*ನೇಕಾರರ ವೈಭವ ಕಾರ್ಯಕ್ರಮ ಹಾಗೂ ಗಾಳಿಪಟ ಉತ್ಸವವನ್ನು ಉದ್ಘಾಟಿಸಿದ ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ*
ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಭಾನುವಾರ ತಮ್ಮ ಕ್ಷೇತ್ರದಲ್ಲಿ ನಡೆದ ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಾರಾಯಣ ಫೌಂಡೇಶನ್ ಹಾಗೂ ವೀವರ್ಸ್ ಸಿಟಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಫೋರಂ ವತಿಯಿಂದ ಗೊಟ್ಟಿಗೆರೆಯಲ್ಲಿ ಆಯೋಜಿಸಿದ್ದ ‘ನೇಕಾರರ ವೈಭವ ಮತ್ತು ಗಾಳಿಪಟ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಬಳಿಕ ಬೇಗೂರಿನಲ್ಲಿ ನಡೆದ ಬೇಗೂರು ಒಕ್ಕಲಿಗರ ಸಂಘದ 518ನೇ ಕೆಂಪೇಗೌಡ ಜಯಂತಿ ಹಾಗೂ ಏಳನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.





0 Comments