Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್. (ರಿ.) ವತಿಯಿಂದ "ಸಂಗೀತ ಸಮ್ಮೇಳನ"

ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್. (ರಿ.) ವತಿಯಿಂದ ಅಕ್ಟೋಬರ್ 29 ಮತ್ತು 30 ಎರಡು ದಿನಗಳ ಕಾಲ ನಾಲ್ಕನೇ ಸಂಗೀತ ಸಮ್ಮೇಳನವನ್ನು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದು, ಅದರ ವಿವರಗಳು ಈ ರೀತಿ ಇವೆ :

ಅಕ್ಟೋಬರ್ 29, ಶನಿವಾರ : ಸಂಜೆ 5 ಗಂಟೆಗೆ, ಉದ್ಘಾಟನೆ--ಶ್ರೀ ಎಂ. ಅನಂತ್ (ಅಧ್ಯಕ್ಷರು, ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್) ಹಾಗೂ ಶ್ರೀ ಎಂ.ವಿ. ಸತ್ಯನಾರಾಯಣ (ಉಪಾಧ್ಯಕ್ಷರು, ಶ್ರೀ ತ್ಯಾಗರಾಜ ಗಾನ ಸಭಾ). ಸಮ್ಮೇಳನದ ಅಧ್ಯಕ್ಷತೆ : ಡಾ|| ಹೆಚ್.ಎಸ್. ಅನುಸೂಯ ಕುಲಕರ್ಣಿ, ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ : ಶ್ರೀ ಬಿ.ಕೆ. ರಘು. ನಂತರ ಜುಗಲ್ ಬಂದಿ : ಸುಮಾ ಹೆಗ್ಡೆ (ಸಂತೂರ್),  ವಿ|| ಜಾನ್ಹವಿ ಬಿ. ಸಿಂಗ್ (ಅಂಕ್ಲುಂಗ್) ಮತ್ತು ಸಂಗಡಿಗರು. 6-45ಕ್ಕೆ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಮತ್ತು ಸಂಗಡಿಗರಿಂದ ಅಂಕ್ಲುಂಗ್). 


ಅಕ್ಟೋಬರ್ 30, ಭಾನುವಾರ : ಬೆಳಗ್ಗೆ 10 ಗಂಟೆಗೆ-ಅಧ್ಯಯನ ಮತ್ತು ವಿಚಾರ ಗೋಷ್ಠಿ : ಡಾ|| ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ. ವಿಷಯ-'ಪಲ್ಲವಿ' : ಕಲಿಕೆಯ ಉಪಾಯಗಳು ಮತ್ತು ಪಲ್ಲವಿಯ ವೈವಿಧ್ಯಗಳು. 11-30- -ವಿಷಯ : ಸಂಗೀತ ಸಂಯೋಜನೆಯ ವಿಧಾನ ಹಾಗೂ ಅನುಭವಗಳು ಶಾಸ್ತ್ರೀಯ ಮತ್ತು ಸಮಕಾಲಿನ ಹಿನ್ನೆಲೆ ವಿಷಯವಾಗಿ ಕರ್ನಾಟಕ ಕಲಾಶ್ರೀ ವಿ|| ತಿರುಮಲೆ ಶ್ರೀನಿವಾಸ್. 

ಸಂಜೆ 5:00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಶ್ರೀ ಪಟ್ಟಾಭಿರಾಂ ಪಂಡಿತ್ (ಗಾಯನ), ವಿ|| ಬಿ ಕೆ ರಘು (ಪಿಟೀಲು), ವಿ|| ಕೆ ಯು ಜಯಚಂದ್ರ ರಾವ್ (ಮೃದಂಗ), ವಿ|| ಗಿರಿಧರ್ ಉಡುಪ ಯು ಎನ್ (ಘಟ).

ಪ್ರಶಸ್ತಿ ಪ್ರದಾನ : ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಂ ಅನಂತ್ ಅವರ ಅಧ್ಯಕ್ಷತೆಯಲ್ಲಿ, ಸಂಗೀತ ಸಮ್ಮೇಳನದ ಅಧ್ಯಕ್ಷರಾದ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಅವರಿಗೆ "ಶೃತಿಲಯ ಭಾರತಿ" ಪ್ರಶಸ್ತಿ ಪ್ರದಾನ ಹಾಗೂ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷರಾದ ವಿ|| ಬಿ. ಕೆ. ರಘು ಅವರಿಗೆ "ಸ್ವರಲಯ ಭಾರತಿ" ಪ್ರಶಸ್ತಿ ಪ್ರದಾನ. ಈ ಸಮಾರಂಭದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು : ಡಾ|| ಟಿ. ಎಸ್. ಸತ್ಯವತಿ (ಸಂಗೀತ ಮತ್ತು ಸಂಸ್ಕೃತ ವಿದುಷಿ), ಎಲ್. ಎಸ್. ಶ್ಯಾಮಸುಂದರ ಶರ್ಮ. (ರಾಷ್ಟ್ರ ಪ್ರಶಸ್ತಿ ವಿಜೇತರು, ಅಧ್ಯಕ್ಷರು : ಸ್ಮಾರ್ಟ್ ಸ್ಕೂಲ್, ಮಾಚೋಹಳ್ಳಿ. ನಂತರ ಸಮಾರೋಪ ಸಮಾರಂಭ.

Post a Comment

0 Comments

Ad Code

Responsive Advertisement