Ticker

6/recent/ticker-posts

Ad Code

Responsive Advertisement

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ:ಹೊಂಬೇಗೌಡ ವಾರ್ಡ್ ನಲ್ಲಿ ಸ್ಲಂ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆಯನ್ನು ಶಾಸಕರಾದ ಉದಯಗರುಡಾಚಾರ್ ರವರು,ಗರುಡಾ ಫೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಮೇದಿನಿ ಗರುಡಾಚಾರ್,ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಶ್ರೀಮತಿ ಭಾಗ್ಯವತಿ ಅಮರೇಶ್ ರವರು,ಬಿ.ಜೆ.ಪಿ.ವಾರ್ಡ್ ಅಧ್ಯಕ್ಷರಾದ ಅಜಿತ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಟ್ರಸ್ಟಿಗಳಾದ ಅಂಬರೀಶ್ (ಅಮರೇಶ್)ರವರು ವಿತರಿಸಿದರು


ಶಾಸಕರಾದ ಉದಯಗರುಡಾಚಾರ್ ರವರು ಮಾತನಾಡಿ ಸಮಾಜಮುಖಿಯಾಗಿ ಜನರ ಸೇವೆ ಮಾಡಿದರೆ ಸಮಾಜದ ಅಭಿವೃದ್ದಿಯಾಗುತ್ತದೆ.

ಪ್ರಧಾನಿ ನರೇಂದ್ರಮೋದಿರವರ ಡಿಜಿಟಲ್ ಇಂಡಿಯ ಪ್ರತಿಯೊಬ್ಬರು ತಂತ್ರಜ್ಞಾನದಲ್ಲಿ ಸಾಧನೆ ಮಾಡಬೇಕು ಎಂಬುದು ಆಶಯವಾಗಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ತಂತ್ರಜ್ಞಾನ ಹೊಂದಲು ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ.

ಶಿಕ್ಷಣ ,ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ಶ್ರೀಮತಿ ಭಾಗ್ಯವತಿ ಅಮರೇಶ್ ರವರು ಮಾತನಾಡಿ ಹೊಂಬೇಗೌಡನಗರ ವಾರ್ಡ್ ಬಿ.ಜೆ.ಪಿ.ಮತ್ತು ಸ್ಲಂ ಸಂಸ್ಥೆ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣ ಸಹಕಾರಿಯಾಗಿ,ತಂತ್ರಜ್ಞಾನದಲ್ಲಿ ಜ್ನಾನಭಿವೃದ್ದಿಗೆ ಉಚಿತವಾಗಿ ಕಂಪ್ಯೂಟರ್ ತರಭೇತಿ ಮತ್ತು ಉನ್ನತ  ಶಿಕ್ಷಣಕ್ಕೆ ಅನುಕೂಲಕ್ಕೆ ಇದುವರಗೆ 50ಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಸಾರ್ವಜನಿಕರಿಗೆ ಇ-ಶ್ರಾಮ್ ಕಾರ್ಡ್,ಲೇಬರ್ ಕಾರ್ಡ್,ಆಯುಷ್ಮಾನ್ ಹೆಲ್ತ್ ಕಾರ್ಡ್ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ನೋಂದಣೆ ಮಾಡಿಕೊಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿರವರು ಹೇಳಿದಂತೆ ದೇಶದ ಸೇವೆಗೆ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಮಾತು ನಮಗೆ ಸ್ಪೂರ್ತಿ,ಪೇರಣೆಯಿಂದ ಜನಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಲ್ಯಾಪ್ ಟಾಪ್ ಜೊತೆಯಲ್ಲಿ ಲ್ಯಾಪ್ ಬ್ಯಾಗ್ ವಿತರಿಸಲಾಯಿತು.

Post a Comment

0 Comments

Ad Code

Responsive Advertisement