತಣಿಸಿಕೊಳ್ಳಬಹುದು. ಇಂದಿನ ಒಟಿಟಿವೇದಿಕೆಗಳಲ್ಲಿ ವಿವಿಧ ಜಾಗತಿಕ ಭಾಷೆಗಳಮನರಂಜನಾಸರಣಿಗಳು, ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಯಲ್ಲಿ ಬಿತ್ತರಿಸುವ ಪ್ರಯತ್ನಗಳು ವ್ಯಾಪಕವಾಗಿನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಮುಖ ವೆಬ್ಸರಣಿಗಳುಕನ್ನಡದಲ್ಲಿಯೂಲಭ್ಯವಿ
ಆದರೆ, ಕನ್ನಡಿಗರು ಇಷ್ಟಕ್ಕೇ ತೃಪ್ತರಾಗಬಾರದು. ಡಬ್ಬಿಂಗ್ಗೆ ಮಾತ್ರವೇ ನಾವು ಸೀಮಿತವಾಗಬೇಕಿಲ್ಲ. ಜಾಗತಿಕ ಮಟ್ಟದ ಒಟಿಟಿವೇದಿಕೆಗಳುಕನ್ನಡದಲ್ಲಿಯೂಹೆಚ್
ಇಲ್ಲಿ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಸ್ಕಾಂಡಿನೇವಿಯನ್ದೇಶಗಳು ಎಂದು ಕರೆಯಲಾಗುವ ಉತ್ತರ ಯೂರೋಪಿನ ಸಣ್ಣ ದೇಶಗಳಾದನಾರ್ವೆ, ಡೆನ್ಮಾರ್ಕ್, ಐಸ್ಲ್ಯಾಂಡ್, ಫಿನ್ಲ್ಯಾಂಡ್, ದೇಶಗಳ ಒಟ್ಟು ಜನಸಂಖ್ಯೆ ಏನಿದೆ ಅದು ನಮ್ಮ ಕರ್ನಾಟಕದ ಅರ್ಧ ಜನಸಂಖ್ಯೆಗಿಂತಲೂ ಕಡಿಮೆ, ಇವುಗಳನ್ನು ನಾರ್ಡಿಕ್ ದೇಶಗಳು ಎಂದೂ ಕರೆಯುತ್ತಾರೆ. ನನಗೆ ಚಲನಚಿತ್ರೋದ್ಯಮದ ಹಿನ್ನೆಲೆ ಇರುವುದರಿಂದ ಹಾಗೂ ತಕ್ಕಮಟ್ಟಿಗೆ ಅದರ ಗಂಧಗಾಳಿ ಇರುವುದರಿಂದ ಹೇಳುತ್ತಿದ್ದೇನೆ.
ನಾನು ಹೇಳಿದ ಈ ದೇಶಗಳ ಮನರಂಜನಾಉದ್ಯಮವೇನಿದೆ ಅದು ಇಂದು ಬಿಲಿಯನ್ಡಾಲರ್ಗಳವ್ಯವಹಾರವಾಗಿದೆ. ಈ ದೇಶಗಳ ಭಾಷೆಗಳಾದಡ್ಯಾನಿಶ್, ನಾರ್ವೇಜಿಯನ್, ಸ್ವೀಡಿಷ್ಗಳಲ್ಲಿತಯಾರಾಗುವ, ವಿಶೇಷವಾಗಿ ಥ್ರಿಲ್ಲರ್ ಮಾದರಿಯ ಕಥಾವಸ್ತುಗಳನ್ನುಳ್ಳವೆಬ್ಸರಣಿಗಳು, ಚಿತ್ರಗಳನ್ನು ನೋಡುವ ಬೃಹತ್ ಜಾಗತಿಕ ವೀಕ್ಷಕ ವರ್ಗವೇ ಇದೆ. ಜಗತ್ತಿನ ಅನೇಕ ಭಾಷೆಗಳಿಗೆ, ವಿಶೇಷವಾಗಿ ಇಂಗ್ಲಿಷ್ ಈ ಸರಣಿಗಳು, ಚಿತ್ರಗಳು ಡಬ್ ಆಗುತ್ತವೆ. ಮಿಲಿಯನ್ ಗಟ್ಟಲೆ ಡಾಲರ್ ವ್ಯವಹಾರವನ್ನು ಇಲ್ಲಿನ ಪ್ರೊಡಕ್ಷನ್ಹೌಸ್ಗಳುಮಾಡುತ್ತವೆ. ಹಾಲಿವುಡ್ ಚಿತ್ರರಂಗಕ್ಕೆಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಮನರಂಜನಾ ಉದ್ಯಮ ಇಂದು ಬೆಳೆಯುತ್ತಿದೆ. ತಮ್ಮದೇ ಭಾಷೆಯಲ್ಲಿಯೇಇದೆಲ್ಲವನ್ನೂ ಅವರು ಸಾಧ್ಯವಾಗಿಸಿದ್ದಾರೆ.
ಇದೇ ರೀತಿ, ಚೀನಾ, ಹಾಂಕಾಂಗ್ನ ಸಿನಿಮಾ ಉದ್ಯಮವು ಸಮರ ಕಲೆಗಳ ಚಿತ್ರಗಳ ಮೂಲಕವೇ ಜಾಗತಿಕ ಮಾರುಕಟ್ಟೆಯನ್ನುಆಕ್ರಮಿಸಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಇನ್ನು ಇರಾನಿಸಿನಿಮಾಗಳು, ಮಧ್ಯಪ್ರಾಚ್ಯ ಸಿನಿಮಾಗಳನ್ನು ನೋಡುಗ ವರ್ಗವೂದೊಡ್ಡದಿದೆ. ನಮ್ಮದೇ ಬಾಲಿವುಡ್, ನೆರೆಯ ತಮಿಳು, ತೆಲುಗು, ಮಲಯಾಳಂಚಿತ್ರರಂಗಗಳು ಬೆಳೆದಿರುವ ಪರಿಯನ್ನೂ ಇಲ್ಲಿ ಗಮನಿಸಬಹುದು. ಕನ್ನಡದ ಚಿತ್ರರಂಗ ಹಾಗೂ ಮನರಂಜನಾಉದ್ಯಮವೂ ಇಂದು ಭರವಸೆಯಿಂದ, ಮಹತ್ವಾಕಾಂಕ್ಷೆಯಿಂದ ಬೆಳೆಯುತ್ತಿದೆ. ಸಾವಿರಾರು ಕೋಟಿ ವ್ಯವಹಾರವನ್ನು ಕನ್ನಡ ಚಿತ್ರಗಳು ಮಾಡಬಲ್ಲವು ಎನ್ನುವುದನ್ನು ನಾವು ಇಂದು ಕಂಡಿದ್ದೇವೆ. ಕಥಾವಸ್ತುಗಳ ಬಗ್ಗೆ ನಮ್ಮ ವೈಯಕ್ತಿಕ ತಕರಾರುಗಳೇನೇ ಇರಲಿ, ಒಂದು ಉದ್ಯಮವಾಗಿಚಿತ್ರರಂಗವನ್ನು, ಟಿವಿ, ಒಟಿಟಿವೇದಿಕೆಗಳನ್ನುಮಹತ್ವಾಕಾಂಕ್ಷೆ
ಕನ್ನಡ ಮತ್ತು ರಾಯಭಾರಿತ್ವ
ಕರ್ನಾಟಕವೆನ್ನುವುದು ಉತ್ತರ ಮತ್ತು ದಕ್ಷಿಣದಸಂಸ್ಕೃತಿಗಳುಸಂಧಿಸುವ ಜಾಗ. ಕನ್ನಡಿಗರವೈವಿಧ್ಯಮಯ ಆಸಕ್ತಿ, ಅಭಿರುಚಿಗಳಿಗೆ, ಸಹಿಷ್ಣುತೆಗೆಇದುವೇ ಕಾರಣ. ಉತ್ತಮವಾದುದನ್ನು ಎಲ್ಲ ಕಡೆಯಿಂದ ಹೆಕ್ಕುವುದು, ಬೆಂಬಲಿಸುವುದುಕನ್ನಡಿಗರ ಜಾಯಮಾನ. ನಮ್ಮ ಸಂಸ್ಕೃತಿ, ಅನುಭವಗಳನ್ನು ಇದು ಸಾಕಷ್ಟು ಶ್ರೀಮಂತಗೊಳಿಸಿದೆ ಕೂಡ. ಕನ್ನಡಿಗರುಕೂಪಮಂಡೂಕಗಳಲ್ಲ. ಜಗತ್ತಿನೆಲ್ಲೆಡೆ, ಎಲ್ಲ ರಂಗಗಳಲ್ಲಿಕನ್ನಡಿಗರುವ್ಯಾಪಿಸಿದ್ದಾ
ಇಂದು ಪ್ರತಿಯೊಬ್ಬ ಹೊರನಾಡಕನ್ನಡಿಗನನ್ನೂ‘ಕನ್ನಡದ ರಾಯಭಾರಿ’ ಎಂದೇ ನಮ್ಮ ಸರ್ಕಾರವು ನೋಡಬೇಕು. ಅಲ್ಲಿನ ಕನ್ನಡಪರ ಸಂಘ ಸಂಸ್ಥೆಗಳಿಗೆ ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಕನ್ನಡದ ಚಟುವಟಿಕೆಗಳನ್ನುಹೆಚ್ಚೆಚ್ಚುಪಸರಿಸು
ಕನ್ನಡ ಮತ್ತು ಶಾಸ್ತ್ರೀಯಭಾಷಾ ಸ್ಥಾನಮಾನ
ಕನ್ನಡದಲ್ಲಿ ಎಣೆಯಿಲ್ಲದ ಪ್ರಾಚೀನ ಸಾಹಿತ್ಯ, ತತ್ವ, ವ್ಯಾಕರಣ ಶಾಸ್ತçಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ಶಿಲ್ಪಶಾಸ್ತç ಇವೆಲ್ಲವುಗಳಿಗೆಕಳಶವಿಟ್ಟಂತ ಜಾನಪದ ಮಹಾಕಾವ್ಯಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆಶಾಸ್ತ್ರೀಯ ಭಾಷೆಯ ಸ್ಥಾನಮಾನವೂದೊರತಿದೆ. ಸುಮಾರು ಎರಡು ಸಾವಿರ ವರ್ಷದಷ್ಟುಇತಿಹಾಸವನ್ನು ಹೊಂದಿರುವ ಸಾವಿರ ವರ್ಷಗಳನ್ನು ಮೀರಿದ ಸುಧಾರಿತ ಲಿಖಿತ ಭಾಷಾಪ್ರಯೋಗವನ್ನು ಹೊಂದಿರುವ ಕನ್ನಡ ಭಾಷೆ ಬಹುತೇಕ ಪಾಶ್ಚಿಮಾತ್ಯ ಭಾಷೆಗಳು ಶೈಶವಾಸ್ಥೆಯಲ್ಲಿರುವಹೊತ್ತಿನಲ್ಲಿಯೇ ಸಮೃದ್ಧವಾದ ಮೌಖಿಕ, ಲಿಖಿತ ಸಾಹಿತ್ಯ, ಶಾಸ್ತç ಗ್ರಂಥಗಳನ್ನುಹೊಂದಿತ್ತು. ವಿಪರ್ಯಾಸವೆಂದರೆ, ಕನ್ನಡಕ್ಕೆಶಾಸ್ತ್ರೀಯಭಾಷಾಸ್ಥಾನಮಾ
ಈ ಆಕ್ಷೇಪಣೆ ಕನ್ನಡ ಭಾಷೆಯೊಂದರದ್ದು ಮಾತ್ರವಲ್ಲ, ಶಾಸ್ತ್ರೀಯಭಾಷಾ ಸ್ಥಾನಮಾನ ಪಡೆದಿರುವ ತಮಿಳು, ತೆಲುಗು, ಮಲಯಾಳಂ, ಒಡಿಯಾಭಾಷೆಗಳಆಕ್ಷೇಪಣೆಯೂ ಆಗಿದೆ. ಇತರ ಶಾಸ್ತ್ರೀಯಭಾಷೆಗಳಹೋಲಿಕೆಯಲ್ಲಿ ೨೦೧೭ ರಿಂದ ೨೦೨೦ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರವು ನೀಡಿದ ಅನುದಾನದ ಮೊತ್ತ ರೂ. ೬೪೩ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯಭಾಷಾಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ. ೩ ಕೋಟಿ. ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ. ೨೩ ಕೋಟಿ, ತಮಿಳು ಭಾಷೆಗೆ ೨೦೧೭ರಿಂದ ೨೦೨೧ರ ವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ. ೪೨ ಕೋಟಿ ಎನ್ನುವ ಮಾಹಿತಿ ಇದು ಕನ್ನಡಕ್ಕೆನೀಡಲಾಗಿರುವಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎನ್ನುವುದು ನನಗಿರುವ ಮಾಹಿತಿ, ಹೆಚ್ಚೆಂದರೆ ೨೦೧೭ರಿಂದ ಇಲ್ಲಿಯವರೆಗೆ ಐದಾರು ಕೋಟಿ ರೂಪಾಯಿ ಅನುದಾನಸಿಕ್ಕಿರಬಹುದು.
ಹೀಗಾದರೆ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೆ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು? ಅನುದಾನದವಿಚಾರದಲ್ಲಿನನಗಿರುವಮಾಹಿತಿ
ಈ ವಾಸ್ತವದ ಹಿನ್ನೆಲೆಯಲ್ಲಿ ನಾಡಿನ ಆಳುವ ಸರ್ಕಾರಕ್ಕೆ ನಾನು ಹೇಳುವ ಮಾತೊಂದೇ, ಶಾಸ್ತ್ರೀಯಭಾಷಾಸ್ಥಾನಮಾನದ ಹಿನ್ನೆಲೆಯಲ್ಲಿ ಕನ್ನಡಕ್ಕೆದೊರೆಯಬೇಕಾದಹಕ್ಕಿನ ಹಣವನ್ನು ತರುವ ಜವಾಬ್ದಾರಿ ನಿಮ್ಮದು ಅದನ್ನು ಹೇಗೆ ಸಾಧಿಸಿ ತೋರಿಸುತ್ತೀರೋ ನೋಡಿ. ಉಳಿದಂತೆ, ಕೇಂದ್ರದ ಹಣ ಒಂದು ಭಾಗವಾದರೆ ರಾಜ್ಯವು ಈ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳೂವ್ಯಾಪಕವಾಗಿವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಪ್ರತಿಷ್ಠಿತ ಕಲೆ, ಸಾಹಿತ್ಯ, ಭಾಷಾವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವುದು, ಅವುಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಪರಿಸರದ ಅನನ್ಯತೆಯನ್ನುಅಧ್ಯಯನಾರ್ಹಗೊಳಿಸುವು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೆಲವು ಗಮನಾರ್ಹ ಕೆಲಸಗಳನ್ನು ಮಾಡಿದೆ. ಅದರೆ, ಎಲ್ಲವೂ ಚದುರಿದಂತಿದೆ. ಇವುಗಳ ಧ್ಯೇಯೋದ್ದೇಶಗಳು ಮಹತ್ವಾಕಾಂಕ್ಷೆಯಿಂದಕೂಡಿದ್ದರೂ ಇಂದು ಹೆಚ್ಚಿನ ನಿರ್ದಿಷ್ಟತೆ, ಸ್ಪಷ್ಟತೆಯಿಂದಯೋಜನಾಬದ್ಧವಾಗಿ ನಾವು ಮುಂದುವರಿಯಬೇಕಿದೆ. ಸರ್ಕಾರಗಳು, ಅಧ್ಯಕ್ಷರುಬದಲಾದಂತೆ ನೀತಿ, ಅನುದಾನ, ಉತ್ಸಾಹಗಳಲ್ಲಿವ್ಯತ್ಯಯವಾಗುತ್ತಾ ಹೋದರೆ ಇಂತಹ ಪ್ರಾಧಿಕಾರಗಳಿಂದ ಸಮರ್ಥ ಕೆಲಸವಾಗುವುದಿಲ್ಲ.
ಕನ್ನಡದ ಎಲ್ಲ ಪ್ರಾಚೀನ ಲಕ್ಷಣ ಗ್ರಂಥಗಳು ಸೇರಿದಂತೆ ಕ್ಲಾಸಿಕ್ ಕೃತಿಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಲಭ್ಯವಾಗುವಂತೆ ಮಾಡಲು ನಾವು ಇಂದು ವಿಶೇಷ ಆನ್ಲೈನ್ಜ್ಞಾನಕೋಶವೊಂದನ್ನು ರೂಪಿಸಬೇಕು. ಇದು ಸಂಪೂರ್ಣ ಉಚಿತವಾಗಿದ್ದು, ಅಕಡೆಮಿಕ್ ಶಿಸ್ತಿನಿಂದ ಕೂಡಿರಬೇಕು. ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಮಾತ್ರವೇ ಇದನ್ನು ಸೀಮಿತಗೊಳಿಸದೆ ಕನ್ನಡದ ಪ್ರಮುಖ ಸಂಶೋಧನಾ ಕೃತಿಗಳು, ಮಹತ್ವದ ಡಾಕ್ಟರೇಟ್ ಪ್ರಬಂಧಗಳೂ ಇದರಲ್ಲಿ ಲಭ್ಯವಾಗುವಂತಿರಬೇಕು. ಈ ಕೆಲಸ ನಿರಂತರವಾಗಿ, ಅಕಡೆಮಿಕ್ ಶಿಸ್ತಿನಿಂದ ನಡೆಯಬೇಕು. ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳು, ಕನ್ನಡ ಪೀಠಗಳು ಒಂದು ಸಮಾನ ಆಶಯವನ್ನು ಗುರುತಿಸಿಕೊಂಡು ತಮ್ಮ ವಿದ್ವತ್ತು, ಪಾಂಡಿತ್ಯ, ಪ್ರಾಜ್ಞತೆಯನ್ನುಮೆರೆದು ಜಗತ್ತಿನ ಶ್ರೇಷ್ಠ ಅಕಡೆಮಿಕ್ಆನ್ಲೈನ್ತಾಣವೊಂದನ್ನು ರೂಪಿಸಬೇಕು. ಈ ಜಾಲತಾಣದಲ್ಲಿ, ನಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಈವರೆಗೆ ಮಾಡಿರುವ ಕೆಲಸವೂ ಪ್ರತಿಫಲಿತವಾಗಲಿ.
ಒಟ್ಟಂದದಲ್ಲಿ ಹೇಳಬೇಕೆಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ, ಯಾವುದೇ ಭಾಷೆಯ ಸಾಮಾನ್ಯ ಕುತೂಹಲಿಯೇಅಗಲಿ, ಗಂಭೀರ ಅಕಡೆಮಿಕ್ಆಸಕ್ತಿಯುಳ್ಳ ವ್ಯಕ್ತಿಯೇ ಆಗಲಿ ಕನ್ನಡದ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿಕೈಯಾಡಿಸಿದರೆಕನ್
ವಚನ ಸಾಹಿತ್ಯ
ಇಡೀ ಕನ್ನಡ ಸಾಹಿತ್ಯಕ್ಕೆ ವಿಶ್ವಮುಖಿ ಶಕ್ತಿ ಬಂದದ್ದು- ೧೨ನೇ ಶತಮಾನದ ವಚನಕಾರರಿಂದ. ೯೦೦ ವರ್ಷಗಳ ಹಿಂದೆಯೇ ಕನ್ನಡದ ವಚನವಾರಿಧಿ ತುಂಬಿ ತುಳುಕಿನೆರೆಹೊರೆಗೆಲ್ಲಾ ತನ್ನ ಸಾಹಿತ್ಯಕ ನರುಗಂಪನ್ನುಪಸರಿಸಿದ್ದು ಐತಿಹಾಸಿಕ ದಾಖಲೆ.
ಅಲ್ಲಮಪ್ರಭುವಿನಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪ ಮಾದರಿ ಪಾರ್ಲಿಮೆಂಟಿನಂತೆವಿಶ್ವವಿಖ್ಯಾತವಾ
ಎಲ್ಲ ವಚನಕಾರರಿಗೂ ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವಿತ್ತು. ವಚನ ಹೇಳಲು ಸಂಪೂರ್ಣ ಸ್ವಾತಂತ್ರö್ಯವಿತ್ತು. ಹೀಗಾಗಿ ಸರ್ವದ ಏಳಿಗೆಗೂ ಅದು ನಾಂದಿಯಾಯಿತು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೂಡಿ ಅದು ಸಾಕಾರವಾಗಿ ಅಸ್ತಿತ್ವಕ್ಕೆ ಬಂದು ಆದರ್ಶವಾಗಿಪರಿಪಾಲನೆಯಾದದ್ದು ಇದೇ ಸಂದರ್ಭದಲ್ಲಿ. ಆಗಿನ ಸಮಾಜ ಸ್ವಾಸ್ಥö್ಯವನ್ನುಮಾದರಿಯಾಗಿ ನಾವೆಲ್ಲಾ ಅನುಸರಿಸುವುದು ಒಳಿತು. ಸಿದ್ಧರಾಮ, ಚೆನ್ನಬಸವಣ್ಣ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಹರಳಯ್ಯ, ಸಂಕವ್ವ ಮುಂತಾಗಿ ನೂರಾರು ವಚನಕಾರರು ಒಂದು ವಿನೂತನವಾದಹಾದಿಯನ್ನೇತೆರೆದರು. ಇಂದಿಗೂ ಅದು ನಮಗೆ ಬೆನ್ನ ಹಿಂದಿನ ನೆಚ್ಚಿನ ಹೊಂಬೆಕಾಗಿರುವುದುಸ್ಮರಣೀಯ. ಅನುಸರಣೀಯ ಕೂಡ.
ದಾಸ ಸಾಹಿತ್ಯ
ಸಂಗೀತ-ಸಾಹಿತ್ಯವನ್ನುಮೇಳೈಸುವತವನಿ
* * *
ಕನ್ನಡದ ಒಬ್ಬೊಬ್ಬ ಪ್ರಾಚೀನ ಕವಿಯೂ ಒಂದೊಂದು ಮಹತ್ತರವಾದ ಕೃತಿಯನ್ನೇಕಾಣಿಕೆಯಾಗೇನೀಡಿದ್ದಾನೆ. ಎಲ್ಲರಿಂದಲೂ ಕಲಿಯ ಬೇಕಾದ ಪಾಠಗಳಿಗೆ. ಕನ್ನಡಿಗರಾದ ನಾವೆಲ್ಲಾ ಆ ಆದರ್ಶಗಳನ್ನುಅಳವಡಿಸಿಕೊಂಡರೆ ನಮ್ಮ ಬಾಳು ಬೆಳಕಾಗುವುದು ಖಂಡಿತಾ.
ಆದಿ ಕವಿ ಪಂಪನ ವಿಶಾಲ ಮನೋಧರ್ಮ “ಮನುಷ್ಯ ಜಾತಿ ತಾನೊಂದೇವಲಂ” ಎಂಬ ವಿಶ್ವ ಮಾನವ ಪ್ರಜ್ಞೆಯಿಂದಇತ್ಯಾತ್ಮಕಗುಣಗಳಇತಿಹಾ
ಆನಂತರದಲ್ಲಿ ಬಂದ ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ... ಹದಿನೈದನೇ ಶತಮಾನದ ಹರಿದಾಸ ಪರಂಪರೆಯ ಎಲ್ಲ ದಾಸವರೇಣ್ಯರುಗಳೂ ಇಂದಿನ ಪೀಳಿಗೆಗೆ ಆದರ್ಶವೇ! ರತ್ನಾಕರವರ್ಣಿಯಂಥ ಭೋಗ-ಯೋಗದ ಸಮನ್ವಯ ತತ್ವವೂ ನಮಗೆ ಬೇಕಾದದ್ದೇ ಆಗಿದೆ.
ಹೀಗೆ- ಅಸಂಖ್ಯ ಕವಿಗಳಿಂದ ಅಗಣಿತ ಕನ್ನಡ ಕಾವ್ಯ ಕೃತಿಗಳಿಂದ ದೀಪ್ತವಾದ ಕನ್ನಡ ಸಾಹಿತ್ಯ ಪರಂಪರೆ ನಮಗೆ ಬದುಕಿನುದ್ದಕ್ಕೂಬೆಳಕಾಗಿಹರಿವದಾರಿ
ಕವಿ ಮುದ್ದಣ ಹಳಬರಲ್ಲಿಕೊನೆಯವನು; ಹೊಸಬರಲ್ಲಿಮೊದಲನೆಯವನು. ೧೯೦೫ರ ನಂತರದ ಕನ್ನಡ ಸಾಹಿತ್ಯ ಕ್ಷೇತ್ರವು ಪೊರೆ ಬಿಟ್ಟ ಹಾವಿನಂತೆ- ವಿನೂತನವಾಯಿತು.
ಪ್ರಮುಖವಾಗಿ ಪಂಜೆ ಮಂಗೇಶ ರಾಯರು ಹೊಸ ಬಗೆಯ ಪದ್ಯಗಳನ್ನುರಚಿಸಲು ತೊಡಗಿದ್ದರು. ವಾಸ್ತವವಾಗಿ ಕನ್ನಡ ನವೋದಯ ಕಾವ್ಯದ ನೈಜ ಹರಿಕಾರರು ಅವರೇ!
೧೯೨೦ರ ವೇಳೆಗೆ ಕನ್ನಡ ಕಾವ್ಯದ ನೀಲಿ ನಕಾಶೆಯೇ ಬದಲಾಗಿ ಹೋಗಿತ್ತು. ಕವೀಂದ್ರರವೀಂದ್ರರಿಗೆ ಅವರ “ಗೀತಾಂಜಲಿ” ಸಂಕಲನಕ್ಕಾಗಿನೋಬೆಲ್ ಪಾರಿತೋಷಕ ಬಂದ ಘಳಿಗೆ ಭಾರತೀಯ ಸಾಹಿತ್ಯದಲ್ಲಿ ಅನೇಕ ರೂಪಾಂತರಗಳಾದವು.
“ಕನ್ನಡದ ಕಣ್ವರ್ಷಿ” ಎನ್ನಿಸಿಕೊಂಡ ಬಿ.ಎಂ. ಶ್ರೀಕಂಠಯ್ಯ ಅವರು “ಅವಳ ತೊಡಿಗೆ ಇವಳಿಗಿಟ್ಟು ನೋಡ ಬಯಸಿದೆ, ಇವಳ ಉಡುಗೆ ಅವಳಿಗಿಟ್ಟು ಹಾಡ ಬಯಸಿದೆ” ಎಂಬ ಮಾತೇ ಮಾರ್ಮಿಕವಾದುದಾಗಿದೆ.
“ಶ್ರೀ” ಅವರ ಇಂಗ್ಲಿಷ್ ಗೀತೆಗಳು (ಕನ್ನಡಕ್ಕೆರೂಪಾಂತರವಾಗಿ ಬಂದ ಕವಿತೆಗಳು) ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹಾದಿ ತೆರೆದವು. ಕನ್ನಡ ನಾಡಿನುದ್ದಕ್ಕೂ ಕಾವ್ಯ ಕ್ಷೇತ್ರದಲ್ಲಿ ಹೊಸ ಸಂಚಲನವೇಸೃಷ್ಟಿಯಾಯಿತು.
ಅಲ್ಲಿಂದ ನವೋದಯದ ಕಾವ್ಯದ ಅಲೆ ಕವಿಗಳಅಭಿವ್ಯಕ್ತಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ಬಗೆ ಬಗೆ ಅವಕಾಶಗಳು ಕಂಡು ಬಂದು “ಅರುಣೋದಯ ಕಾಲ” ಹೊನ್ನೇಸರಹೊಂಬಣ್ಣದಂತೆ- ಇಡೀ ಕರ್ನಾಟಕದಲ್ಲಿ ಮೆಲ್ಲ ಮೆಲ್ಲಗೆ ಪಸರಿಸುತ್ತಾನಾಡಿನುದ್ದಗಲ ಸಾಂಸ್ಕೃತಿಕ ಉತ್ಕರ್ಷ ಕಾಣಿಸಿಕೊಂಡಿತು.
ಮುದ್ದಣ ಕವಿಯನಂತರದಲ್ಲಿ ಕನ್ನಡ ನವೋದಯ ಕವಿಗಳ ಕಾವ್ಯ ಕೃಷಿ ಸಮೃದ್ಧವಾಗಿದೆ. ಕುವೆಂಪು, ಬೇಂದ್ರೆ, ಶಿವರಾಮಕಾರಂತ, ವಿ.ಕೃ. ಗೋಕಾಕ್, ಡಿವಿಜಿ, ಮಾಸ್ತಿ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ, ರಾಜರತ್ನಂ, ವಿ.ಸೀ., ಎಂ.ವಿ.ಸೀ ... ಒಬ್ಬರಲ್ಲಇಬ್ಬರಲ್ಲಹರಿದದ್ದು ಅನಂತವಾದ ಅನನ್ಯವಾದಅಸೀಮವಾದ ಕಾವ್ಯ ಕಾವೇರಿ.
ಹಾಗೆಯೇ ಅನಕೃ, ತರಾಸು, ಕಟ್ಟೀಮನಿ, ಚದುರಂಗ, ನಿರಂಜನ ಹೀಗೆ ಒಂದು ದೊಡ್ಡ ಪಟ್ಟಿಯನ್ನೇ ನಾವು ನೀಡಬಹುದು. ಟಿ.ಪಿ. ಕೈಲಾಸಂ, ಶ್ರೀರಂಗ ಮುಂತಾಗಿ ನಾಟಕ ಕ್ಷೇತ್ರದಲ್ಲೂ ಹೊಸ ಹೊಸಆಯಾಮಗಳುತೆರೆದುಕೊಂಡವು.
ನವೋದಯ ಕಾವ್ಯದಸಂದರ್ಭದಲ್ಲಂತೂಬಿಎಂಶ್ರೀ ತರುವಾಯ ಕುವೆಂಪು, ಬೇಂದ್ರೆ, ಪು.ತಿ.ನ., ಕೆ.ಎಸ್.ನ. .... ಒಬ್ಬರಲ್ಲಇಬ್ಬರಲ್ಲ. ಒಬ್ಬೊಬ್ಬಕವಿಯೂಅನರ್ಘ್ಯರತ್ನವೇ!
ಕನ್ನಡ ಸಾಹಿತ್ಯದ ಬೃಹತ್ ವಾರಿಧಿಯಲ್ಲಿಮೀಯದವರಿಲ್ಲ. ಮಹಿಳೆಯರ ಪಾತ್ರವೂಅದ್ಭುತವೇ! ಕೊಡಗಿನ ಗೌರಮ್ಮ, ತ್ರಿವೇಣಿ, ವಾಣಿ, ಡಾ. ಗಿರಿಜಮ್ಮ- ಇವರೆಲ್ಲರಕಾಣಿಕೆಗಳೂ ಅಮೂಲ್ಯ. ಇಂದಿನ ವೈದೇಹಿ, ನೇಮಿಚಂದ್ರರವರೆಗೆ- ನಡೆದು ಬಂದ ಸಾಹಿತ್ಯದ ಹೆಜ್ಜೆ ಗುರುತುಗಳದಾರಿಯೇ ಒಂದು ಉಜ್ವಲ ದಾಖಲೆ!
ಎಂಥ ಹೊಸ ಮಾರ್ಗವೂ ಕಾಲ ಕಳೆದಂತೆಪೇಲವವಾಗಿಹಳತಾಗುವುದು ನೈಸರ್ಗಿಕ ನಿಯಮ. ಮೂರುವರೆ ದಶಕಗಳ ಕಾಲ ನಿರಂತರ ಮೊಳಗಿದ ರಮ್ಯ ಕಾವ್ಯ ಮಾರ್ಗಕ್ರಮ ಕ್ರಮೇಣ ಒಂದೇ ಬಂಡೀಜಾಡಿಗೆ ಬಿದ್ದು ಸವಕಲಾಯಿತು.
ಆಗ ಹೊಸತಿನಅನ್ವೇಷಣೆಯಲ್ಲಿದ್ದ ಪ್ರೊ. ಎಂ. ಗೋಪಾಲಕೃಷ್ಣಅಡಿಗರು ನವ್ಯಕಾವ್ಯ ಮಾರ್ಗಕ್ಕೆ ನಾಂದಿ ಹಾಡಿದರು. “ನಡೆದು ಬಂದ ದಾರಿಯ ಕಡೆ ಹೊರಳಿಸಬೇಡ - ಕಣ್ಣು ತಿರುಗಿಸಬೇಡ” ಎಂಬಂಥಘೋಷಣೆಯೊಂದಿಗೆ ವಿನೂತನ ಮಾರ್ಗದಲ್ಲಿ ಕಾವ್ಯದಪಯಣವನ್ನುಮುಂದುವರೆಸಿದರು. “ಅನ್ಯರೊರೆಹುದನೇಬರೆಬರೆದುಭಿನ್ನವಾ
ಮೊಗೇರಿ ಗೋಪಾಲ ಕೃಷ್ಣ ಅಡಿಗರ ಆಗಿನ ನಿಲುವು ಕಟ್ಟುವೆವು ನಾವು ಹೊಸ ನಾಡೊಂದನು ಹೊಸ ನೆತ್ತರುಕ್ಕುಕ್ಕಿಆರಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನುರಸದಬೀಡೊಂದನು!
ಕೋಟಿ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು! ಆದಾವುಕರೆದಾವುವಾಂಛಿತವನು.
ಹೀಗೆ ಭಾವಾವೇಶದಿಂದ ಬರೆದ ಕವಿ ಮುಂದಿನ ತಮ್ಮ ಕವನ ಸಂಕಲನಗಳಲ್ಲಿ ಸಂಪೂರ್ಣ ಬದಲಾಗುತ್ತಾರೆ... ಆಂಗ್ಲ ನವ್ಯ ಕಾವ್ಯದ ಕೇಂದ್ರ ಬಿಂದು ಎನ್ನಿಸಿಕೊಂಡ ಟಿ.ಎಸ್. ಎಲಿಯಟ್ಟನಕಾವ್ಯದಜಾಡಿನಲ್ಲಿಸಾಗುತ್
ಕನ್ನಡ ನಾಡಿನಲ್ಲಿ ಸುಪ್ರಸಿದ್ದಕಾದಂಬರಿಕಾರರಾದಡಾ. ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು. ಅಡಿಗರಹಾದಿಯಲ್ಲಿಸಾಗಿದಯು.ಆರ್. ಅನಂತಮೂರ್ತಿ, ಬಿ.ಸಿ. ರಾಮಚಂದ್ರ ಶರ್ಮ, ಪಿ. ಲಂಕೇಶ್, ಚಂದ್ರಶೇಖರ ಪಾಟೀಲ, ಸಿದ್ಧಲಿಂಗಪಟ್ಟಣಶೆಟ್ಟಿ, ಡಾ. ಗಿರಡ್ಡಿಗೋವಿಂದರಾಜ, ಸುಮತೀಂದ್ರನಾಡಿಗ್, ಡಾ. ಬುದ್ದಣ್ಣಹಿಂಗಮಿರೆ, ಸುಬ್ರಾಯಚೊಕ್ಕಾಡಿ, ಕೆ.ವಿ. ತಿರುಮಲೇಶ್, ದೊಡ್ಡರಂಗೇಗೌಡ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಮಣ ರಾವ್, ವೇಣುಗೋಪಾಲ ಸೊರಬ, ಮುಂತಾದವರುತುಳಿದ ಹಾದಿ ಸಂಪೂರ್ಣ ನವ್ಯ.
ಕಾಲಕ್ರಮೇಣ ನವ್ಯವೂ ತನ್ನ ಪ್ರಭಾವ ಕುಂಠಿತವಾದಾಗಹುಟ್ಟಿಕೊಂಡದ್ದು ಬಂಡಾಯ ಕಾವ್ಯ. ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚೆನ್ನಣ್ಣವಾಲೀಕಾರ, ಸರಜೂಕಾಟ್ಕರ್ಮುಂತಾದವರುಶತಶತಮಾನಗಳಿಂ
ನವ್ಯೋತ್ತರ ಕನ್ನಡ ಕಾವ್ಯದ ಸಂದರ್ಭದಲ್ಲಿ ಮೂಡ್ನಾಕೂಡು
ಚಿನ್ನಸ್ವಾಮಿ, ಡಾ. ಎಲ್. ಹನುಮಂತಯ್ಯ, ಡಾ. ಅರವಿಂದ ಮಾಲಗತ್ತಿ, ಲಕ್ಷಿö್ಮÃಪತಿ ಕೋಲಾರ, ಕೆ.ಬಿ. ಸಿದ್ದಯ್ಯ, ಸುಬ್ಬುಹೊಲೆಯಾರ್, ಡಾ. ಕೃಷ್ಣಪ್ಪ ಕೆ., ಡಾ. ಎಚ್.ಟಿ. ಪೋತೆ, ಡಾ. ವಡ್ಡಗೆರೆನಾಗರಾಜಯ್ಯ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಸುಮಾ ಯು.ಬಿ., ಡಾ. ಬಿ.ಕೃಷ್ಣಪ್ಪ, ಡಾ. ಮಳ್ಳೂರುನಾಗರಾಜು, ಡಾ. ರಾಜಪ್ಪ ದಳವಾಯಿ, ಡಾ. ದೇವಯ್ಯ ಹರವೆ, ಪ್ರೊ. ಮಲ್ಲೇಪುರಂಜಿ. ವೆಂಕಟೇಶ್, ದು. ಸರಸ್ವತಿ, ಡಾ. ಅನುಸೂಯಾಕಾಂಬಳೆ, ಡಾ. ಅಪ್ಪಗೆರೆಸೋಮಶೇಖರ, ಡಾ. ಸುಜಾತಾ ಚಲವಾದಿ, ಡಾ. ಸದಾಶಿವ ದೊಡ್ಡಮನಿ, ಡಾ. ಅರ್ಜುನ ಗೊಳಸಂಗಿ, ಡಾ. ಟಿ.ಎಂ. ಭಾಸ್ಕರ್, ಡಾ. ಸತ್ಯಾನಂದಪಾತ್ರೋಟ, ಡಾ. ಅಣ್ಣಮ್ಮ, ಟಿ. ತಿಪ್ಪೇಸ್ವಾಮಿ ಕೆರೆಯಾಗಲಹಳ್ಳಿಮುಂತಾದವರು ಕನ್ನಡ ಸಾಹಿತ್ಯದಲ್ಲಿ ದಲಿತ ಬದುಕಿನ ಅನಾವರಣವನ್ನು ಮಾಡಿದ್ದಾರೆ.
ಹಿಂದೆಂದಿಗಿಂತಲೂ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಜಾಗೃತಿ ಮುಂಚೂಣಿಯಲ್ಲಿದೆ. ಇಡೀ ಭಾರತೀಯ ಪರಿಸರವನ್ನು ಮಹಿಳೆಯರು ತಮ್ಮ ಕಲಾಕೃತಿಗಳಲ್ಲಿಅತ್ಯುತ್ತಮವಾಗಿ ಅನಾವರಣ ಮಾಡುತ್ತಿರುವುದು ವಾಸ್ತವದ, ಶುಭದ ಸಂಗತಿಯಾಗಿದೆ.
ಶ್ರೀಮತಿ ವೈದೇಹಿ, ಶ್ರೀಮತಿ ಸಂಧ್ಯಾ ಪೈ, ಪ್ರೊ. ಸ. ಉಷಾ, ಶ್ರೀಮತಿ ಸವಿತಾ ನಾಗಭೂಷಣ, ಡಾ. ಕೆ. ರಾಜೇಶ್ವರಿ ಗೌಡ, ಶ್ರೀಮತಿ ಪ್ರತಿಭಾ ನಂದಕುಮಾರ್, ಡಾ. ನೇಮಿಚಂದ್ರ, ಶ್ರೀಮತಿ ಎಚ್.ಎಲ್. ಪುಷ್ಪ, ಶ್ರೀಮತಿ ಪಾರ್ವತಿ ಐತಾಳ್, ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ, ಡಾ. ಪಿ. ಚಂದ್ರಿಕಾ, ಪ್ರೊ. ಎಲ್.ವಿ. ಶಾಂತಕುಮಾರಿ, ಶ್ರೀಮತಿ ಹೇಮಾ ಪಟ್ಟಣಶೆಟ್ಟಿ, ಡಾ. ಎಂ.ಎಸ್. ಆಶಾದೇವಿ, ಡಾ. ಮಲ್ಲಿಕಾಘಂಟಿ, ಶ್ರೀಮತಿ ಬಾ.ಹ. ರಮಾಕುಮಾರಿ, ಡಾ. ತಮಿಳ್ ಸೆಲ್ವಿ, ಶ್ರೀಮತಿ ರೂಪಾ ಹಾಸನ, ಶ್ರೀಮತಿ ಎಂ.ಆರ್. ಕಮಲ, ಶ್ರೀಮತಿ ವೈ.ಕೆ. ಸಂಧ್ಯಾಶರ್ಮಾ, ಡಾ. ಪ್ರೀತಿ ಶುಭಚಂದ್ರ, ಶ್ರೀಮತಿ ಎಚ್.ಎಸ್. ಮುಕ್ತಾಯಕ್ಕ, ಡಾ. ಪದ್ಮಿನಿ ನಾಗರಾಜು, ಶ್ರೀಮತಿ ಬಿ.ಎನ್. ಸುಮಿತ್ರಾಬಾಯಿ, ಶ್ರೀಮತಿ ತೇಜಸ್ವಿನಿ ನಿರಂಜನ, ಡಾ. ಎಚ್.ಎಸ್. ಶ್ರೀಮತಿ, ಡಾ. ಗಾಯತ್ರಿ ನಾವಡ, ಡಾ. ಕಮಲಾಹಂಪನಾ, ಶ್ರೀಮತಿ ಮಧು ವೆಂಕಾರೆಡ್ಡಿ, ಶ್ರೀಮತಿ ಮೀನಾ ಮೈಸೂರು, ಶ್ರೀಮತಿ ಶಾಂತಾಇಮ್ರಾಪುರ, ಡಾ. ಧರಣೀದೇವಿಮಾಲಗತ್ತಿ, ಶ್ರೀಮತಿ ಕೆ. ಷರೀಫಾ, ಡಾ. ಕವಿತಾಕುಸುಗಲ್ಲ, ಶ್ರೀಮತಿ ಭಾನು ಮುಷ್ತಾಕ್, ಶ್ರೀಮತಿ ವಿಜಯಾಸುಬ್ಬರಾಜ್, ಶ್ರೀಮತಿ ಟಿ.ಸಿ. ಪೂರ್ಣಿಮಾ, ಶ್ರೀಮತಿ ಸಬೀಹಭೂಮಿಗೌಡ, ಶ್ರೀಮತಿ ಸರಸ್ವತಿ ಚಿಮ್ಮಲಗಿ, ಡಾ. ವೀಣಾ ಶಾಂತೇಶ್ವರ, ಡಾ. ಶೈಲಜಾಉಡಚಣ, ಡಾ. ಸಬಿತಾಬನ್ನಾಡಿ, ಡಾ. ವಿನಯಾಒಕ್ಕುಂದ, ಡಾ. ಎಚ್.ಎಸ್. ಅನುಪಮಾ, ಶ್ರೀಮತಿ ಶಾರದಾ, ಡಾ. ವಿಜಯಶ್ರೀ ಸಬರದ, ಡಾ. ಸಿ.ಎಸ್. ವಿಜಯಲಕ್ಷಿö್ಮ, ಶ್ರೀಮತಿ ಸಾರಾಅಬೂಬಕರ್, ಲತಾ ರಾಜಶೇಖರ್, ಬ್ಯಾಡಗಿಸಂಕಮ್ಮ.
ಕನ್ನಡ ಚಲನಚಿತ್ರ ಗೀತ ಸಾಹಿತ್ಯ ವಿಭಾಗದಲ್ಲಿ ಜಿ.ವಿ. ಐಯ್ಯರ, ಕುರಸೀ, ಹುಣಸೂರು ಕೃಷ್ಣಮೂರ್ತಿ, ಚಿ. ಸದಾಶಿವಯ್ಯ ತರುವಾಯ ಬಂದ ಗೀತ ರಚನಕಾರರಲ್ಲಿಪ್ರಮುಖರಾದಗೀತಪ್ರಿಯ, ಆರ್.ಎನ್. ಜಯಗೋಪಾಲ್, ಚಿ. ಉದಯಶಂಕರ, ವಿಜಯಾನಾರಸಿಂಹ, ಡಾ. ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಶ್ಯಾಮಸುಂದರ ಕುಲಕರ್ಣಿ, ಹಂಸಲೇಖ, ವಿ. ಮನೋಹರ್, ಜಯಂತ ಕಾಯ್ಕಿಣಿ, ಡಾ. ವಿ. ನಾಗೇಂದ್ರಪ್ರಸಾದ್, ಗೋಪಾಲ ವಾಜಪೇಯಿ, ಕಲ್ಯಾಣ್, ಕವಿರಾಜ್, ಡಾ. ಡಿ. ಭರತ್, ಹೃದಯಶಿವ, ಮುಂತಾದವರ ಸಾಹಿತ್ಯ ಸೇವೆ ಶ್ಲಾಘನೀಯವಾದುದು.
ಇನ್ನಾದರೂ ಎಲ್ಲ ಮಡಿವಂತಿಕೆಗಳನ್ನು ಬಿಟ್ಟು ಮುಕ್ತವಾಗಿ ತೆರೆದ ಮನಸ್ಸಿನಿಂದ ಚಲನಚಿತ್ರ ಗೀತ ಸಾಹಿತ್ಯದ ಸಂಪುಟಗಳು“ಗೀತಕೋಶ”ದ ಸ್ವರೂಪದಲ್ಲಿಪ್ರಕಟವಾಗಲಿ. ಸಾಹಿತ್ಯಕ ವೇದಿಕೆಗಳಲ್ಲಿ ಆ ಸಾಹಿತ್ಯವೂ ಗಂಭೀರವಾಗಿ ಚರ್ಚಿತವಾಗಲಿ.
ವೈದ್ಯಕೀಯ ಸಾಹಿತ್ಯ
ಇಂದು ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕವಾದ ವಿನೂತನ ಆವಿಷ್ಕಾರಗಳುಬದಲಾವಣೆಯನ್ನುತರುತ್ತಿ
ಯಾವುದೇ ಭಾಷೆಯಲ್ಲಿ ಆದ್ಯತೆ ದೊರಕಬೇಕಾದದ್ದು ಆ ಭಾಷೆಯ ಮಕ್ಕಳ ಸಾಹಿತ್ಯದ ರಚನೆಕಾರರಿಗೆ. ಕನ್ನಡದಲ್ಲಿ ರಾಜರತ್ನಂ, ಎಚ್.ಎಸ್. ವೆಂಕಟೇಶಮೂರ್ತಿ, ಸಿಸು ಸಂಗಮೇಶ, ಟಿ.ಎಸ್. ನಾಗರಾಜ ಶೆಟ್ಟಿ, ಆನಂದ ಪಾಟೀಲ, ತಮ್ಮಣ್ಣಬೀಗಾರ, ಬಸುಬೇವಿನಗಿಡದ, ಶಂಗುಬಿರಾದಾರ, ಕಂಚ್ಯಾಣಿಶರಣಪ್ಪ, ಡಾ. ಜಯಶ್ರೀ ಅರವಿಂದ ಮುಂತಾದವರುಚಿರಂತನವಾದಕಾಣಿಕೆಯನ್ನು ನೀಡಿದ್ದಾರೆ.
ವನ್ಯಜೀವಿಗಳ ಬಗೆಗೆ ಅತ್ಯುದ್ಭತವಾದ ಕೃತಿಗಳನ್ನು ನೀಡಿದವರುಡಾ. ಉಲ್ಲಾಸ ಕಾರಂತ ಮತ್ತು ಕೃಪಾಕರ ಹಾಗೂ ಸೇನಾನಿ ಅವರುಗಳು. ಶ್ರೀಮತಿ ಸುಮಂಗಲಾಮಮ್ಮಿಗಟ್ಟಿ ಅವರ ಕೊಡುಗೆಯೂ ಉಲ್ಲೇಖನೀಯವಾದುದು.
ಶ್ರೀಮತಿ ಸುಧಾ ಮೂರ್ತಿ, ಲತಾ ಗುತ್ತಿ, ಡಾ. ಎಸ್.ಪಿ. ಪದ್ಮಪ್ರಸಾದ್, ನೇಮಿಚಂದ್ರ, ಸುಚರಿತಾ ಹೆಗಡೆ ಅವರು ಕಣ್ಣಿಗೆ ಕಟ್ಟುವ ಹಾಗೆ ಪ್ರವಾಸ ಕಥನಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಪುಸ್ತಕೋದ್ಯಮ
ಕರ್ನಾಟಕ ರಾಜ್ಯ ಗ್ರಂಥಾಲಯಕ್ಕೆ ಸಂಬಂಧಿಸಿದ ಹಾಗೆ ನಾಲ್ಕು ಮಾತು ನಾನು ಹೇಳಲೇಬೇಕಾಗಿದೆ. ಈ ಹೊತ್ತು ಪುಸ್ತಕೋದ್ಯಮಸೊರಗಬಾರದು; ಅದು ಪರಿಪ್ಲುತವಾಗಬೇಕು. ಗ್ರಂಥಗಳುಸರಕುಗಳಲ್ಲ. ಅವುಗಳಲ್ಲಿ ಸಂಸ್ಕೃತಿಯಹೃದಯವಿದೆ. ಬಿಬಿಎಂಪಿಗ್ರಂಥಾಲಯಗಳಿಗೆ ಕೊಡಬೇಕಾದ ಹಣ ಸುಮಾರು ೫೦೦ ಕೋಟಿ ಕರವನ್ನು ಬಾಕಿ ಉಳಿಸಿಕೊಂಡು ಆ ಹಣವನ್ನು ಬೇರೆ ಖಾತೆಗಳಿಗೆ ನೀಡಿ ಪುಸ್ತಕೋದ್ಯಮಕ್ಕೆ ಸಲ್ಲಬೇಕಾದ ಧನ ಸಂಗ್ರಹವನ್ನು ತಡೆ ಹಿಡಿದು ಬಹಳ ಅನ್ಯಾಯ ಮಾಡಿದೆ.
ಹೀಗಾದರೆ, ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ? ಪುಸ್ತಕ ಬರೆಯುವ ಬರಹಗಾರರು ಬದುಕುವುದು ಹೇಗೆ? ಇಂಥ ವಿಷಮ ಸ್ಥಿತಿಯಲ್ಲಿ ಪುಸ್ತಕೋದ್ಯಮಬೆಳೆಯುವುದಾದರೂ ಹೇಗೆ? ನಮ್ಮ ಪ್ರೀತಿಯ ಸರ್ಕಾರ ಇದನ್ನು ಸರಿಪಡಿಸಬೇಕು. ಪುಸ್ತಕೋದ್ಯಮಕ್ಕೆ ಕಾಯಕಲ್ಪ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇದುವರೆಗೆ ಸಗಟು ಖರೀದಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಮೂಲಕ ಒಬ್ಬೊಬ್ಬಪ್ರಕಾಶಕರಿಂದ ೩೦೦ ಪ್ರತಿಗಳನ್ನು ಮಾತ್ರ ಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಪುಸ್ತಕೋದ್ಯಮಬದುಕುಳಿಯಬೇಕಾದರೆ ನೆರೆಯ ರಾಜ್ಯಗಳಾದ ತಮಿಳು ನಾಡು, ಕೇರಳದಲ್ಲಿರುವಂತೆ ಕನಿಷ್ಠ ೫೦೦ ಪ್ರತಿಗಳನ್ನಾದರೂ ಕೊಳ್ಳುವ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ವರ್ಷ ಖರೀದಿಸಿದ ಪುಸ್ತಕದ ಹಣವನ್ನು ಪ್ರಕಾಶಕರಿಗೆ ತಲುಪಿಸುವ ತುರ್ತು ಕಾರ್ಯವೂಆಗಬೇಕಿದೆ.
ಕನ್ನಡ ಶಾಸ್ತ್ರೀಯ ಭಾಷೆ
ಸರ್ಕಾರ ತುರ್ತಾಗಿ ಗಮನಹರಿಸಬೇಕಾದ ಕೆಲವು ವಿಷಯಗಳು
ಅಕ್ಟೋಬರ್ ೩೦, ೨೦೦೮ ರಂದು ಕನ್ನಡಕ್ಕೆಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಿತು. ಆದರೆ ಅದು ನಾಮಕಾವಸ್ಥೆಘೋಷಣೆಯಾಗಿ ಉಳಿದಿದೆ. ತಮಿಳು ಭಾಷೆ ಮೊದಲಬಾರಿಗೆ ೨೦೦೪ರಲ್ಲಿ ಈ ಸ್ಥಾನಮಾನ ಪಡೆಯಿತು.
ತಮಿಳುನಾಡು ಸರ್ಕಾರ ಈ ನಿಟ್ಟಿನಲ್ಲಿ ಅನೇಕ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆರಂಭದಿಂದಲೇ ವಾರ್ಷಿಕ ೭-೮ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ನೆರವನ್ನು ಪಡೆಯುತ್ತಿದೆ. ಹದಿನೆಂಟು ವರ್ಷದಲ್ಲಿ ನೂರಾರು ಕೋಟಿ ರೂಪಾಯಿಗಳು ತಮಿಳು ಶಾಸ್ತ್ರೀಯ ಭಾಷೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಹರಿದು ಬಂದಿದೆ.
ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸೂಕ್ತವಾದ ಕಾರ್ಯಕ್ರಮ ರೂಪಿಸದೇಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಕೇಂದ್ರದಿಂದ ಕೇವಲ ೨-೩ ಕೋಟಿ ರೂ. ನೆರವು ಪಡೆದಿರಬಹುದು. ಇದು ನಮ್ಮ ಜಡತೆಯಕುರುಹಲ್ಲವೇನು?
ಬಹಳ ವಿಳಂಬವಾಗಿ ಹೋದ ವರ್ಷದಿಂದ ಮೈಸೂರಿನಲ್ಲಿ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥಾನದ ಅಂಗ ಸಂಸ್ಥೆಯಾಗಿ, ಅದರ ಅಧೀನದಕಚೇರಿಯಾಗಿರೂಪಿಸಿದೆ. ಸರ್ಕಾರ ಇದಕ್ಕೆ ಒಂದು ಜಾಗ ಕೊಡುವಲ್ಲಿಯೂಗಮನಹರಿಸಲಿಲ್ಲ. ಕೊನೆಗೆ ಮೈಸೂರು ವಿಶ್ವವಿದ್ಯಾನಿಲಯದವರು ಜಾಗ ಕೊಟ್ಟರು. ಹೀಗಾಗದರೆ ಹೇಗೆ? ಕನ್ನಡಿಗರುಬೆಳೆಯುವದೆಂತು?
ಕನ್ನಡ ಮತ್ತು ಸಂಸ್ಕೃತಿ ಸಚಿವರಅಧ್ಯಕ್ಷತೆಯಲ್ಲಿಉನ್ನತಮಟ್ಟದ ಸಮಿತಿ ಆಗಬೇಕು.
ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಕೇಂದ್ರದಿಂದ ನೆರವು ಪಡೆಯುವುದು ಇವುಗಳ ಬಗ್ಗೆ ಕಾಲಕಾಲಕ್ಕೆಚರ್ಚಿಸಿ ಯೋಜನೆಗಳನ್ನು ರೂಪಿಸುವ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು, ಎಲ್ಲಾ ಅಕಾಡೆಮಿಗಳ ಅಧ್ಯಕ್ಷರು, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನುಕಲಾಸಂಘ, ಇತಿಹಾಸ ಅಕಾಡೆಮಿ ಮೊದಲಾದ ಎಲ್ಲ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರುಸದಸ್ಯರುಗಳಾಗಿರಬೇಕು.
ಕೇಂದ್ರದ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು.
ಮೊಟ್ಟಮೊದಲಿಗೆ ಈ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ಈ ಕೇಂದ್ರದ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನು, ಕಚೇರಿ ಸಿಬ್ಬಂದಿ ವರ್ಗದವರನ್ನು ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ನೇಮಿಸಬೇಕು. ಈ ಬಗ್ಗೆ ರಾಜ್ಯ ತಮಿಳುನಾಡಿನಮಾದರಿಯಲ್ಲಿಯೇ ಸ್ವಾಯತ್ತ ಕೇಂದ್ರ ರಚಿಸುವಂತೆಕೇಂದ್ರಕ್ಕೆಒತ್ತಾಯಿಸಬೇ
ಶಾಸ್ತ್ರೀಯಭಾಷಾ ಅಧ್ಯಯನದ ಉಪ ಕೇಂದ್ರಗಳ ಸ್ಥಾಪನೆ ಆಗಬೇಕು.
ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಉಪಕೇಂದ್ರಗಳನ್ನುಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನುಕಲಾಸಂಘ, ಬೆಂಗಳೂರು, ಕರ್ನಾಟಕ ಸಂಘ ಧಾರವಾಡ, ಮೊದಲಾದ ಕನ್ನಡಪರಸಂಘಗಳನ್ನುಶಾಸ್ತ್ರೀಯ ಭಾಷೆಯ ಅಧ್ಯಯನದ ಉಪ ಕೇಂದ್ರಗಳನ್ನಾಗಿಸ್ಥಾಪಿಸಬೇಕು. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಶಾಸ್ತ್ರೀಯ ಭಾಷೆ
ಅಧ್ಯಯನ ಅಭಿವೃದ್ಧಿ ಅಡಿಯಲ್ಲಿ ಕೇಂದ್ರದಿಂದ ನೆರವನ್ನು ಪಡೆಯಬೇಕು.
ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಶಾಸ್ತ್ರೀಯಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆಗಬೇಕು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ, ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗವನ್ನು ಮಾಡಿ ಅದಕ್ಕೆ ಒಬ್ಬರು ಹೆಚ್ಚುವರಿ ಆಯುಕ್ತರನ್ನುನೇಮಿಸಿ, ಅವರಿಗೆ ಪೂರ್ಣಪ್ರಮಾಣದಸಿಬ್ಬಂದಿಯನ್ನು ನೀಡಬೇಕು.
ಈ ವಿಭಾಗವು ಕನ್ನಡ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರದ ಸಂಸ್ಥೆಗಳೊಡನೆ, ವಿಶ್ವವಿದ್ಯಾನಿಲಯಗಳೊಡನೆ ಸಮನ್ವಯ ಸಾಧಿಸಿ, ಶಾಸ್ತ್ರೀಯ ಭಾಷೆ ಅಭಿವೃದ್ಧಿ ಕಾರ್ಯಗಳು ಓವರ್ಲ್ಯಾಪ್ ಆಗದಂತೆ ನೋಡಿಕೊಂಡು ಎಲ್ಲ ಸಂಸ್ಥೆಗಳಿಗೂ ಪ್ರತ್ಯೇಕ ಯೋಜನೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ನೀಡಬೇಕು.
ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ಆಗಬೇಕು.
ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯಭಾಷಾ ಅಧ್ಯಯನ ವಿಭಾಗವನ್ನು ತೆರೆದು ಅದಕ್ಕೆ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನುನೇಮಿಸಲು ಸರ್ಕಾರ ಪೂರ್ಣ ನೆರವು ನೀಡಬೇಕು. ಅದೇ ರೀತಿ ಹೊರನಾಡಿನವಿಶ್ವವಿದ್ಯಾನಿಲಯಗಳಲ್ಲಿ
ವಿಶ್ವವಿದ್ಯಾನಿಲಯಗಳಿಂದ ಶಾಸನ ಸಂಪುಟಗಳ ಪ್ರಕಟಣೆ, ಹಳಗನ್ನಡ ಕಾವ್ಯಗಳ ಪ್ರಕಟಣೆ, ಹಸ್ತಪ್ರತಿಗಳಲ್ಲಿ ಉಳಿದಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಕಾವ್ಯಗಳನ್ನುಪ್ರಕಟಿಸುವ ಯೋಜನೆಗಳನ್ನು ರೂಪಿಸಬೇಕು.
ಕನ್ನಡದ ಪ್ರಮುಖ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕೃತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು.
ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಶಾಸನಾತ್ಮಕ ಮಾನ್ಯತೆ
ಈಗ ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಈ ಎಲ್ಲ ಕಾರ್ಯಕ್ರಮಗಳಿಗೆಶಾಸನಾತ್ಮಕ ಮಾನ್ಯತೆ ಇರುತ್ತದೆ. ಈ ವಿಧೇಯಕವನ್ನುವಿಧಾನಸಭಾಅಧ್ಯಕ್ಷರ ಮೂಲಕ ಜಂಟಿ ಸದನದ ಸಮಿತಿಗೆ ಒಪ್ಪಿಸಿ, ಮೂರು ತಿಂಗಳಲ್ಲಿ ವಿಧೇಯಕ ಸಿದ್ಧಪಡಿಸಿ, ಬರುವ ಜನವರಿ ತಿಂಗಳ ಅಧಿವೇಶನದಲ್ಲಿ ವಿಧೇಯಕವನ್ನುಅಂಗೀಕರಿಸಿ, ರಾಷ್ಟçಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು.
ತಮಿಳುನಾಡಿನಯೋಜನೆಗಳಮಾದರಿಯನ್ನು ಅಧ್ಯಯನ ಮಾಡಬೇಕು
ತಮಿಳು ಭಾಷೆಯನ್ನು ಶಾಸ್ತ್ರೀಯಭಾಷಾ ಯೋಜನೆಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಮಿಳುನಾಡು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ, ಯಾವ ಯಾವ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಿ, ವರದಿಯನ್ನು ಪಡೆದು, ಅದರಂತೆ ನಮ್ಮ ರಾಜ್ಯದಲ್ಲೂ ಕ್ರಮ ಜರುಗಿಸಬೇಕು.
ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೇಳಿದರೆ, ತಕರಾರು ಎತ್ತಿದರೆ, ತಮಿಳುನಾಡುಹೊರಡಿಸಿರುವ ಆದೇಶ ಅಧಿಸೂಚನೆಗಳನ್ನುಲಗತ್ತಿಸಿ ಉತ್ತರ ನೀಡಬೇಕು.
ಅಂತರಂಗದ ಹಸಿವು ನುಡಿ ಪ್ರೇಮಕ್ಕೆ ಮೂಲವಾಗಲಿ
ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವುದು ಪ್ರತಿಯೊಬ್ಬರಲ್ಲೂ ಈ ಹೊತ್ತಿನ ಸಂದರ್ಭ ಸನ್ನಿವೇಶಗಳಲ್ಲಿನೆಲೆಗೊಂಡಿದೆಯೇ ಎಂಬ ಪ್ರಶ್ನೆ ಬಹಳ ಮುಖ್ಯ ಹಾಗೂ ಸಂಕೀರ್ಣವೆಂದು ನಾನು ಭಾವಿಸಿದ್ದೇನೆ. ಭಾಷೆ - ಪ್ರದೇಶಗಳ ದೃಷ್ಟಿಯಿಂದ ಅಸಮತೋಲನದ ಭೀತಿಯಲ್ಲೇ ನಾವು ಇಂದು ಬಾಳುತ್ತಿದ್ದೇವೆ. ಸಾಹಿತ್ಯ - ಸಂಸ್ಕೃತಿಯಬಾಧ್ಯತೆಯನ್ನುಪ್ರಧಾನವಾ
ರಭಸದ ಅಥವಾ ತರಾತುರಿಯ ಜೀವನ ಶೈಲಿಯೇ ಸಾಕು ಎಂದು ಅದರಲ್ಲೇಓಲಾಡುತ್ತಿರುವವರಿಗೆನಿಯಂತ್
ಹಿರಿಯರೂ ಸಹ ತಾವು ನಂಬಿಕೊಂಡು ಬಂದ ಪರಿಪಾಲಿಸಿಕೊಂಡು ಬಂದ ಹಳೆಯ ರೂಢಿಗತ ಪರಂಪರಾಗತ ಮೌಲ್ಯಗಳನ್ನು ಸರಿ ಎನ್ನುವುದಾಗಲಿಕಿರಿಯರು ಹಿರಿಯರ ಮಾತುಗಳಲ್ಲಿ ವ್ಯರ್ಥವೆಂದು ಅದರಲ್ಲಿ ದೋಷ ಹುಡುಕುವುದಾಗಲಿ ಆದರೆ ಅಲ್ಲಿ ಯಾವ ಸಕಾರಾತ್ಮಕ ಕ್ರಿಯೆ - ಪ್ರಕ್ರಿಯೆಗಳೂ ಆಗದೆ ಕೇವಲ ಶೂನ್ಯತೆಯನ್ನುಸೃಷ್ಟಿಸಿಕೊಳ್ಳುವದು
“ಹೊಸ ಚಿಗುರು ಹಳೆಬೇರುಕೂಡಿರಲು ಮರ ಸೊಬಗು” ಎಂಬ ಡಿ.ವಿ.ಜಿ.ಯವರಮಂಕುತಿಮ್ಮನಕಗ್ಗದ ಸಾಲು ಹೇಳುವಂತೆ ಸಾಂಘಿಕ ಹಾಗೂ ಒಗ್ಗೂಡುವಿಕೆಯ ಸಾಮರಸ್ಯ ಏರ್ಪಡಬೇಕಾಗಿದೆ. ಇದು ಪರಸ್ಪರ ಕೊಡುಕೊಳ್ಳುವಿಕೆಯ ಅಂತರ್ಗತ ಧ್ಯೇಯೋದ್ದೇಶಗಳಿಂದ ಆಗುತ್ತದೆ. ಸಕಾರಾತ್ಮಕವಾದ ಯೋಚನೆ, ಯೋಜನೆ, ಆಲೋಚನೆ, ಅಭಿರುಚಿಗಳವಿನಿಮಯಗಳಿಂದ ಈ ಬಗೆಯ ಅನುಸಂಧಾನ, ಅನುಸರಣ ಸಾಧ್ಯ.
“ಸುಲಿದಬಾಳೆಯಹಣ್ಣಿನಂದದಿ” ಎಂಬ ಮಹಾಲಿಂಗರಂಗನ ಮಾತನ್ನು ಎಷ್ಟರ ಮಟ್ಟಿಗೆ ಭಾಷಾಸ್ವರೂಪಗಳಲ್ಲಿಕನ್ನಡವನ್ನುಬಳಸು
ಕುವೆಂಪು, ಬೇಂದ್ರೆ, ಕಯ್ಯಾರಕಿಂಞ್ಞಣ್ಣ ರೈ, ಗೋವಿಂದ ಪೈ, ಆಲೂರುವೆಂಕಟರಾಯರು, ಅನಕೃ, ಮ. ರಾಮಮೂರ್ತಿ ಮುಂತಾದವರೆಲ್ಲ ಕೇವಲ ಕನ್ನಡವನ್ನು ಬರೆದು ಸುಮ್ಮನಾಗಿಬಿಡಲಿಲ್ಲ, ಬದಲಾಗಿ ಕನ್ನಡಕ್ಕಾಗಿ ಅದಮ್ಯ ನಿಷ್ಠೆಯನ್ನು ಬೆಳೆಸಿಕೊಂಡು ಕನ್ನಡವೆಂಬನುಡಿವೆಣ್ಗೆ ಸಹಕರಿಸಿದರು. “ಅಖಂಡ ಕರ್ಣಾಟಕ ಅಲ್ತೋ ರಾಜಕೀಯ ನಾಟಕ” ಎನ್ನುತ್ತಾರೆ. “ಖಡ್ಗಕ್ಕಿಂತ ಲೇಖನಿ ಹರಿತ” ಎಂದು ಕುವೆಂಪು ಕನ್ನಡವನ್ನು“ಭಾರತ ಜನನಿಯತನುಜಾತೆಯಾಗಿರಿಸಿ” ಅಭಿಮಾನ ಉಕ್ಕಿಸಿದ್ದಾರೆ.
“ಕನ್ನಡವುಕನ್ನಡವಕನ್ನಡಿಸುತಿರಬೇಕು” ಎಂಬ ಅಮೃತವಾಣಿ ವರಕವಿ ಬೇಂದ್ರೆಯವರದ್ದು. ಕೊಂಕಣಿ ಮನೆ ಮಾತಿನ ಕನ್ನಡದ ಮೊತ್ತ ಮೊದಲ ರಾಷ್ಟçಕವಿ ಗೋವಿಂದ ಪೈ ಅವರಂತೂಬಹುಭಾಷಾವಿಶಾರದರಾಗಿಯೂ ಸಹ “ತಾಯೆ ಬಾರ ಮೊಗವ ತೋರ ಕನ್ನಡಿಗರಮಾತೆಯೇ ಹರಸು ತಾಯೆಸುತರ ಕಾಯ ನಮ್ಮ ಜನ್ಮದಾತೆಯೇ’’ ಎಂದು ಕನ್ನಡ ಮಾತೆಯನ್ನುಹೃನ್ಮನಕ್ಕೆಇಳಿಸಿದರು.
“ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ ನೋವು ನಲಿವು ಸಮ್ಮಿಶ್ರದಲ್ಲಿಎದೆಯಾಯಿತದಕವಶ್ಯಒಂ
ಕನ್ನಡದ ಭವ್ಯ ಇತಿಹಾಸ, ಪರಂಪರೆ ಶತಶತಮಾನಗಳಹಿನ್ನೆಲೆಗಳಿಂದ ಅದರ ಸಂರಚನೆವಿಧಾನಗಳನ್ನುಅನುಲಕ್ಷಿಸುವ ಕ್ರಮ ನಿಜಕ್ಕೂ ಸರಿಯಾದ ಕ್ರಮವೇ ಹೌದು, ಆದರೆ ಅಷ್ಟಕ್ಕೇ ಸೀಮಿತವಾದರೆ ಸಾವಿರಾರು ವರ್ಷಗಳಿಂದ ಬಾಳುತ್ತಿರುವ ಕನ್ನಡ ಮತ್ತು ಕನ್ನಡಿಗರವಿಕಾಸಶೀಲತೆ ಸರಿಯಾದ ಹಂತದಲ್ಲಿ ವಿನ್ಯಾಸಗೊಳ್ಳುವುದಿಲ್ಲ. ಕ್ರಮಬದ್ಧವಾದ ರೂಪುರೇಷೆ ಹಾಗೂ ಅದಕ್ಕೆ ತಕ್ಕಂತೆ ಆಗಬೇಕೆಂಬಅವಿರತವಾದ ಹೋರಾಟದ ಅನಿವಾರ್ಯತೆ ಇದೆ. “ಕನ್ನಡವನ್ನುಶಾಸ್ತ್ರೀಯ ಭಾಷೆ” ಎಂದು ಘೋಷಿಸಿ ಹಲವು ವರ್ಷಗಳೇ ಆಗಿದ್ದರೂ ಕನ್ನಡಕ್ಕೆಆಗಬೇಕಾದ ಕಾರ್ಯಗಳು ಆ ಗತಿಯಲ್ಲೇಸಾಗಿದೆ. ಭ್ರಮಾಧೀನ ಸ್ಥಿತಿಯಲ್ಲಿ ನಲುಗಿ ಕೊರಗಿ ಕರಗುತ್ತಿರುವವರಿಗೆಲ್ಲಭ್ರಮನಿ
ಆದ್ದರಿಂದಲೇ “ವಿಶ್ವ ಜೀವನವೊಂದುಪಾರವಿಲ್ಲದ ಸಿಂಧು” ಎಂಬ ನುಡಿಮಂತ್ರವನ್ನು ಕುವೆಂಪು ಹೇಳಿದ್ದರಲ್ಲಿ ಸತ್ಯ ತಥ್ಯ ಎರಡೂ ಇದೆ. ಈ ದೃಷ್ಟಿಯಲ್ಲಿ ಆಧುನಿಕತೆಯನ್ನುಸೈರತೆ, ಸ್ವೇಚ್ಛೆಗೆ ಬಳಸಿಕೊಳ್ಳದೆ ಶುದ್ಧವಾಗಿವಿನಿಯೋಗಿಸಿಕೊಳ್ಳುವುದೇ
ಕನ್ನಡವನ್ನು ಎದೆಯ ಸಂಪ್ರೀತಿಯಿಂದಕಲಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಬೇಕಾಗಿದೆ. ಅಂತರಂಗದಲ್ಲಿ ಆ ಹಸಿವು ಮೂಡಿಕೊಳ್ಳದೆರೂಢಿಸಿಕೊಳ್ಳದೆ ಹೋದರೆ ಕನ್ನಡಿಗರಾಗಿ ಕರ್ನಾಟಕದಲ್ಲಿ ನೆಲೆಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂಇರದು. ಪರಭಾಷಿಕರು, ಅನ್ಯಸಂಸ್ಕೃತಿಯ ನಿರಂತರವಾಗಿ ಆಕ್ರಮಿಸಿಕೊಳ್ಳುವಿಕೆಯ ನಡುವೆ ಕನ್ನಡ ಸಂಸ್ಕೃತಿಯನ್ನುಉಳಿಸಿಕೊಳ್ಳಬೇಕಾದ ಗಣನೀಯ ಪ್ರಮಾಣದ ಎಚ್ಚರದನಡೆಯ ಆದ್ಯತೆ ಇದೆ. ಸಹನೆ - ಸಂಯಮದರಹದಾರಿಗಳಿಂದಲೇ ಇದನ್ನು ಸಾಧಿಸಬೇಕಾಗಿದೆ. ವಿಜ್ಞಾನ - ತಂತ್ರಜ್ಞಾನ ಇವುಗಳನ್ನು ನಮ್ಮ ಜನ ಸ್ವೀಕರಿಸುತ್ತಿರುವುದು ಬಹಳ ವಿಶೇಷ ಹಾಗೂ ಸಂತಸದ ಸಂಗತಿ. ಆದರೆ ಹಾಗೆ ಒದಗಿ ಬರುವ ವಿಜ್ಞಾನ ತಂತ್ರಜ್ಞಾನದ ಕುರಿತಾದ ಕೃತಿಗಳು ಕನ್ನಡಕ್ಕೆ ಬರುವಂತೆ ಸುಲಭ. ಕನ್ನಡದಲ್ಲಿ ತಾಂತ್ರಿಕ ಪದಗಳೂ ಅರ್ಥವಾಗುವಂತೆ ಆದಾಗಕನ್ನಡಕ್ಕೆ ಕನ್ನಡ ಜಗತ್ತಿಗೆ ನಿಜವಾದ ಕೊಡುಗೆಯಾಗುತ್ತದೆ. ವಿಜ್ಞಾನ - ತಂತ್ರಜ್ಞಾನ ಹಾಗೂ ಅದರ ಪರಿಭಾಷೆಗಳನ್ನು ಕನ್ನಡದಲ್ಲಿ ಬಳಸಲೂಸಾದ್ಯವಿದೆ, ಬರೆಯಲೂ ಸಾಧ್ಯವಿದೆ ಎನ್ನುವುದಕ್ಕೆ ರಾಮಕೃಷ್ಣರಾವ್, ಟಿ.ಆರ್. ಅನಂತರಾಮು, ಜೆ.ಆರ್. ಲಕ್ಷö್ಮಣರಾವ್ಎಚ್.ಎ. ಪುರುಷೋತ್ತಮರಾವ್ ಇವರು ಕನ್ನಡದಲ್ಲಿ ವಿಜ್ಞಾನದ ಸಾಹಿತ್ಯವನ್ನು ತಲುಪಿಸಲು ಮಾಡಿದ ಕೃಷಿ ಖುಷಿಯ ವಿಚಾರ. ಜೊತೆಗೆ ವಿಜ್ಞಾನದ ಭಾಷೆ ಒಣ ಭಾಷೆ ಅಲ್ಲ, ಶುಷ್ಕವೂ ಅಲ್ಲ, ಕನ್ನಡ ಮಾಧ್ಯಮದಲ್ಲೇ ಓದಿ ಅತ್ಯುತ್ತಮ ವಿಜ್ಞಾನಿಗಳೆನಿಸಿದ ಪ್ರೊ. ಯು.ಆರ್. ರಾವ್ ಹಾಗೂ ಸಿ.ಎನ್.ಆರ್. ರಾವ್ ಅವರುಗಳ ಸಾಧನೆ ನಮಗೆ ಮಾದರಿಯಾಗಬೇಕು.
ಇಂದಿನ ಸಾಹಿತ್ಯದ ಬಗ್ಗೆ ಕೆಲವು ಅಪಸ್ವರಗಳಿವೆ. ಆದರೆ ಕವಿಯಾದವನಿಗೆಸ್ವಾತಂತ್ರö್ಯ, ಸ್ವತಂತ್ರ ಎರಡೂ ಇದ್ದೇ ಇರುತ್ತದೆ. ಅದು ಅವನ ಪ್ರಥಮ ಹಕ್ಕು ಸಹಾ ಹೌದು. ಭಾರತೀಯ ಕಾವ್ಯ ಮೀಮಾಂಸೆಯಲ್ಲೇ ಇದಕ್ಕೆ ನೇರ ಉದಾಹರಣೆಯಿದೆ. ಕವಿ ಕಾವ್ಯ ಭೂಮಿಕೆಯನ್ನು ಕುರಿತು ಅಂದಿನ ಪ್ರಸಿದ್ಧ ಲಾಕ್ಷಣಿಕನಾದಆನಂದವರ್ಧನನು ತನ್ನ ಧ್ವನ್ಯಾಲೋಕ ಕೃತಿಯಲ್ಲಿ ``ತನ್ನ ಅಪಾರವುಅಗಾಧವೂ ಆದ ಕಾವ್ಯ ಜಗತ್ತಿನಲ್ಲಿ ಕವಿಯೇ ಸಾರ್ವಭೌಮ. ಅವನ ಕಾವ್ಯಕ್ಕೆ ಅವನೇ ಸೃಷ್ಟಿಕರ್ತ, ಬ್ರಹ್ಮ ! ತನಗೆ ಹೇಗೇ ಬೇಕೋ ಹಾಗೆ ಅವನು ತನ್ನ ಕಾವ್ಯದಜಗತ್ತನ್ನುಬದಲಾಯಿಸಿಕೊಳ್ಳಲು ಅವನಿಗೆ ಸ್ವಾತಂತ್ರö್ಯಇದ್ದೆ ಇದೆ’’ ಎಂದು ಹೇಳಿದ್ದಾನೆ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ಕುವೆಂಪು ಅವರ ಮಾತಿನೊಳಗಿನ ಸತ್ವ ದರ್ಶನವೂ ಹೀಗೆ ಪ್ರಮುಖವಾಗುತ್ತದೆ. ಸಹೃದಯ ಕವಿ ಇವುಗಳ ಭಾವ ಪ್ರಪಂಚ ಇವತ್ತು ವ್ಯಾಪಕವಾಗಿಆಗುತ್ತಿಲ್ಲ ಮತ್ತು ಆ ಭಾವ ವಲಯಗಳನ್ನು ಮುಟ್ಟಲು ಇಂದಿನ ಜನತೆ ಸ್ಪಂದಿಸುತಿಲ್ಲವೆಂಬ ಕೂಗು ಇರುವುದೂ ನಿಜ; ಆದರೆ ಸಮಾಜವುವಾಹಿನಿಯಂತೆಹರಿಯವಗುಣಧರ್ಮದ್
ಹೊಸತರಲ್ಲೂಹಳತುಂಟು, ಹಳತರಲ್ಲೂಹೊಸದುಂಟು ಎಂಬುದೇ ಸಾಹಿತ್ಯದ ಆಮೂಲಾಗ್ರವಾದಸತ್ಯದೀಪಿಕೆ. ಕನ್ನಡ ಭಾಷೆಗೆ ನೂರಾರು ಸಾಹಿತಿಗಳನುಡಿಮುಡಿಪು, ನುಡಿ ಕಾಣಿಕೆ ಅನಿರ್ಬಂಧಿತವಾಗಿ ಸಾಗುತ್ತಾ ಮಾಗುತ್ತಾ ಬಂದಿದೆ. ಆದರೆ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೇ? ಎಂಬ ಡಾ. ಜಿ.ಎಸ್. ಶಿವರುದ್ರಪ್ಪನವರ ಮಾತು ಬಹಳ ಔಚಿತ್ಯ ಪೂರ್ಣ. ಈ ದಿಸೆಯಲ್ಲಿ ಕನ್ನಡ ನಾಡು ಹಾಗೂ ನುಡಿಯ ಜಗತ್ತು ಇನ್ನಷ್ಟು ತನ್ನ ಹಾಸು ಬೀಸುಗಳನ್ನುವಿಸ್ತರಿಸಿಕೊಳ್ಳಬೇಕಾಗಿ
ಬಹುಭಾಷಿಕ ಹಾಗೂ ಬಹುಸಾಂಸ್ಕೃತಿಕಪರಿಸರಗಳಲ್ಲಿ ಬದುಕುವ ನಮಗೆ ಮುಖ್ಯವಾಗಿ ಯಾವುದೇ ಅತಿರೇಕಗಳಿಲ್ಲದೆ ಹೋದಾಗ ಈ ಬಗೆಯ ಸಾಮರಸ್ಯ ಹಾಗೂ ಸೌಹಾರ್ದ ಬಂಧ ಬಾಂಧವ್ಯಗಳುಏಕತ್ರಗೊಳ್ಳುತ್ತವೆ. ನಿರಭಿಮಾನ, ದುರಭಿಮಾನ ಹಾಗೂ ಅಂಧಾಭಿಮಾನ ಎಲ್ಲ ರೀತಿಯಿಂದಲೂ ಅಪಾಯ ಹಾಗೂ ದುರಂತಕ್ಕೆಕಾರಣವಾಗುತ್ತವೆ. ಭಾಷೆ, ನೆಲ, ಜಲ ಈ ಎಲ್ಲ ಮಜಲುಗಳಲ್ಲೂ ಈ ರೀತಿಯ ವಿಪರೀತವಾದಗ್ರಹಿಕೆಗಳು ಮಿತಿಮೀರಿದ ಉತ್ಪೆçÃಕ್ಷಾಪೂರಿತನಿಲುವುಗಳಿಂದ ನಾವು ಹೊರಬಂದು ಇದರಿಂದ ಹೊರತಾದ ಹೊಸ ಜಗತ್ತನ್ನುಕಾಣಬೇಕಿದೆ ಮತ್ತು ಅದನ್ನು ನಮ್ಮ ಮುಂದಿನ ಪೀಳಿಗೆಗಳಿಗೆಕಾಯ್ದಿರಿಸಿಜತನವಾಗಿಕಾ
“ಬಯಕೆ ಬರುವುದರಕಣ್ಸನ್ನೇಕಾಣಾ” ಎಂಬ ಮಧುರಚನ್ನರಮಾತಿನಂತೆ ಆಸೆ-ಆಮಿಷಗಳಿಗೆದಾಸರಾಗಿ ವ್ಯಾವಹಾರಿಕ ದೃಷ್ಟಿಗಾಗಿ ಕನ್ನಡ ಎಂದಾದಲ್ಲಿ ಅದರಿಂದ ಯಾವುದೇ ಫಲಿತಗಳಾಗಲಿಪ್ರಯೋಜನಗಳಾಗಲಿಇರುವುದಿ
ಕನ್ನಡದ ನೆಲ ಜಾನಪದ ಗೇಯತೆಯನ್ನುಮೈಗೂಡಿಸಿಕೊಂಡುಹುಲುಸಾ
``ನೂಲಲ್ಯಾಕ ಚೆನ್ನಿ ನೂಲಲ್ಯಾಕ ಚೆನ್ನಿ’’ ಎಂಬ ಗಂಡನ ಮೃದುವಾದ ಹುಸಿ ಗದರುವಿಕೆಮುನಿಸಿಗೆ ಹೆಂಡತಿಯ ಮುಗ್ಧವಾದ ಉತ್ತರ “ನಂಗೆ ಬರೋದಿಲ್ಲೋ ಜಾಣ, ನಂಗೆ ಬರೋದಿಲ್ಲೋ ಜಾಣ” ಎಂದು. ಅದೇ ರೀತಿ ಬಡತನ, ಹಸಿವು, ಸಂಕಟ, ದೈನಿಕ ಬದುಕು ನಡೆಸುವಾಗಿನ ತಲ್ಲಣ- ತವಕಗಳುಕಾಡಿರುವುದು ಉಂಟು. ಆದರೆ ಹಿತಮಿತವಾದಬದುಕಿನಲ್ಲಿ ಅವರಿಗೆ ಅದೆಲ್ಲ ಗೌಣ.
ನೆಲ್ಲಕ್ಕಿ ಬೋನವನುಉಣಲೊಲ್ಲ ನನ್ನ ನಲ್ಲ
ಏಕೊಲ್ಲ? ಇಲ್ಲದುದಕೆಒಲ್ಲ !
ಅಂದರೆ ಒಳ್ಳೆಯ, ಉತ್ತಮ ಗುಣಮಟ್ಟದ ಅಕ್ಕಿಯಿಂದ ಅನ್ನ ತಯಾರಿಸಿಕೊಂಡು ಉಣ್ಣುವ ಆಸೆ ಇರುವುದು ಸಹಜ ಆದರೆ ಆ ಹಂಬಲ ಈಡೇರುವ ಸಾಧ್ಯತೆ ಇಲ್ಲ, ಏಕೆಂದರೆ ಕಾರಣ ಸುದೀರ್ಘವಾದ ಬಡತನ. ಆ ಸಾಧ್ಯತೆ ಇಲ್ಲದ್ದರಿಂದ ಉತ್ತಮ ಆಹಾರ ಸಿಗದಿದ್ದರಿಂದಉಣ್ಣಲುಬಯಸದಂಥ ನುಡಿ ಇದು.
``ನಿಂಬಿಯಬನಾದಮ್ಯಾಗಚಂದ್ರಾಮಚಂಡಾಡಿ
ಹಾಗೆಯೇ “ಭಾಗ್ಯದ ಬಳೆಗಾರ ತವರಿಗೆ ಹೋಗಿ ಬಾ” ಎಂದು ನಿರುಪಾದಿಕವಾಗಿ ಆಶಿಸಿ ಒಳಿತಿನಹಾರೈಕೆಯನ್ನೇಬಯಸುತ್ತದೆ. ವ್ಯಷ್ಟಿ ಸಮಾಜವಲ್ಲದ ಸಮಷ್ಟಿ ಸಮಾಜದ ಹಿತಚಿಂತನೆಯಹೂರಣವಾದಜಾನಪದೀಯ ಜಗತ್ತು ಕನ್ನಡ ನೆಲದ ತವನಿಧಿ ಹಾಗೂ ಶಾಶ್ವತವಾದ ಆಸ್ತಿ. ವೀರಗಾಸೆ, ಜಗ್ಗಲಿಗೆ ಮೇಳ, ಕರಗ, ಚೌಡಿಕಿಪದ ನಾನಾ ಬಗೆಯ ಉತ್ಸವಗಳುಜಾತ್ರೆಗಳು ಎಲ್ಲವೂ ಜಾನಪದೀಯಸತ್ವಗಳಿಂದ ಆಕಾರ ಪಡೆದುಕೊಂಡು ವ್ಯವಸ್ಥಿತವಾಗಿ ರೂಪು ತಾಳಿದ ಮಹೋನ್ನತ ಅಂಶಗಳು.
“ಚೆಲುವಯ್ಯಚೆಲುವೋತಾನಿತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೆ” ಎಂಬ ಹಾಡಾಗಲಿ, “ಚನ್ನಪ್ಪಚನ್ನೆಗೌಡ ಕುಂಬಾರ ಮಾಡಿದ ಕೊಡನವ್ವ” ಎಂಬ ಜಾನಪದ ಗೀತೆಗಳಾಗಲಿ ನೂರಕ್ಕೆ ನೂರರಷ್ಟು ಗುಂಪಿನಲ್ಲಿ ಭಾಗಿಯಾಗಿ ಅವರ ಭಾವವಾಗಿ ಸಂತೃಪ್ತ ಆನಂದವನ್ನುಸವಿದು ಇತರರಿಗೂ ಸಮಸಮವಾಗಿಹಂಚುವ ಅದ್ಭುತ ರಸಘಟ್ಟ.
ಗ್ರಾಮ್ಯ ಪರಿಸರ ಹಾಗೂ ಹಳ್ಳಿಗಳ ಬಗೆಗೆ ಏನೇ ಅನಾದರಗಳಿದ್ದರೂ ದಿವ್ಯ ನಿರ್ಲಕ್ಷö್ಯಗಳೇ ಇದ್ದರೂ ಜಾನಪದ ಸಂಕುಲ ನೀಡಿದ ಅನರ್ಘ್ಯ ಸಾಹಿತ್ಯ ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚೌಕಟ್ಟು ಅಸಾಧಾರಣವಾದುದು. ಇಂತಹ ಅತ್ಯಮೋಘವಾದ ಜಾನಪದ ಸಮೃದ್ಧತೆಯತಿಳಿವನ್ನುಮೂಡಿಸುವ ಹಾಗೂ ಆಳವಾಗಿ ನಾಗರಿಕ ಸಮುದಾಯ ಮತ್ತು ಸುರಕ್ಷಿತ ಸಮಾಜಗಳಿಗೆ ತಲುಪಿಸುವ ಕಾರ್ಯ ಹೆಚ್ಚು ಹೆಚ್ಚಾಗಿ ಆಗಬೇಕಿದೆ. “ತಿಟ್ಹತ್ತಿ ತಿರುಗಿ ತವರು ಮನೆಯನ್ನು ನೋಡುತ್ತಾ ನೋಡುತ್ತಾಕಣ್ತುಂಬಿಕೊಳ್ಳುವ ಹೆಣ್ಣು ಮಗಳು ಕೇವಲ ಭಾವುಕತೆಯತೀವ್ರತೆಯಲ್ಲೇ ಮುಳುಗಿ ದುಃಖಿಸುವುದಿಲ್ಲ. ಗರಿಕೆಯಕುಡಿಹಾಂಗ ತವರು ಮನೆ ರಸಬಳ್ಳಿಯಾಗಿಹಬ್ಬಲಿ ಎಂದು ನಿರ್ಮಲ ಹೃದಯದಿಂದಹರಸಿಹಾರೈಸುತ್ತಾಳೆ. ಎದೆಯ ಗೂಡಿನ ತುಂಬಾ
ಅವಳಿಗೆ ತಾಯಿ ಮನೆಯ ಔನ್ನತ್ಯವೇ ಪ್ರಧಾನ.
ಕೂಸು ಕಂದಯ್ಯಒಳಹೊರಗಆಡಿದರ ಬೀಸಣಿಗೆ ಗಾಳಿ ಸುಳಿದು ಬಡತನವೆಲ್ಲಬಯಲಾದಂತೆ, ಹೊರಟು ಹೋದಂತೆ ಅಳುನುಂಗಿ ಮಗುವನ್ನು ಮಡಿಲ ಸಂತೋಷ ವ್ಯಾತ್ಸಲ್ಯದಜೀವವಾಗಿಕಂಡಂಥ ತಾಯ್ತನ ಜಾನಪದ ಹೆಣ್ಣು ಮಗಳದ್ದು. ಇಂಥ ಸಾಂಸಾರಿಕ ಬಾಂಧವ್ಯಗಳ ಬಗ್ಗೆ ಕಾರ್ಪೋರೇಟ್ ಮತ್ತು ಬಹುರಾಷ್ಟ್ರೀಯಕಂಪನಿಗಳಸೆರಗಿನಲ್ಲಿ ಬಾಳುತ್ತಿರುವ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ತಿಳಿಸುವ ಕೆಲಸ ಆಗಬೇಕಿದೆ. ಸಾಮಾಜಿಕ ಒಳ ರಚನೆಯ ಪದರುಗಳಲ್ಲಿ ಅವಿಭಕ್ತ ಕುಟುಂಬದ ಚಹರೆಗಳು ಬಹುತೇಕ ಕಣ್ಮರೆಯಾಗಿ ಸಾಮೂಹಿಕ ಸಂಸಾರ, ಬಾಳುವೆಯ ಬದಲು ವಿಭಕ್ತ ಪರಿತ್ಯಕ್ತ ಕುಟುಂಬಗಳೇ ಕಂಡು ಬರುತ್ತಿರುವಾಗಮುಂಪೀಳಿಗೆಗೆ ಇಂತಹ ಮಣ್ಣಿನ ಸಂವೇದನೆಯ ವಾಂಛಲ್ಯ, ಅಕ್ಕರೆ, ನೋವುಗಳನ್ನೆದುರಿಸಿ ಬಾಳುವ ಜಾನಪದೀಯರಸತ್ಪರಂಪರೆಯನ್ನು ಒಳಗು ಮಾಡಲೇಬೇಕಾಗಿದೆ.
ಪಠ್ಯದಓದಿನ ಮೂಲಕವೇ ಜ್ಞಾನ, ಅಂಕೆಗಳಿಕೆಯೊಂದೇ ಮಾನದಂಡ ಎಂಬ ಭ್ರಮೆ ಹಾಗೂ ಕನ್ನಡ ಶಾಲೆಗಳಕಡೆಗಣನೆ, ನಿರುತ್ತೇಜಕ ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತಬೇಕಾಗಿರುವುದು ಸಹಾ ಇಂದಿನ ಜನರ, ಸರ್ಕಾರ ಹಾಗೂ ಎಲ್ಲರ ಪ್ರಮುಖ ಕೂಗು ಆಗಬೇಕಿದೆ. ಸರ್ಕಾರಿ ಶಾಲಾ ಕಾಲೇಜುಗಳ ದುಸ್ಥಿತಿ, ಪಾಳು ಬಿದ್ದ ಶಾಲೆ. ಸಮರ್ಪಕವಾಗಿ ಆಗದ ಪಾಠ ಪ್ರವಚನಗಳು, ದೊಡ್ಡಿಯಂತೆ ಆದ ಸರ್ಕಾರಿ ಶಾಲಾ ಕೊಠಡಿಗಳ ಈ ಅಧ್ವಾನದ ಸ್ಥಿತಿಯಿಂದ ಹೊರಬರಬೇಕಾಗಿದೆ. ಆರ್ಥಿಕ ಪುನಶ್ಚೇತನ ಮತ್ತು ಅನುದಾನದ ಯಶಸ್ವಿ ಬಳಕೆಯೂ ಸಹಾ ಇಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾಗಿದೆ.
ಭೂತ, ಭವಿಷ್ಯತ್, ವರ್ತಮಾನ, ನಿನ್ನೆ, ಇಂದು, ನಾಳೆ ಎಲ್ಲದರ ಒಟ್ಟು ಸಂಗಮವಾದಾಗ ಕನ್ನಡ ನಾಡು ನುಡಿಯ ಜಗತ್ತಿಗೆ ಹೊಸತನ ಹಾಗೂ ವಿಶಾಲ ಭೂಮಿಕೆ ಪ್ರಾಪ್ತವಾಗುತ್ತದೆ. ಆಗು ಹೋಗುಗಳಮನ್ವಂತರದಘಟ್ಟಗಳನ್ನುಗಮನಿಸು
“ಕನ್ನಡ ಎಂದರೆ ಬರೀ ನುಡಿಯಲ್ಲಹಿರಿದಿದೆಅದರರ್ಥ” ಎಂಬ ಕವಿವಾಣಿಯಂತೆ ನಾವು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವಕನ್ನಡಿಗರಾಗಬಾರದು. ಕನ್ನಡ ನೆಲದಲ್ಲಿ ಹರಡಿಕೊಂಡಿರುವ ಪರಭಾಷಿಕರೂ ಸಹ ಕನ್ನಡವನ್ನು ಕಲಿತು ಆಡುವಾಗನಾಡಗೀತೆ, ರೈತಗೀತೆಯನ್ನುಗುನುಗುವಾಗ ಆಗುವ ಆನಂದವೇ ಬೇರೆ. ಈ ಹಿನ್ನೆಲೆಯಲ್ಲಿ ಜನಸ್ತೋಮದ ನಡುವೆ ಕನ್ನಡವನ್ನು ಕಲಿಸುವ ಪ್ರಕ್ರಿಯೆಗಳು ಸದಾ ವಿಸ್ತಾರಗೊಳ್ಳಬೇಕಾಗಿದೆ.
ಕನ್ನಡಕ್ಕೆದೊರಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳ ಪೈಕಿ ಬೇಂದ್ರೆಯವರ ಮಾತೃಭಾಷೆ ಮರಾಠಿ, ಮಾಸ್ತಿ ವೆಂಕಟೇಶ ಅಯ್ಯಂಗಾರರ ಮನೆಮಾತು ತಮಿಳು, ಕಾರ್ನಾಡರದ್ದು ಕೊಂಕಣಿ ಆದರೆ ಅವರ ಸೇವೆ ಸಾಹಿತ್ಯ ಕೃಷಿ ಕನ್ನಡಕ್ಕೆ ಅವರು ನೀಡಿದ ಕೊಡುಗೆ ಬಹಳ ವಿಭಿನ್ನ ಹಾಗೂ ವೈಶಿಷ್ಟö್ಯಪೂರ್ಣವಾದವುಗಳಾಗಿವೆ.
ಅದರಂತೆ ಮಲೆಯಾಳಿ ಮಾತೃಭಾಷಿಕರಾಗಿಕೇರಳದಲ್ಲಿಜನಿಸಿ ಅಲ್ಲೇ ಬಹುಕಾಲವಿದ್ದು ನಂತರ ಮೈಸೂರಿಗೆ ಬಂದು ಕನ್ನಡವನುಕಲಿತಿದ್ದಷ್ಟೇ ಅಲ್ಲದೆ ಪಾತಾಳದಲ್ಲಿ ಪಾಪಚ್ಚಿ, ಅನರ್ಥಕೋಶ ಹೀಗೆ ಅಪೂರ್ವ ಕೃತಿಗಳನ್ನು ನೀಡಿದ ನಾ. ಕಸ್ತೂರಿಯವರ ಕನ್ನಡ ಭಾಷೆಯ ಕನ್ನಡ ಸಾಹಿತ್ಯದ ಸೃಜನಶೀಲತೆಗೆ ಮಾರು ಹೋಗದಿರಲು ಸಾಧ್ಯವೇ? ವಿದೇಶಿಯೊಬ್ಬರುಹಿಂದೆಂದು ಕಾಣದ ನಿಘಂಟು ನೀಡಿ ಕನ್ನಡ - ಇಂಗ್ಲಿಷ ನಿಘಂಟು ಲೋಕಕ್ಕೆಮೇರುವಾಗಿ ಕಂಡ ಫರ್ಡಿನೆಂಡ್ಕಿಟೆಲ್, ಭಾಷೆ ಶಾಸನಗಳಿಗೆ ಜೀವ ತೇಯ್ದಬಿ.ಎಲ್. ರೈಸ್, ಇ.ಪಿ. ರೈಸ್, ಮೊಗ್ಲಿಂಗ್ಇವರೆಲ್ಲರನ್ನೂಕನ್ನಡಿ
ಅಫ್ಘನ್ಮೂಲದವರಾಗಿ ಉರ್ದು ಭಾಷಿಕರಾಗಿ ನಾಡು ನುಡಿಗೆ ಜಾನಪದ ಬುಡಕಟ್ಟು ಚಿತ್ರರಂಗ, ಸ್ವಾತಂತ್ರö್ಯ ಹೋರಾಟ ಹೀಗೆ ಬಹುಮುಖಿಯಾಗಿ ದುಡಿದು ದುಡಿದು ಜೀವ ತೇಯ್ದಎಸ್.ಕೆ. ಕರೀಂಖಾನರ ಸೇವೆ ಸೂರ್ಯ ಚಂದ್ರರಿರುವ ತನಕ ಶಾಶ್ವತವಾದುದು. ಇಂಥವರನುಡಿಕಾಣಿಕೆಯಕೈಂರ್ಯ ಕನ್ನಡದ ಬೇರುಗಳನ್ನು ಆಳವಾಗಿ ಸುಸ್ಥಿರಗೊಳಿಸಿವೆ.
ಕನ್ನಡ ಭಾಷಾಶಿಕ್ಷಕರುಉಪನ್ಯಾಸಕರುಎದುರಿಸು
ಬೋಧಕ ವರ್ಗದ ವಿಶೇಷ ಪಾತ್ರವಿದೆ.
ಪಂಪ, ರನ್ನ, ಪೊನ್ನ, ಅಸಗ, ದುರ್ವಿನೀತ ಇಂಥ ಕವಿಗಳಕಾವ್ಯಗಳ ಬಗ್ಗೆ ಇರುವ ವಿದ್ಯಾರ್ಥಿಗಳು ಹಾಗೂ ಅವರ ಬಗ್ಗೆ ವಿಶದವಾಗಿ ವಿವರಿಸದ ಸ್ಥಿತಿಯಿಂದ ವಿದ್ಯಾರ್ಥಿಗಳಿಗೆ ಈ ಕವಿಗಳ ಬಗ್ಗೆ ವಿಶೇಷ ಆಸಕ್ತಿ
ಮೂಡುತ್ತಿಲ್ಲ. ಶಾಸನಗಳು ಗ್ರಂಥ ಸಂಪಾದನಾಶಾಸ್ತç ಇವುಗಳು ತೆರೆಮರೆಗೆಸರಿದುಬಿಡುತ್ತಿವೆ.
ಪಠ್ಯದಓದಿಗಾಗಿ ಮಾತ್ರ ಸೀಮಿತಗೊಳಿಸುವಹಳೆಗನ್ನಡದ ಪದ್ಯ ಗದ್ಯಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಬೇಕಷ್ಟು ಮಾತ್ರ ತಿಳಿದು ಕೊಂಡರೆ ಸಾಲದು. ಈ ದೆಸೆಯಲ್ಲಿಆಮೂಲಾಗ್ರವಾದಬೋಧನಾಕ್
ಈ ಅಪಾಯವನ್ನು ತಪ್ಪಿಸಲು ಇರುವ ಅನೇಕ ಪರ್ಯಾಲೋಚನೆ, ಮಾರ್ಗೋಪಾಯಗಳನ್ನು ಕುರಿತು ನಾವು ಬಹಳ ಯೋಜನಾಬದ್ದವಾಗಿವರ್ತಿಸಬೇಕಾಗಿದೆ. ಪಠ್ಯ ಲಯ, ಬಂಧಗಳಿಗೆ ಅನುಗುಣವಾಗಿ ಛಂದಸ್ಸು ಪ್ರಸ್ತಾರ ಕ್ರಮ ಪದ ವಿಂಗಡಣೆಯ ಬಗ್ಗೆ ಆಸಕ್ತಿ ಮೂಡಿಸದೆ ಹೋದರೆ ವಿದ್ಯಾರ್ಥಿಗಳಿಗೆ ಅರ್ಥವಾಗದೆ“ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತಾಯ್ತು” ಎಂಬಂತೆ ಆಗುತ್ತದೆ.
ಕಲಿಸುವ ಈ ವಿಧಾನಗಳಲ್ಲಿಉತ್ಸಾಹವಿರುವಬೋಧಕರು ಮತ್ತು ಅಷ್ಟೇ ಆಸಕ್ತಿ, ಆಸೆ ಮುತುವರ್ಜಿಗಳಿಂದಕಲಿಯವ ವಿದ್ಯಾರ್ಥಿ ಸಮೂಹ ಇಂದು ಸಿಗದಿರಬಹುದು. ಆದರೆ ಮುಂದೊಂದು ದಿನ ಛಂದಸ್ಸು, ವ್ಯಾಕರಣ, ಪದ್ಯ ಪ್ರಕಾರಗಳ ಬಗ್ಗೆ ವಿಶ್ವಾಸ ನಂಬಿಕೆಯಿಡುವ ವಿದ್ಯಾರ್ಥಿ ಜಗತ್ತು ಸೃಷ್ಟಿಯಾಗಬಹುದುದೆಂಬ ಖಚಿತವಾದ ಭರವಸೆ ಹಾಗೂ ಆಶಾವಾದಿತನ ಇಲ್ಲಿ ಮುಖ್ಯ.
ಇಡೀ ವಿಶ್ವವನ್ನೇನಡುಗಿಸಿದ ಲಕ್ಷಾಂತರ ಜೀವ - ಜೀವನಗಳನ್ನು ಬಲಿ ತೆಗೆದುಕೊಂಡ ಕೋವಿಡ್ ವೈರಸ್ ಶೈಕ್ಷಣಿಕ ಬದುಕಿಗೂಮಾರಣಾಂತಿಕ ಪೆಟ್ಟು ನೀಡಿರುವುದು ಸತ್ಯ. ಏಕೆಂದರೆ ಸಾರ್ವಜನಿಕರ ಬದುಕನ್ನು ಖಾಲಿ ಮಾಡಿದ ಪ್ರಕ್ಷÄಬ್ಧುತೆಯಲ್ಲಿನರಳುವಂತೆ ಮಾಡಿದ ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಕರುಆನ್ಲೈನ್ತರಗತಿಗಳ ಮೂಲಕ ಪಾಠ ಪ್ರವಚನಗಳನ್ನು ಕಲಿಯುವ, ಕೇಳಿಸಿಕೊಳ್ಳುವ ಅನಿವಾರ್ಯ ಸನ್ನಿವೇಶ ಹುಟ್ಟಿಕೊಂಡಿತು.
ಇದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂಬುದು ಪ್ರಶ್ನೆಯಾಗದೆಅನಿವಾರ್ಯತೆಯಲ್ಲಿ ಆದ ಈ ಸಂಗತಿಗಳ ನಡುವೆ ಕನ್ನಡ ನುಡಿ ಕಲಿಕೆ ವಿದ್ಯಾರ್ಥಿಗಳ ಗೈರು ಹಾಜರು, ಮೊಬೈಲ್ ನೆಟ್ವರ್ಕ್ ಸಮಸ್ಯೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಆದ ತೊಂದರೆಗಳುಶೈಕ್ಷಣಿಕವಾಗಿಯೂ ಹೊಡೆತ
ನೀಡಿತ್ತು.
ಹೀಗೆ ಆದ ಧಕ್ಕೆಯನ್ನುಸರಿಹೊಂದಿಸಿಕೊಳ್ಳುವನಿ
ಕನ್ನಡವನ್ನು ಕಲಿಸುವ ವಿಧಾನ ಬೇರೆ ಬೇರೆ ರೂಪ ಸ್ವರೂಪಗಳನ್ನು ಹೊತ್ತು ಸಾಗಲೇಬೇಕಾಗಿದೆ. ವಿದ್ಯಾರ್ಥಿಗಳ ಮನೋಧರ್ಮ ವಯೋಮಾನದ ಲೆಕ್ಕಾಚಾರಗಳಹಿನ್ನೆಲೆಯಿಂದಲೂ ಕನ್ನಡದ ಕಲಿಕೆ ಹೆಚ್ಚು ಮಹತ್ವದ್ದಾಗಿದೆ. ಕೋವಿಡ್ನಿಂದ ಹೊರ ಬಂದು ಶಾಲಾ ಬದುಕು ಆರಂಭವಾಗಿದೆ. ಈಗ ಬೇರೆ ಬೇರೆ ಹಂತದಲ್ಲಿ ಕನ್ನಡ ಭಾಷಾಕಲಿಕೆಯತ್ತ ಯೋಚಿಸಬೇಕಾಗಿದೆ. ದುರದೃಷ್ಟವೆಂದರೆ ಮತ್ತೆ ಕರೋನಾ ಇನ್ನೊಂದು ರೂಪದಲ್ಲಿ ರೂಪಾಂತರಿಯಾಗಿಒಕ್ಕರಿಸುತ್ತಿದೆ!
ಅಂತರಂಗದ ಹಸಿವು ನುಡಿಯನ್ನು ಕಟ್ಟಿ ಬೆಳಗಿಸಲು ಅನುವು ಮಾಡಿಕೊಡುತ್ತದೆ. ಕನ್ನಡಕ್ಕಾಗಿಹೋರಾಡಲುನನ್ನಂಥ ಅನೇಕರು ಇದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂಬ ಅಪ್ಪಟ ಭಾಷಾ ಪ್ರೇಮಿ ನುಡಿಸೇವಕಅನಕೃ, ಮರಾಠಿಮಾತೃಭಾಷೆಯಜಯದೇವಿತಾಯಿಲಿಗಾಡೆ
ಸಾಹಿತ್ಯ ಸಮ್ಮೇಳನಗಳಿಗೆ ಭವ್ಯ ಪರಂಪರೆ ಇದೆ. ಆದರೆ ಇಂಥ ಸಮ್ಮೇಳನಗಳಆಶಯಗಳುಜಾರಿಯಾಗಬೇಕು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಕ್ಕೊತ್ತಾಯಗಳಿಗೆ ಮಾನ್ಯತೆ ಸಿಕ್ಕಿ ಅದಕ್ಕೆ ಕಾಯಕಲ್ಪ ಒದಗಿದಾಗ ಮಾತ್ರ ನಮ್ಮ ಅಂತರಂಗದ ಹಸಿವಿನ ಶಕ್ತಿಗೆ ಸಾರ್ಥಕತೆ ದೊರೆಯುವ ಸಾಧ್ಯತೆ. ಹಾಗಾಗಿ ಯಾವುದೇ ಹಂತದಲ್ಲೂಧೈರ್ಯಗೆಡದೆಹೋರಾಡುವ ಛಲ ಬಲ ಎರಡೂ ಆಗಿ ಕನ್ನಡದ ನುಡಿತೇರನ್ನುಎಳೆಯಬೇಕಾಗಿದೆ. ಆದರೆ ಕೆರಳಿಸುವ ಉದ್ದೇಶಿಸುವಭಾಷಾ ವೈರತ್ವ ಬೇಕಾಗಿಲ್ಲ. ನಮಗೆ ಶಾಂತಿ ಸಹಬಾಳ್ವೆ, ಸೌಹಾರ್ದತೆಯಸಂಪದವಾಗಿಕನ್ನಡವು ಶಾಶ್ವತವಾಗಿ ಬಾಳ ಬೇಕಿದೆ. ಚಿನ್ನದ ಕಸ್ತೂರಿಯಾದಕನ್ನಡವುಅನ್ನದಭಾಷೆಯೂ ಆಗಿರುವುದರಿಂದ ಆ ನುಡಿ ತಾಯಿಗೆ ಗೌರವ ತರುವ ಕೆಲಸ ನಿಷ್ಠೆಯಿಂದ ಆಗಲಿ, ಆಗೇಆಗುತ್ತದೆಂಬ ಗಟ್ಟಿ ನಂಬಿಕೆ ನನ್ನಲ್ಲಿ ಸದಾ ಇದ್ದೇ ಇದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ/ಅನುದಾನಪಡೆದುಕೊಳ್ಳುತ್ತಿರು
“ಸರ್ವ ಜನಾಂಗದ ಶಾಂತಿಯತೋಟವಾಗಿ” ನಾಡು ನಳನಳಿಸಲಿ; ಕನ್ನಡ ತಾಯಿಯ ಗೇಹ ಹಾಗೂ ಅವಳ ಮಕ್ಕಳ ದೇಹ ಮನಸ್ಸುಗಳುಒಗ್ಗೂಡಿ ಬಾಳಿ ನಾಡಿನ ಏಳಿಗೆಗಾಗಿಶ್ರಮಿಸಲಿ ಎಂಬ ನಿರ್ಮಲವಾದ ಕಾಳಜಿ ನನ್ನದಾಗಿದೆ.
ನೇಸರು ನೀಲಾಂಬರದಲಿ ನಗು ನಗುವ ತನಕ
ಕನ್ನಡದ ಅಸ್ತಿತ್ವ ಉಳಿಯಲಿ
ಕನ್ನಡದ ಅಸ್ಮಿತೆ ಅಳಿಯದಿರಲಿ.
ಕಾವೇರಿ ಕೃಷ್ಣೆಯರು ಹರಿ ಹರಿವ ತನಕ
ಕನ್ನಡದ ಚಿರಂತನತೆಹಸಿರಾಗಿರಲಿ;
ಬೇಲೂರು ಹಳೆಬೀಡು ಹೊಳೆ ಹೊಳೆವ ತನಕ
ಕನ್ನಡದ ಕೀರ್ತಿ ಪತಾಕೆ ಹಾರುತಿರಲಿ!
ಬೆಳ್ಗೊಳದ ಗೊಮ್ಮಟನ ನಿಲುವಿರುವ ತನಕ
ಕನ್ನಡದ ಹೆಸರು ಪಸರಿಸುತಿರಲಿ!
* * *
ಶ್ರೀಃ
ನಿವೇದನೆ
ಕನ್ನಡಿಗರಎದೆಯಾಳದಲ್ಲಿ
ಮೊಳಗುತಿರಲಿ ಕನ್ನಡ;
ಕನ್ನಡದ ನೆಲ ನೀರು ಗಾಳಿಯಲ್ಲಿ
ಉಸಿರಾಡಲಿ ಕನ್ನಡ,
ಕನ್ನಡದ ಬಾಂದಳದಲ್ಲಿ
ಅನುರಣಿಸಲಿ ಕನ್ನಡ;
ಮನೆ ಮನೆಯ ಕಂದನ
ನಾಲಗೆಯಲ್ಲಿ ನಲಿಯಲಿ,
ನಲ್ಗನ್ನಡ ಒಳ್ಗನ್ನಡ!
ತನಿಗನ್ನಡ ಇನಿಗನ್ನಡ!
ಸಿರಿಗನ್ನಡಂ... ಗೆಲ್ಗೆ
ಸಿರಿಗನ್ನಡಂ... ಬಾಳ್ಗೆ
ಸಿರಿಗನ್ನಡಂ... ಏಳ್ಗೆ
ಡಾ. ದೊಡ್ಡರಂಗೇಗೌಡ
ಸರ್ವಾಧ್ಯಕ್ಷರು
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
0 Comments