ಬೆಂಗಳೂರು : ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಶುಭ ದಿನದಂದೇ, ಜನಪ್ರಿಯ ಶಾಸಕರು ಹಾಗೂ ಸಚಿವರಾದ ಮುನಿರತ್ನರವರ ಆತ್ಮೀಯರಾಗಿರುವ ಜೆ.ಪಿ.ಪಾರ್ಕ್ ವಾರ್ಡ್ ನ ಸುತ್ತಮುತ್ತಲಿನಲ್ಲಿ ಸಮಾಜ ಸೇವೆಗೆ ಹೆಸರುವಾಸಿಯಾದ ಶ್ರೀ ಧನಲಕ್ಷ್ಮೀ ಕನ್ಸ್ಟ್ರಟ್ರಕ್ಷನ್ ನ ಮಾಲೀಕರು, ಬಿಜೆಪಿ ನಾಯಕರು ಆಗಿರುವ ಎಸ್. ರಮೇಶ್ ರವರ 58 ನೇ ವರ್ಷದ ಹುಟ್ಟು ಹಬ್ಬವನ್ನು ಜೆ.ಪಿ.ಪಾರ್ಕ್ ವಾರ್ಡ್ ನ ಬಿಜೆಪಿ ಮುಖಂಡರಾದ ಶ್ರೀಮತಿ ಸುನಂದ ಕೆ. ಬೋರೇಗೌಡರವರ ಸಮ್ಮುಖದಲ್ಲಿ, ಸಂತೋಷ್, ಜೆ.ಪಿ.ಪಾರ್ಕ್ ವಾರ್ಡ್ ಬಿಜೆಪಿ ಅಧ್ಯಕ್ಷ ಶ್ರೀಧರ್ ಜಿ.ಯಾಜಿ, ಸೋಮಶೇಖರ್, ರಾಜ ನಂಜುಂಡಯ್ಯ ಮುಂತಾದವರ ಉಪಸ್ಥಿತಿಯಲ್ಲಿ ಜೆ.ಪಿ.ಪಾರ್ಕ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಹಾಗೂ ರಮೇಶ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ವಾರ್ಡಿನ ಬಿಜೆಪಿ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಶುಭ ಕೋರಿದರು.





0 Comments