ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ವಿವಿಧ ರಾಜ್ಯಗಳಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅತ್ಯುತ್ತಮ ವಿಧಾನ ಪರಿಷತ್/ವಿಧಾನ ಸಭೆ ಪ್ರಶಸ್ತಿಗೆ ಮಾನದಂಡಗಳನ್ನು ರೂಪಿಸುವ ಸಮಿತಿ ದಿನಾಂಕ 7-11-2022 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿತು.
ಸಮಿತಿ ಅಧ್ಯಕ್ಷರು ಆದ ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ದೆಹಲಿ ವಿಧಾನ ಸಭಾಧ್ಯಕ್ಷ ಶ್ರೀರಾಮ ನಿವಾಸ್ ಗೋಯೆಲ್, ಅಸ್ಸಾಂ ವಿಧಾನ ಸಭಾಧ್ಯಕ್ಷ ಬಿಸ್ವಜಿತ್ ದೈಮೇರಿ,ತಮಿಳುನಾಡು ವಿಧಾನ ಸಭಾಧ್ಯಕ್ಷ ಅಪ್ಪವ್ ಭಾಗವಹಿಸಿದ್ದರು.
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ), ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಇದೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಉಪಸ್ಥಿತರಿದ್ದರು.

0 Comments