ಮಲ್ಲೇಶ್ವರದ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 4 ರಿಂದ ಆಗಸ್ಟ್ 15ರ ವರೆಗೆ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಮಹೋತ್ಸವದ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಆಗಸ್ಟ್ 4 : ಬೆಳಗ್ಗೆ ಗಣಹೋಮ, ಸಂಜೆ- 6-30ಕ್ಕೆ ಶ್ರೀ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಸಮಾರಂಭದ ಉದ್ಘಾಟನೆ ಹಾಗೂ ಆಶೀರ್ವಚನ,
*ಆಗಸ್ಟ್* *5* : ಬೆಳಗ್ಗೆ-ಶ್ರೀ ವಿಷ್ಣುಸಹಸ್ರನಾಮ ಹೋಮ ಮತ್ತು ಧನ್ವಂತರಿ ಹೋಮ, ಸಂಜೆ-ಶ್ರೀ ಪ್ರಶಾಂತ್ ಭಾರ್ಗವಾಚಾರ್ ಅವರಿಂದ ಪ್ರವಚನ,
*ಆಗಸ್ಟ್ 6* : ಬೆಳಗ್ಗೆ- ವಾಯುಸ್ತುತಿ ಹೋಮ ಮತ್ತು ರಾಘವೇಂದ್ರ ಅಷ್ಟಾಕ್ಷರ ಹೋಮ, ಸಂಜೆ-ವಿ|| ಎಂ.ಎಸ್. ಶೀಲಾ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ,
*ಆಗಸ್ಟ್* *7* : ಸಂಜೆ-ಶ್ರೀ ಪುತ್ತೂರು ನರಸಿಂಹನಾಯಕ್ ಮತ್ತು ಸಂಗಡಿಗರಿಂದ ದಾಸವಾಣಿ,
*ಆಗಸ್ಟ್ 8* : ಸಂಜೆ-ಶ್ರೀ ಕಲ್ಲಾಪುರ ಪವಮಾನಾಚಾರ್ ರಿಂದ ಪ್ರವಚನ,
*ಆಗಸ್ಟ್* *9* : ಸಂಜೆ-ಶ್ರೀ ಕಲ್ಯಾ ಶ್ರೀಕಾಂತಾಚಾರ್ ರಿಂದ ಪ್ರವಚನ,
*ಆಗಸ್ಟ್ 10* : ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಸಂಜೆ-ಶ್ರೀಮತಿ ಕೆ. ಭಾರ್ಗವಿ ಮತ್ತು ಸಂಗಡಿಗರಿಂದ ಗಾಯನ,
*ಆಗಸ್ಟ್ 11* : ಬೆಳಗ್ಗೆ ಯಜುರ್ವೇದ ಉಪಾಕರ್ಮ, ಸಂಜೆ-ಶ್ರೀ ಚಂದ್ರಶೇಖರ್ ಆಚಾರ್ಯ ರಿಂದ ಪ್ರವಚನ,
*ಆಗಸ್ಟ್ 12* : ಸಂಜೆ- ಶ್ರೀ ಬ್ರಹ್ಮಣ್ಯಾಚಾರ್ ರಿಂದ ಪ್ರವಚನ,
*ಆಗಸ್ಟ್ 13* : ಸಂಜೆ-ಶ್ರೀ ಆನಂದತೀರ್ಥಾಚಾರ್ ಮಾಳಗಿ ಇವರಿಂದ ಪ್ರವಚನ,
*ಆಗಸ್ಟ್ 14* : ಸಂಜೆ-ಡಾ|| ವಿನಾಯಕಾಚಾರ್ ರಿಂದ ಪ್ರವಚನ,
*ಆಗಸ್ಟ್* *15* : ಸಂಜೆ-ಶ್ರೀ ಅಂಬರೀಶಾಚಾರ್ ರಿಂದ ಪ್ರವಚನ.
ಆಗಸ್ಟ್ 16 ಮತ್ತು 17 : ಶ್ರೀ ಆಯನೂರು ಮಧುಸೂದನಾಚಾರ್ ರಿಂದ ಪ್ರವಚನ,
ಆಗಸ್ಟ್ 19 : ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಧ್ಯಾಹ್ನ 3-30ಕ್ಕೆ ಚಿಕ್ಕಮಕ್ಕಳಿಂದ ಶ್ರೀಕೃಷ್ಣ ವೇಷ ಸ್ಪರ್ಧೆ, ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ.

0 Comments