Ticker

6/recent/ticker-posts

Ad Code

Responsive Advertisement

ಬಸ್‌ ಹತ್ತುವ ವೇಳೆ ಚಕ್ರಕ್ಕೆ ಸಿಲುಕಿದ ವಿದ್ಯರ‍್ಥಿನಿ

ರಾಮನಗರ: ವಿದ್ಯರ‍್ಥಿನಿಯೊಬ್ಬರು ಹತ್ತುವ ವೇಳೆ ಬಸ್‌ ಮುಂದಕ್ಕೆ ಚಲಿಸಿದ ಹಿನ್ನೆಲೆಯಲ್ಲಿ ಆಕೆಯ ಕಾಲು ಚಕ್ರಕ್ಕೆ ಸಿಲುಕಿ ಅಪಘಾತಗೊಂಡ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲ ಕ್ರಾಸ್ ನಲ್ಲಿ ನಡೆದಿದೆ.


ಬಿಡದಿಯ ಜ್ಞಾನವಿಕಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ (೧೯) ಗಾಯಗೊಂಡ ವಿದ್ಯರ‍್ಥಿನಿ. ಆಕೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತುವ ವೇಳೆ ಬಸ್‌ ಮುಂದಕ್ಕೆ ಚಲಿಸಿತ್ತು. ಏಕಾಏಕಿ ಮುಂದೆ ಹೋಗಿದ್ದರಿಂದ ಆಕೆ ಆಯತಪ್ಪಿ ಕೆಳಗೆ ಕುಸಿದಳು. ಅಷ್ಟು ಹೊತ್ತಿಗೆ ಚಾಚಿಕೊಂಡಿದ್ದ ಆಕೆಯ ಕಾಲುಗಳ ಮೇಲೆಯೇ ಚಕ್ರ ಹಾದು ಹೋಗಿದೆ. ಚಾಲಕನ ನರ‍್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದೆ. ವಿದ್ಯರ‍್ಥಿನಿ ಜೀವಾಪಾಯದಿಂದ ಪಾರಾಗಿದ್ದಾಳೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments

Ad Code

Responsive Advertisement